ಜುಂಜಪ್ಪ ಸ್ವಾಮಿ ಜಾತ್ರೆ

ಚೇಳೂರು

      ಚೇಳೂರು ಹೋಬಳಿ ಸಣಬನಹಳ್ಳಿಯಲ್ಲಿ ನೆಲಸಿರುವ ಜುಂಜಪ್ಪ ಸ್ವಾಮಿಯ ಬಂಡೆ ಪರಸೆಯಿಂದ ಹೆಸರುವಾಸಿಯಾಗಿರುವ ಜಾತ್ರೆ ಬಹಳ ವಿಜೃಂಭಣೆಯಿಂದ ನೆಡೆಯಿತು

       ಪ್ರತಿ ವರ್ಷಯುಗಾದಿ ಹಬ್ಬವಾದ ಮಾರನೆ ದಿನ ಈ ಜಾತ್ರೆ ಸುಮಾರು ವರ್ಷಗಳಿಂದ ನೆಡೆಯುತ್ತ ಬಂದಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಜಾತ್ರೆಗೆ ಹೋಬಳಿಯ ಸುತ್ತಮುತ್ತಲಿನ ಸಾವಿರಾರು ಭಕ್ತರು ತಮ್ಮ ಕುಟುಂಬದ ಜೊತೆಗೆ ಬಂದು ಸ್ವಾಮಿಗೆ ಪೂಜೆಯನ್ನು ಸಲ್ಲಿಸುತ್ತಿದ್ದಾರೆ.

       ಉದ್ಭವಾಗಿ ನೆಲೆಸಿರುವ ಈ ಜುಂಜಪ್ಪ ಸ್ವಾಮಿಯ ದೇವಾಲಯದ ಹತ್ತಿರವೇ ಸುಮಾರು ನೂರಾರು ವರ್ಷದಆಲದ ಮರವಿದೆ.ಈ ಬೃಹತ್ತಕಾರದ ಮರದ ನೆರಳಲ್ಲೆ ಈ ಜಾತ್ರೆ ನೆಡೆಯುತ್ತಿರುವುದುಒಂದು ವಿಶೇಷವಾಗಿದೆ.ಈ ಮರದತಂಪಾದಗಾಳಿಯ ಬೀಸುತ್ತಿರುವ ಮಧ್ಯಇರುವ ನೆರಳಿನಲ್ಲಿ ನಿಂತು ಭಕ್ತರುತಮ್ಮಕೊರಿಕೆಯನ್ನು ಸ್ವಾಮಿಯ ಹತ್ತಿರಶ್ರದ್ದಾಭಕ್ತಿಯಿಂದ ಬೇಡುತ್ತಿರುವ ದೃಶ್ಯಗಳು ಕಾಣುತ್ತಿತ್ತು . ಈ ಜಾತ್ರೆಗೆ ಒಮ್ಮೆ ಬಂದರೆ ಪ್ರತಿ ವರ್ಷ ಬರುವತಂಹ ವಾತವರಣ ನಿರ್ಮಾಣವಾಗಿದೆ ಇಲ್ಲಿ . ಭಕ್ತಾದಿಗಳಿಗೆ ದಾಸೋಹ . ಹೆಸುರುಬೆಳೆ ಹಾಗೂ ಇತರ ರೀತಿಯ ಪ್ರಸಾದವನ್ನು ನೀಡಲಾಗುತ್ತಿತು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link