ಮಧುಗಿರಿ
ಜೆಡಿಎಸ್ ಎಂಬುದು ಜಾತಿಕೂಟದ ಪಕ್ಷವಾಗಿದ್ದು ಇಲ್ಲಿ ಆಚಿತರಿಕ ಪ್ರಜಾಪ್ರಭುತ್ವವೇ ಇಲ್ಲವಾಗಿದೆ. ಹಾಲಿ ಮಧುಗಿರಿಯ ಶಾಸಕರು ನಮ್ಮನ್ನು ಚುನಾವಣೆಯಲ್ಲಿ ಮಾತ್ರ ಬಳಸಿ ಕೊಂಡರು. ಈಗ ಪ್ರ್ರಾಮಾಣಿಕವಾಗಿ ಕೆಲಸ ಮಾಡಿದ ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಕೇವಲ ಅವರ ಸಮುದಾಯವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಎ.ಕೃಷ್ಣಪ್ಪನವರ ಸೋಲಿಗೂ ಇದೇ ಪಕ್ಷದವರೇ ನೇರ ಹೊಣೆಗಾರರಾಗಿದ್ದಾರೆ. ಇತ್ತೀಚೆಗೆ ತಾಲ್ಲೂಕಿನಲ್ಲಿ ನಡೆದ ಚುನಾವಣೆಗಳು ಸೇರಿದಂತೆ ಎಪಿಎಂಸಿ ಚುನಾವಣೆಯಲ್ಲಿ ನನಗೆ ಸಹಕಾರದ ನೀಡದೆ ಇದ್ದರಿಂದ ನಾನು ಸೋಲು ಅನುಭವಿಸಬೇಕಾಯಿತು.
ತಾಲ್ಲೂಕಿನ ಎಸ್.ಸಿ, ಎಸ್.ಟಿ ಹಾಗೂ ಹಿಂದುಳಿದ ವರ್ಗದವರಿಗೆ ಈ ಪಕ್ಷದಲ್ಲಿ ಮಾನ್ಯತೆ ಹಾಗೂ ಅಧಿಕಾರಗಳನ್ನು ಸಹ ನೀಡುತ್ತಿಲ್ಲ. ಕೇವಲ ಮತಕ್ಕಾಗಿ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಲಿ ಶಾಸಕರ ನಡೆ ಮತ್ತು ಇತ್ತೀಚೆಗೆ ನಡೆಯುತ್ತಿರುವ ಪಕ್ಷದ ಚಲನ ವಲನಗಳು ಬೇಸರ ಮೂಡಿಸಿವೆ. ಆದ್ದರಿಂದ ತಾಲ್ಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರು ರಾಜೀನಾಮೆಯನ್ನು ಪರಿಗಣಿಸಬೇಕೆಂದು ಮಾಜಿ ಗ್ರಾಪಂ ಸದಸ್ಯ ಹಾಗೂ ಯಾದವ ಸಮುದಾಯದ ಮುಖಂಡ ಸಿದ್ದಾಪುರದ ವಿ.ಈರಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
