ಪೊಲೀಸ್ ಠಾಣೆಗಳಲ್ಲಿ ಕನ್ನಡ ಕಡ್ಡಾಯ : ಭಾಸ್ಕರ್ ರಾವ್

ಬೆಂಗಳೂರು

   ನಗರದ ಪೊಲೀಸ್ ಠಾಣೆಗಳು ಹಾಗೂ ಕಚೇರಿಗಳಲ್ಲಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಸಾರ್ವಜನಿಕ ಪ್ರಕಟಣೆಗಳು, ಮಾಹಿತಿಗಳು ಕನ್ನಡದಲ್ಲಿರುವಂತೆ ನೋಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರು ತಿಳಿಸಿದ್ದಾರೆ.

    ಅಖಿಲ ಕರ್ನಾಟಕ ಪುನೀತ್ ಕುಮಾರ್ ಸಮರ ಸೇನೆಯು ಜಯನಗರದಲ್ಲಿ ಆಯೋಜಿಸಿದ್ದ ನಾಡಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದ ಪೊಲೀಸ್ ಠಾಣೆಗಳಲ್ಲಿ ಕನ್ನಡ ಪರ ವಾತಾವರಣ ಮೂಡಿಸಲು ಶ್ರಮಿಸಲಾಗುವುದು ಎಂದರು.

       ಅಪರಾಧ ಕೃತ್ಯಗಳಿಗೆ ದಾಖಲಿಸುವ ಪ್ರಕರಣಗಳ ಮಾಹಿತಿಯನ್ನು ಕನ್ನಡದಲ್ಲಿಯೇ ನೀಡಿ ಜಾಗೃತಿ ಮೂಡಿಸಲಾಗುವುದು ಇದರಿಂದ ಪೊಲೀಸ್ ಠಾಣೆಗಳಲ್ಲಿ ಕನ್ನಡ ಪರ ವಾತಾವರಣ ಮೂಡಿಸಿದರೆ ಠಾಣೆಗೆ ಬರುವ ನಾಗರಿಕರಿಗೆ ಪೊಲೀಸರೊಂದಿಗೆ ಸ್ನೇಹಭಾವದೊಂದಿದೆ ನಡೆದುಕೊಳ್ಳುವುದು ಸಹಕಾರಿಯಾಗಲಿದೆ ಎಂದು ಹೇಳಿದರು.

    ಸರ್ಕಾರಿ ಅಧಿಕಾರಿಗಳಲ್ಲಿ ಕನ್ನಡ ನಾಡು-ನುಡಿಯ ಬಗ್ಗೆ ಗೌರವ-ಪ್ರೀತಿ ಇದ್ದರೆ ಉತ್ತಮ ಕೆಲಸ ನಿರೀಕ್ಷಿಸುವುದು ಸಾಧ್ಯ. ನಾಡು-ನುಡಿ, ನೆಲ-ಜಲಕ್ಕೆ ಕುತ್ತು ಬಂದಾಗ ಹೋರಾಟ ನಡೆಸುವುದು ಭಾಷೆ ಬಗೆಗಿನ ಗೌರವದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.ಹೊರ ರಾಜ್ಯ ಹಾಗೂ ವಿದೇಶಿಗರಲ್ಲೂ ಕನ್ನಡದ ಬಗ್ಗೆ ಗೌರವ ಮೂಡಿಸಲು ಪೊಲೀಸ್ ಠಾಣೆಗಳಿಂದ ಪ್ರಯತ್ನಿಸಲಾಗುವುದು ಎಂದರು.

    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ನಂಜಾವಧೂತ ಸ್ವಾಮೀಜಿಗಳು, ಕನ್ನಡಿಗರು ತಮ್ಮ ಭಾಷೆಯ ಅಭಿವೃದ್ಧಿಗೆ ಶ್ರಮಿಸುವುದರ ಜತೆಗೆ ಪರಭಾಷಿಗರಿಗೂ ಕನ್ನಡವನ್ನು ಕಲಿಸಿ ಭಾಷೆಯ ಬಗ್ಗೆ ಗೌರವ ಮೂಡಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶ್ರೀ ಕುಮಾರಚಂದ್ರಶೇಖರನಾಥ ಸ್ವಾಮೀಜಿ, ಸಮರ ಸೇನೆಯ ಅಧ್ಯಕ್ಷ ಚಂದ್ರಶೇಖರ್, ಪಾಲಿಕೆ ಸದಸ್ಯರಾದ ನಾಗರತ್ನ ರಾಮಮೂರ್ತಿ, ಮುಖಂಡರಾದ ಚಂದ್ರಶೇಖರ್ ಅವರು ಪಾಲ್ಗೊಂಡಿದ್ದು, ಇದೇ ವೇಳೆ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link