ದಾವಣಗೆರೆ:
ನಗರದ ರೋಟರಿ ಬಾಲ ಭವನದಲ್ಲಿ ಜು.21ರಂದು ಬೆಳಿಗ್ಗೆ 10.30ಕ್ಕೆ ದಲಿತ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಕಾವ್ಯ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪರಿಷತ್ನ ಜಿಲ್ಲಾ ಉಪಾಧ್ಯಕ್ಷ ಜಿ.ಮುದ್ದುವೀರಸ್ವಾಮಿ ಹಿರೇಮಳಲಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಓ.ಎಸ್.ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷ ಡಾ.ಎಚ್.ಬಿ.ಕೊಲ್ಕೂರ ಉದ್ಘಾಟಿಸಲಿದ್ದಾರೆ. ಪರಿಷತ್ನ ರಾಜ್ಯ ಉಪಾಧ್ಯಕ್ಷ ಡಾ| ವೈ.ಎಂ.ಭಜಂತ್ರಿ ಆಶಯ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ಚಿಂತಕ ಡಾ.ಅರ್ಜುನ ಗೊಳಸಂಗಿ, ಪ್ರಗತಿಪರ ಚಿಂತಕ ಡಾ.ಎ.ಬಿ.ರಾಮಚಂದ್ರಪ್ಪ, ಪತ್ರಕರ್ತ ಸುಭಾಷ್ ಹೊದ್ಲೂರ, ದಲಿತ ಮುಖಂಡ ಆಲೂರು ನಿಂಗರಾಜ್, ರಾಜ್ಯ ಎಸ್ಸಿ-ಎಸ್ಟಿ ವಾರ್ಡನ್ಗಳ ಸಂಘದ ಗೌರವಾಧ್ಯಕ್ಷ ಮಂಜುನಾಥ್.ಕೆ ಭಾಗವಹಿಸಲಿದ್ದಾರೆ. ಪರಿಷತ್ ಜಿಲ್ಲಾ ಸಂಯೋಜಕ ಹುಚ್ಚಂಗಿ ಪ್ರಸಾದ್ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆಯುವ ಕಾವ್ಯ ಸಂಭ್ರಮದಲ್ಲಿ ದುರುಗೇಶ್ ಪೂಜಾರ್ ಹರಪನಹಳ್ಳಿ, ಪ್ರೀತಿ ಟಿ.ಎಸ್, ಪ್ರೊ.ಅಂಜಿನಪ್ಪ ಡಿ, ಸತೀಶ್ ಬಿ. ಮಲೆಮಾಚಿಕೆರೆ, ಟಿ.ವೈ.ಬಾಬು ತಣಿಗೆರೆ, ಶಾರದಮ್ಮ ಕಂಪಾಲಿ, ಗುರುದೇವ್ ಎಸ್.ಎಂ, ಲೋಹಿತ್ಕುಮಾರ್ ಎಸ್. ನಾಯಕ್, ಸಲ್ಮಾಬಾನು ಮುಲ್ಲನವರ್, ವೆಂಕಟೇಶ್ ಸಿ ಚಿಕ್ಕಹಾಲಿವಾಣ, ಪಾಪುಗುರು, ಅನಿಲ್ ಬಾಫುಲೆ, ಸುರೇಶ್ ಆರ್. ಜಮ್ಮಾಪುರ, ಮಹಾಂತೇಶ್ ಸಿ. ಕಂದಗಲ್ಲು, ರಾಜಪ್ಪ ಎಂ. ವ್ಯಾಸಗೊಂಡನಹಳ್ಳಿ ಮತ್ತಿತರರು ಸ್ವರಚಿತ ಕವಿತೆಗಳನ್ನು ವಾಚಿಸಲಿದ್ದಾರೆಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ನ ಜಿಲ್ಲಾಧ್ಯಕ್ಷ ಓ.ಎಸ್.ನಾಗರಾಜ್, ಕಾರ್ಯದರ್ಶಿ ಹುಚ್ಚಂಗಿ ಪ್ರಸಾದ್ ಸಂತೇಬೆನ್ನೂರು, ಸಲಹೆಗಾರರಾದ ಸತೀಶ್ ಅರವಿಂದ್, ಸಿದ್ದರಾಮಣ್ಣ ಬುಳಸಾಗರ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
