ಜಲಸಿರಿ ಯೋಜನೆ ಕಾಮಗಾರಿಗೆ ಚಾಲನೆ

ದಾವಣಗೆರೆ:

      ಸಮೀಪದ ಹಳೇ ಕುಂದುವಾಡದಲ್ಲಿ ದಿನದ 24 ಗಂಟೆ ನೀರು ಪೂರೈಸುವ ಜಲಸಿರಿ ಯೋಜನೆಯ ಕಾಮಗಾರಿಗೆ ಪಾಲಿಕೆ ಸದಸ್ಯ ಹೆಚ್ ತಿಪ್ಪಣ್ಣ ಚಾಲನೆ ನೀಡಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ತಿಪ್ಪಣ್ಣ, ಜಲಸಿರಿ ಅನುಷ್ಠಾನದ ಬಳಿಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಈಗ ಪೈಪ್ ಲೈನ್ ಅಳವಡಿಕೆಗೆ ಚಾಲನೆ ನೀಡಲಾಗಿದ್ದು, ಓವರ್ ಹೆಡ್ ಟ್ಯಾಂಕ್ ಮೂಲಕ ಪ್ರತಿ ಮನೆಗಳಿಗೆ ನೀರು ಪೂರೈಕೆಯಾಗಲಿದೆ. ಇದಕ್ಕೆ ಮೀಟರ್ ಅಳವಡಿಕೆ ಮಾಡಲಾಗುತ್ತದೆ. ಆ ಮೀಟರ್ ಮೂಲಕ ಸಾರ್ವಜನಿಕರು ಬಳಸುವ ನೀರಿನ ಆಧಾರದ ಮೇಲೆ ಬಿಲ್ ಬರಲಿದೆ ಎಂದರು.

       ಗ್ರಾಮದ ಮುಖಂಡ ಹಂಚಿನಮನೆ ಮಂಜಪ್ಪ ಮಾತನಾಡಿ, ಈ ಹಿಂದೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿತ್ತು. ಇದನ್ನು ಗಮನಿಸಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಜಲಸಿರಿ ಯೋಜನೆ ಜಾರಿಗೆ ತರುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದ್ದಾರೆ ಎಂದರು.

         ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಹೆಚ್.ಜಿ.ದೊಡ್ಡಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ಜೆ ಮಾರುತಿ, ಷಣ್ಮುಖಪ್ಪ, ಮಂಜುನಾಥ್, ನಿಂಗಪ್ಪ, ಪ್ರಕಾಶ್, ಮಾಲತೇಶ್, ರಾಜೂ ಕರೂರು, ಮಧುನಾಗರಾಜ್, ಪ್ರಭು, ಸುಯೋಜ್ ಕಂಪನಿಯ ನರಸಿಂಹಮೂರ್ತಿ, ಸೋಮಶೇಖರ್ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link