ಕಾಮಗಾರಿ ಬಿಲ್ ಮೊತ್ತ ಪಾವತಿಸುವಲ್ಲಿ ವಿಳಂಭ:ಆರೋಪ

ಶಿರಾ

     ಇಲ್ಲಿನ ನಗರಸಭೆಯ ಅಧಿಕಾರಿಗಳ ಮೌಕಿಕ ಆದೇಶದ ಮೇರೆಗೆ ಶಿರಾ ನ್ಯಾಯಾಲಯದ ಪ್ರಾಂಗಣದಲ್ಲಿ ಕೈಗೊಂಡ ದ್ವಜಸ್ಥಂಭದ ಕಾಮಗಾರಿಯ ಬಿಲ್ ಪಾವತಿಸದೆ ನಗರಸಭೆಯ ಅಧಿಕಾರಿಗಳು ಸತಾಯಿಸುತ್ತಿದ್ದು ಈ ಕೂಡಲೇ ಕಾಮಗಾರಿಯ ಬಿಲ್ ಪಾವತಿಸುವಂತೆ ತಿಮ್ಮೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

      ನಗರದ ಜೆ.ಎಂ.ಸಿ. ನ್ಯಾಯಾಲಯದ ಪ್ರಾಂಗಣದಲ್ಲಿ ನ್ಯಾಯಾಧೀಶರ ಕೋರಿಕೆಯ ಮೇರೆಗೆ ತುರ್ತಾಗಿ 5.8.2017ರಂದು ನಗರಸಭೆಯ ಆಯುಕ್ತರು ಹಾಗೂ ಕಿರಿಯ ಅಭಿಯಂತರರ ಮೌಖಿಕ ಆದೇಶದ ಮೇರೆಗೆ ಕಾಮಗಾರಿ ಕೈಗೊಂಡು 14.8.2017ರಲ್ಲಿ 4,70,000 ರೂಗಳ ವೆಚ್ಚದಲ್ಲಿ ಕಾಮಗಾರಿ ಪೂರೈಸಲಾಗಿದೆ. ನಗರಸಭೆಯ ಅಧಿಕಾರಿಗಳು ಕಾಮಗಾರಿ ತೃಪ್ತಿಕರವಾಗಿದೆ ಎಂದು ದೃಢೀಕರಿಸಿದ್ದರೂ ಈವರೆಗೂ ಬಿಲ್ ಪಾವತಿಸದೆ ನಿರ್ಲಕ್ಷ್ಯ ತಾಳಿದ್ದು ಜಿಲ್ಲಾಧಿಕಾರಿಗಳು ಈ ಬಗ್ಗೆ ನ್ಯಾಯ ದೊರಕಿಸುವಂತೆ ತಿಮ್ಮೇಗೌಡ ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link