ಸಿದ್ದರಾಮಯ್ಯಗೆ ಹೊಡೆತ ಕೊಡಲು ಸಜ್ಜಾದ ಜೆಡಿಎಸ್

ಬೆಂಗಳೂರು

       ನಿನ್ನೆಯವರೆಗೆ ನಟ ನಿಖಿಲ್ ಕುಮಾರಸ್ವಾಮಿ ರಾಜಕೀಯ ಪ್ರವೇಶ ಅನುಮಾನವಾಗಿಯೇ ಉಳಿದಿತ್ತು. ಆದರೆ ನಿಖಿಲ್‍ರಾಜಕೀಯಕ್ಕೆ ಬರುವ ಸೂಚನೆ ದಟ್ಟವಾಗಿದ್ದು, ಮಂಡ್ಯ ಇಲ್ಲವೇ ಮೈಸೂರಿನಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ.

        ಒಂದೆಡೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಇನ್ನೊಂದೆಡೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಇಂದೇ ಮಾಧ್ಯಮಗಳ ಮುಂದೆ ನಿಖಿಲ್ ರಾಜಕೀಯ ಪ್ರವೇಶದ ಮಾತನಾಡುತ್ತಿದ್ದಾರೆ. ಆದರೆ ನಿಖಿಲ್ ಸ್ಪರ್ಧೆ ವಿಚಾರ ಕಾಂಗ್ರೆಸ್ ಪಾಲಿಗೆ ದೊಡ್ಡ ತಲೆಬಿಸಿಯಾಗಿದೆ. ಆದರೆ ಸಚಿವ ಜಿ.ಟಿ. ದೇವೇಗೌಡ, ನಿಖಿಲ್ ಮೈಸೂರಿನಿಂದ ಸ್ಪರ್ಧಿಸುತ್ತಾರೆ ಎಂದು ತಿಳಿಸಿದ್ದು, ದೇವೇಗೌಡರು ಮತ್ತು ನಾವು ಕಾಂಗ್ರೆಸ್‍ಗೆ 12 ಕ್ಷೇತ್ರ ಬಿಟ್ಟು ಕೊಡಿ ಎಂದು ಕೇಳಿದ್ದೇವೆ. ಆದರೆ 12 ಕ್ಷೇತ್ರಗಳು ಬೇಕೆಂದು ಹಠ ಹಿಡಿಯುವುದಿಲ್ಲ ಎಂದಿದ್ದಾರೆ.

       ಸದ್ಯ ಸಿದ್ದರಾಮಯ್ಯ ಹಿಡಿತದಲ್ಲಿರುವ ಮೈಸೂರು ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕಣಕ್ಕಿಳಿಸಿ ಎರಡು ರೀತಿಯಲ್ಲಿ ಸಿದ್ದರಾಮಯ್ಯಗೆ ಹೊಡೆತ ಕೊಡಲು ಜೆಡಿಎಸ್ ನಿರ್ಧರಿಸಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಮೈಸೂರಿನಿಂದ ವಿಜಯ್ ಶಂಕರ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿತ್ತು. ಆದರೆ ನಿಖಿಲ್‍ರನ್ನು ಮೈಸೂರಿನಿಂದ ಕಣಕ್ಕಿಳಿಸಿ ಎನ್ನುವ ಒತ್ತಡವನ್ನು ಜೆಡಿಎಸ್ ವರಿಷ್ಠ ದೇವೇಗೌಡರಿಗೆ ತಂದಿದ್ದಾರೆನ್ನಲಾಗುತ್ತಿದೆ. ಇದಕ್ಕೆ ಎಷ್ಟರ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಮನ್ನಣೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap