ಮಧುಗಿರಿ
ರಾಜೇಂದ್ರ ಎಂ.ಎನ್
ಜೂನ್ ತಿಂಗಳಲ್ಲೆ ಆರಂಭವಾಗಬೇಕಾಗಿದ್ದ ಮುಂಗಾರು ಮಳೆ ಬಾರದೆ ಇರುವುದು ಈ ಬಾರಿ ಮಳೆ ಬರುವ ಮುನ್ಸೂಚನೆ ಇದೆ ಎಂಬ ಆಸೆಯೊಂದಿಗೆ ರೈತಾಪಿ ವರ್ಗ ಕೃಷಿಯನ್ನೇ ಅವಲಂಬಿಸಿ ಭಿತ್ತನೆ ಮಾಡಿ ಇದೀಗಾ ಮುಂಗಾರು ಬರಲಿಲ್ಲ ಭಿತ್ತಿದ್ದು ಬರುವುದಿಲ್ಲವೆಂಬುದು ರೈತರ ಆಳಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಯು ಬರಗಾಲದ ಬೀರು ಬೇಸಿಗೆಯಿಂದ ತಂಪಾಗಿಸುವಂತಹ ಲಕ್ಷಣವನ್ನು ತಾಲ್ಲೂಕು ಕಂಡಿತ್ತು ಆದರೆ ರೈತರು ತಮ್ಮ ಜಮೀನುಗಳಲ್ಲಿ ಅದೇ ಮುಂಗಾರು ಮಳೆಯನ್ನೇ ನಂಬಿ ಈಗ ಬೆಳೆಯಿಟ್ಟು ಕೈ ಚೆಲ್ಲಿ ಕೂರುವಂತಹ ಪರಿಸ್ಥಿತಿ ಎದುರಾಗುತ್ತಿದೆ.
ತಾಲ್ಲೂಕು ಯಾವುದೇ ಶಾಶ್ವತ ನದಿಗಳ ನೀರಾವರಿ ವ್ಯವಸ್ಥೆಗಳಿಲ್ಲದೆ ಸಂಪೂರ್ಣವಾಗಿ ಮಳೆಯಾಶ್ರಿತ ಪ್ರದೇಶವಾಗಿದೆ ಇಲ್ಲಿ ಮಳೆಯನ್ನೇ ನಂಬಿ ರೈತರು ಬೆಳೆಯನ್ನು ಬೆಳೆಯುವುದನ್ನು ಮಳೆರಾಯನ ಆರ್ಭಟದ ಸದ್ದು ಇಲ್ಲಾದಂತಾಗಿದೆ. ಇನ್ನೂ ಮಳೆಗಾಗಿ ಪೂರ್ವಿಕರು ಅನುಸರಿಸುತ್ತಿದ್ದ ಮಳೆರಾಯನನ್ನು ಮಾಡುವುದು ಕಪ್ಪೆ ಮತ್ತು ಕತ್ತೆಗಳ ಮದುವೆ ಇತ್ಯಾದಿ ಆಚರಣೆಗಳನ್ನು ಮಾಡುತ್ತಿದ್ದರು ಮಳೆರಾಯನ ಮುನಿಸು ಮಾತ್ರ ಕರಗಿಲ್ಲ.
ಇನ್ನೂ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸಬಲರಾಗಿರುವ ರೈತರು ವಂಶ ಪರಾಂಪರಗತವಾಗಿ ಬಂದಂತಹ ಜಮೀನುಗಳ ಬರಿದು ಮಾಡಬಾರದೆಂಬ ಉದ್ದೇಶದಿಂದ ಎಕರೆಗಟ್ಟಲೆ ಭೂಮಿಯಲ್ಲಿ ಮನೆ ಅಥವಾ ದನಕರುಗಳಿಗಾದರೂ ಮೇವು ದೊರೆಯಲಿ ಎಂದು ಸಾವಿರಾರು ಅಡಿ ಆಳದ ವರೆಗೆ ಬೋರ್ ವೆಲ್ಗಳನ್ನು ಕೊರೆಸಿ ಸ್ವಲ್ಪ ಮಟ್ಟಿನ ನೀರನ್ನು ಕಂಡು ಅದೇ ನೀರಿನಲ್ಲಿ ಕುಂಟೆಗಳ ಲೆಕ್ಕಾಚಾರದಲ್ಲಿ ವ್ಯವಸಾಯ ಮಾಡುವಂತಹ ವಾತವರಣವನ್ನು ಸೃಷ್ಟಿಸಿ ಕೊಂಡಿದ್ದಾರೆ.
