ಕಾಡು ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಮಂಜುನಾಥ್ ..!!

ಬರಗೂರು

ವರದಿ: ವಲಿಸಾಬ್ ಬರಗೂರು

ಕಳೆದ ಸುಮಾರು ವರ್ಷಗಳಿಂದಲೂ ಯಾವೊಂದು ಕೆರೆಕಟ್ಟೆಗಳಲ್ಲೂ ಹನಿ ನೀರು ಕೂಡ ಶೇಖರಣೆಯಾಗುವಂತಹ ಮಳೆಯಾಗಿಲ್ಲ . ಕಾಡಿನ ಪ್ರಾಣಿ, ಪಕ್ಷಿಗಳು ದಾಹ ನೀಗಿಸಿಕೊಳ್ಳಲು ಜನರು ವಾಸವಿರುವತ್ತ ಬರುವ ಕಾಲಸನಿಹದಲ್ಲೆ ಇದೆ. ಪ್ರಾಣಿ-ಪಕ್ಷಿಗಳಿಗೆ ನೀರುಣಿಸಲು ಬೆಸ್ಕಾಂ ನೌಕರ ತನ್ನ ನೌಕರಿಯ ಬಿಡುವಿನ ವೇಳೆಯಲ್ಲಿ ಕೆಲ ಕೆರೆಕಟ್ಟೆಗಳಿಗೆ ಟ್ಯಾಂಕರ್ ಮೂಲಕ ನೀರು ಬಿಡುವ ಕಾಯಕ ರೂಢಿಸಿಕೊಂಡಿದ್ದಾರೆ.

        ಕಳೆದ ಹದಿಮೂರು ವರ್ಷಗಳಿಂದ ಹುಲಿಕುಂಟೆ ಹೋಬಳಿ ಬರಗೂರಿನ ಬೆಸ್ಕಾಂ ನೌಕರ ಎಲ್.ಮಂಜುನಾಥ್ ತನ್ನ ನೌಕರಿಯ ಜೊತೆಯಲ್ಲೇ ಬಿಡುವಿನ ವೇಳೆಯಲ್ಲಿ ಹಾಗೂ ರಜಾ ಸಮಯದಲ್ಲಿ ಪ್ರಾಣಿ-ಪಕ್ಷಿಗಳಿಗಾಗಿ ಕೆರೆ,ಕಟ್ಟೆಗಳಿಗೆ ಟ್ಯಾಂಕರ್ ಮೂಲಕ ನೀರನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ.

         ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯಲ್ಲಿ ಸತತವಾಗಿ ಹಲವು ವರ್ಷಗಳಿಂದ ಮಳೆ,ಬೆಳೆ ಇಲ್ಲದೆ ಬರಡು ಪ್ರದೇಶವಾಗಿದ್ದು, ಪ್ರಾಣಿ-ಪಕ್ಷಿಗಳು ನೀರಿಗೆ, ಆಹಾರಕ್ಕೆ ಪರದಾಡುವಂತಾಗಿದೆ. ಇವುಗಳಿಗಾಗಿ ಟ್ಯಾಂಕರ್ ಮೂಲಕ ನೀರು ಹರಿಸಿ ಮಾನವೀಯತೆ ಮೆರೆದಿದ್ದಾರೆ. ಎಲ್. ಮಂಜುನಾಥ್‍ರವರ ಸೇವೆ ಇದಷ್ಟಕ್ಕೆ ಸೀಮಿತವಾಗಿಲ್ಲ. ಬರಗೂರು ಸುತ್ತಮುತ್ತಲ ಹಲವಾರು ಗ್ರಾಮಗಳಲ್ಲಿ ಹಾಗೂ ಗೇಟ್‍ಗಳಲ್ಲಿ ನಿರ್ಮಿಸಿರುವ ತಂಗುದಾಣಗಳಲ್ಲಿನ ಕಸ ತೆಗೆದು ಸ್ವಚ್ಚತೆ ಮಾಡುವ ಮೂಲಕ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಇದೇ ರೀತಿ ಪ್ರತಿಯೊಬ್ಬರಲ್ಲೂ ಇಂತಹ ಭಾವನೆಗಳು ಮೂಡಿದಲ್ಲಿ ಉತ್ತಮ ಸಮಾಜ ನಿರ್ಮಾಣವಾಗುವುದರಲ್ಲ್ಲಿ ಸಂಶಯವಿಲ್ಲ.


      ತೀವ್ರ ಬರಗಾಲವನ್ನು ಏದುರಿಸುತ್ತಿರುವ ನಾವು ಮುಂದಿನ ದಿನಗಳಲ್ಲಿ ಹನಿ ನೀರಿಗೂ ಪರಿತಪಿಸುವ ಕಾಲ ಕಾಣುತ್ತಿದೆ. ಕಾಡು-ಪ್ರಾಣಿಗಳು ನೀರು ಇಲ್ಲದೆ ತಮ್ಮ ಜೀವವನ್ನೇ ಕಳೆದುಕೊಳ್ಳುತಿವೆ. ಪ್ರತಿಯೊಬ್ಬರು ಇಂತಹ ಕಾಯಕವನ್ನು ಮಾಡಿದರೆ ಮುಂದಿನ ಪಿಳಿಗೆಗೆ ನಾವು ಪುಸ್ತಕದಲ್ಲಿ ಜಿಂಕೆ, ಕರಡಿ, ನವಿಲು ಪ್ರಾಣಿಗಳನ್ನು ತೋರಿಸುವ ಕಾಲವು ದೂರವಿಲ್ಲ.
ಬೆಸ್ಕಾಂ ನೌಕರ ಎಲ್. ಮಂಜುನಾಥ್, ಬರಗೂರು.


   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link