ಬೆಂಗಳೂರು:
ವಿಧಾನ ಪರಿಷತ್ನಲ್ಲಿ ಖಾಲಿ ಇರುವ ನಾಮನಿರ್ದೇಶನದ ಒಂದು ಸ್ಥಾನವನ್ನು ಭರ್ತಿ ಮಾಡಲು ಜೆಡಿಎಸ್ ಇನ್ನು ಮೀನಾ ಮೇಷ ಎಣಿಸುತ್ತಿದೆ.
ಮೂರು ನಾಮನಿರ್ದೇಶನ ಸ್ಥಾನದಲ್ಲಿ ಎರಡು ಸ್ಥಾನವನ್ನು ಕಾಂಗ್ರೆಸ್ ಭರ್ತಿ ಮಾಡಿದೆ. ಮೈತ್ರಿ ಸರ್ಕಾರದ ಭಾಗವಾಗಿರುವ ಜೆಡಿಎಸ್ಗೆ ಒಂದು ಸ್ಥಾನವನ್ನು ಬಿಟ್ಟುಕೊಡಲಾಗಿದೆ. ಆದರೆ, ಇನ್ನು ಆ ಒಂದು ಸ್ಥಾನವನ್ನು ಭರ್ತಿ ಮಾಡಲು ಜೆಡಿಎಸ್ ವರಿಷ್ಠರು ವಿಳಂಬ ಮಾಡಿದ್ದು ಈಗ ಆ ಸ್ಥಾನವನ್ನು ಸೂಕ್ತ ವ್ಯಕ್ತಿಗೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಈ ಹಿಂದೆ ಇರುವ ಒಂದು ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ನಿರ್ಧರಿಸಿತ್ತು. ಆದರೆ, ಈಗ ತಮ್ಮ ಪಾಲಿನ ಸ್ಥಾನವನ್ನು ತಮ್ಮ ಪಕ್ಷದವರಿಗೆ ನೀಡಲು ತೀರ್ಮಾನಿಸಲಾಗಿದೆ. ಇರುವ ಒಂದು ಸ್ಥಾನಕ್ಕೆ ಹಲವರು ಪೈಪೋಟಿ ನಡೆಸಿದ್ದಾರೆ. ಆದರೆ, ಇದು ನಾಮನಿರ್ದೇಶನದ ಸ್ಥಾನವಾಗಿರುವುದರಿಂದ ಸೂಕ್ತ ಅಭ್ಯರ್ಥಿಯನ್ನು ನಿಯೋಜನೆ ಮಾಡುವ ಬಗ್ಗೆ ಪಕ್ಷದ ವರಿಷ್ಠ ದೇವೇಗೌಡರು ಚಿಂತನೆ ನಡೆಸಿದ್ದಾರೆ.
ಈಗಾಗಲೇ ಜೆಡಿಎಸ್ನಲ್ಲಿ ಪ್ರಮುಖವಾಗಿ ಎನ್.ಎಚ್. ಕೋನರೆಡ್ಡಿ, ವೈಎಸ್ವಿ ದತ್ತ ಅವರ ಹೆಸರು ಕೇಳಿಬರುತ್ತಿದೆ. ಇವರಿಗೆ ನೀಡಿದಲ್ಲಿ ಸಮರ್ಥವಾಗಿ ವಾದ ಮಂಡಿಸಲಿದ್ದಾರೆ ಎಂಬುದು ಪಕ್ಷದ ವರಿಷ್ಠರ ಅನಿಸಿಕೆ. ಆದರೆ, ದೇವೇಗೌಡರ ಮನಸ್ಸಿನಲ್ಲಿ ಗಿರಿಜನ ವಾಸಿಗಳ ಬದುಕಿಗಾಗಿ ಶ್ರಮಿಸುತ್ತಿರುವ ಡಾ. ಎಚ್. ಸುದರ್ಶನ್ ಅವರಿದ್ದಾರೆ. ಆದರೆ, ಸುದರ್ಶನ್ ಇದಕ್ಕೆ ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುದು ಇನ್ನು ಗೊತ್ತಾಗಿಲ್ಲ. ಸುದರ್ಶನ್ ಅವರು ಏನಾದರೂ ಒಪ್ಪದೇ ಇದ್ದಲ್ಲಿ ಮಧುಬಂಗಾರಪ್ಪ, ಎನ್.ಎಚ್. ಕೋನರೆಡ್ಡಿ, ವೈಎಸ್ವಿ ದತ್ತ ಅವರಲ್ಲಿ ಒಬ್ಬರ ಹೆಸರನ್ನು ಅಂತಿಮ ಮಾಡುವ ಸಾಧ್ಯತೆಯೂ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