ತಾಲ್ಲೂಕಿನಲ್ಲಿನ ರೈತರು ಆರ್ಥಿಕ ಬೆಳೆಯನ್ನಾಗಿ ಶೇಂಗಾ ಹಾಗೂ ಜೋಳವನ್ನೇ ಹೆಚ್ಚಾಗಿ ಬೆಳೆಯುತ್ತಿರುವುದು ಸಾಮಾನ್ಯ ಆದರೆ ಜೊತೆಯಲ್ಲಿ ಹಳೆಯ ಅವೈಜ್ಞಾನಿಕತೆಯಿಂದ ಕೂಡಿದ ಪದ್ಧತಿಗಳನ್ನು ಆಳವಡಿಸಿಕೊಂಡಿದ್ದಾರೆ. ರಾಗಿ, ಭತ್ತ, ರೇಷ್ಮೆ ಬೆಳೆಗಳನ್ನು ರೈತ ಬೆಳೆಯುತ್ತಾ ಜೀವನ ಸಾಗಿಸುತ್ತಾ ಸಾಲದ ಹೊರೆಯಿಂದ ಇನ್ನೂ ಹೊರ ಬರಲು ಆಗುತ್ತಿಲ್ಲಾ.
ಕಳೆದ ಬಾರಿ ಈ ಅವಧಿಯು ಸಹ ಇದೇ ಪರಿಸ್ಥಿತಿಯನ್ನು ತಾಲ್ಲೂಕು ಕಂಡಿತ್ತು ಈಗಾಗಲೇ ಕೆಲ ದಿನಗಳ ಹಿಂದೆ ಸುರಿದ ಮಳೆಯು ಬೆಳೆಯನ್ನು ಈಡುವಂತಹ ಸನ್ನೀವೇಶ ಕಲ್ಪಿಸಿ ಈಗ ಲಭ್ಯವಾಗಬೇಕಾಗಿದ್ದ ಮುಂಗಾರು ಕೈಕೊಡುತ್ತಿದ್ದು ಇನ್ನೂ ಹಿಂಗಾರಿನ ಪರಿಸ್ಥಿತಿ ಏನಾಗಬಹುದೆಂಬ ಯೋಚನೆಯಲ್ಲಿ ದಿನ ದೂಡ ಬೇಕಾದ ಅನಿವಾರ್ಯತೆ ಎದುರಾಗಿ ಬೆಳೆ ಬೆಳೆಯುವ ಸಲುವಾಗಿ ರೈತರು ತಮ್ಮ ಜಮೀನುಗಳನ್ನು ಉಳುಮೆ ಮಾಡಿ ಮಳೆಗಾಗಿ ಕಾದು ಕುಳಿತ್ತಿದ್ದಾರೆ.
ತಾಲ್ಲೂಕಿನಲ್ಲಿ ಈಗಾಗಲೇ ಬಹುತೇಕವಾಗಿ ರೈತರು ತಮ್ಮ ಜಮೀನುಗಳನ್ನು ಟ್ಯಾಕ್ಟರ್ ಗಳಿಗೆ ಒಂದು ಗಂಟೆಗೆ 800 ರೂ ಜಮೀನುಗಳಲ್ಲಿ ಕೆಲಸ ಮಾಡಲು ಜಮೀನು ಮಾಲೀಕ ದಿನವೊಂದಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿ ಗಂಡಾಳಿಗೆ 400ರೂ ಹೆಣ್ಣಾಳಿಗೆ 150ರೂ ಕೂಲಿ ಹಣ ನೀಡಬೇಕು ಇನ್ನೂ ಹಸುಗಳಿಂದ ಜಮೀನು ಉಳುಮೆ ಮಾಡಲು ದಿನವೊಂದಕ್ಕೆ 1500 ರೂ ಇದ್ದರು ಸಹ ಅಲ್ಲಲ್ಲಿ ಅಲ್ಪ ಪ್ರಮಾಣದಲ್ಲಿ ಮಾತ್ರ ಇಂತಹ ದೃಶ್ಯಗಳು ಕಂಡು ಬರುತ್ತಿದೆ.
ಭಿತ್ತನೆಗಾಗಿ ಶೇಂಗಾಕ್ಕೆ ಕನಿಷ್ಟ 3600 ಗರಿಷ್ಟ 5200ರೂ ಮೆಕ್ಕೆಜೋಳ ಕ್ವಿ.1800-8000ರೂ, ಬಿಳಿಜೋಳ 1000-3600ರೂಗಳವರೆಗೆ ಹಣ ತೆತ್ತು ಜಮೀನುಗಳನ್ನು ಉಳುಮೆ ಮಾಡುತ್ತಾ ಬೀಜಗಳಿಗಾಗಿ ಹಣ ವ್ಯಯಿಸುತ್ತಿದ್ದಾರೆ. ಇನ್ನೂ ರೇಷ್ಮೆ ಬೆಳೆಯು ಸಹ ಅಲ್ಪ ವಾಗಿದ್ದು ಈ ಹಿಂದಿಗಿಂತಲೂ ರೇಷ್ಮೆ ಬೆಳೆಯುವವರ ಪ್ರಮಾಣ ಕಡಿಮೆಯಾಗಿದೆ. ಇಂದಿನ ಈ ವಾತವರಣದಿಂದಾಗಿ ಮುಂಗಾರಿನಲ್ಲಿ ಭಿತ್ತಿರುವ ಬೆಳೆಯು ಮುಂದಿನ ದಿನಗಳಲ್ಲಿ ಅಲ್ಪ ಸ್ವಲ್ಪವಾದರು ಬರುವಂತಹ ಮನ್ಸೂಚನೆ ಕಂಡು ಬರುತ್ತಿದೆ.
ಮಳೆಯಾಶ್ರಿತ ಪ್ರದೇಶವಾಗಿರುವ ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೈ ಕೊಡುತ್ತಿದ್ದು ಮಳೆಯನ್ನೇ ಆಶ್ರಯಿಸಿರುವ ರೈತರ ಮನದಲ್ಲಿ ಆತಂಕ ಮನೆ ಮಾಡಿದೆ. ಸರಕಾರದ ಸಾಲ ಮನ್ನಾ ಘೋಷಣೆಯಿಂದ ಬ್ಯಾಂಕುಗಳಲ್ಲಿ ಯಾವುದೇ ಕಾರಣಕ್ಕೂ ಸಾಲ ದೊರೆಯುತ್ತಿಲ್ಲಾ. ಮಳೆ ಬಾರದ ಹಿನ್ನೆಲೆಯಲ್ಲಿ ಹೊರಗಿನ ವರ್ತಕರು ಸಾಲ ನೀಡುತ್ತಿಲ್ಲ ಮುಂದೆ ಯಾವ ರೀತಿಯಲ್ಲಿ ವ್ಯವಸಾಯ ಮಾಡಬೇಕೆಂದು ದಿಕ್ಕೆ ತೋಚದಂತಾಗಿದೆ ಎಂದು ರೈತರು ಕೊರಗುತ್ತಿದ್ದಾರೆ.
ಕಳೆದ ವರ್ಷ ಇದೇ ಪರಿಸ್ಥಿತಿ ಎದುರಾಗಿತ್ತು ಜಮೀನುಗಳಲ್ಲಿ ಸೇವಂತಿಗೆ, ಮೆಣಸಿನ ಗಿಡಗಳನ್ನು ಬೆಳೆಸಿದ್ದೆ, ಅಡಿಕೆ, ತೆಂಗು ಮಳೆ ಬಾರದೆ ಬೆಳೆ ಕೈ ಕೊಟ್ಟಿತು ಈಗ ಬೆಳೆಯು ಇಲ್ಲವಾಗಿದೆ ಕೆರೆ ಕಟ್ಟೆಗಳು ತುಂಬಲಿಲ್ಲ ಕನಿಷ್ಟ ಜೀವಾದಿಗಳಿಗಾದರೂ ನೀರು ಮೇವು ಅಗತ್ಯವಾಗಿದೆ ನಾವು ರೈತರು ಹೇಗೂ ಕಾಲ ಕಳೆಯುತ್ತೆವೆ ಆದರೆ ಆ ಮೂಕ ಪ್ರಾಣಿಗಳ ರೋಧನೆ ಕೇಳಲು ಆಗುವುದಿಲ್ಲ. ಬರುವ ಅರ್ಧಪಾದದಲ್ಲಿ ಏನಾದರೂ ಮಳೆಯಾದರೆ ಕನಿಷ್ಟ ಬೆಳೆ ಬರಬಹುದು. ನರಸಿಂಹಮೂರ್ತಿ. ಹರಿಹರರೊಪ್ಪದ ರೈತ.
ಮುಖ್ಯ ಮಂತ್ರಿ ಕುಮಾರಸ್ವಾಮಿ ಅನ್ಯ ಪಕ್ಷದ ಶಾಸಕರನ್ನು ನಂಬಿ ಸರಕಾರ ನಡೆಸುವುದು ಮಳೆರಾಯನ ನಂಬಿ ನಮ್ಮ ರೈತರು ಬೇಸಾಯ ಮಾಡುವುದು ಎರಡು ಒಂದೇ ಆಗಿದ್ದು ಮಳೆಯು ಇಲ್ಲ ಬೆಳೆಯು ಇಲ್ಲ ರೈತರ ಗೋಳು ಕೇಳುವವರಿಲ್ಲ. ಸರ್ಕಾರವು ಎತ್ತಿನ ಹೊಳೆ ನೀರು ಹರಿಸಲು ಸಾವಿರಾರು ಕೋಟಿ ಮೀಸಲಿಟ್ಟಿದ್ದು ಯೋಜನೆಯ ಯಾವ ಹಂತದಲ್ಲಿದೆ ಎಂಬುದು ಯಾರಿಗೂ ತಿಳಿಯದಾಗಿದ್ದು ಶೀಘ್ರವೇ ಈ ಯೋಜನೆಯನ್ನು ಪೂರ್ಣಗೊಳಿಸಿ ರೈತರ ಹಿತಾಕಾಪಾಡುವಲ್ಲಿ ಚಿಂತಿಸಬೇಕಾಗಿದೆ. ಭಾಸ್ಕರ್.ವಿ.ಆರ್. ಮುಖಂಡ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
