ಅದ್ದೂರಿ ಕನ್ನಡ ರಾಜ್ಯೋತ್ಸವ

ತುರುವೇಕೆರೆ:

     ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗರು ಮಾಡಬೇಕು ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ರಮೇಶ್ ಗೌಡ ತಿಳಿಸಿದರು.

     ತಾಲೂಕಿನ ಅರೆಮಲ್ಲೇನಹಳ್ಳಿ ಗ್ರಾಮದಲ್ಲಿ ಶ್ರೀ ರಂಗ ತರಂಗ ಕ್ರೀಡೆ ಮತ್ತು ಸಾಂಸ್ಕತಿಕ ಗೆಳೆಯರ ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಲ್ಪತರು ನಾಡಿನ ಕನ್ನಡಿಗರ ಹಬ್ಬ ಹಾಗೂ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

      ರಾಜ್ಯದಲ್ಲಿ ಆನೇಖ ಮಹನೀಯರು ಕನ್ನಡ ನಾಡು ನುಡಿಗೆ ಹೋರಾಡಿದ್ದಾರೆ ಅಂತವರನ್ನು ನೆನೆಯಬೇಕಿರುವುದು ನಮ್ಮ ಕರ್ತವ್ಯ. ಪಟ್ಟಣಗಳಲ್ಲಿ ಕನ್ನಡ ಕ್ಷೀಣಿಸಿದ್ದು ಗ್ರಾಮೀಣ ಭಾಗದಲ್ಲಿ ಮಾತ್ರ ಕನ್ನಡ ಉಳಿದಿದೆ. ಪ್ರತಿಯೊಬ್ಬ ಕನ್ನಡಿಗನು ಕನ್ನಡಕ್ಕಾಗಿ ದುಡಿಯಬೇಕು, ಹೋರಾಡಬೇಕು. ನಾನು ತಾಲೂಕು ಬಿಟ್ಟು ಎಲ್ಲಿಯೂ ಹೋಗಿಲ್ಲ, ಕೆಲವು 6 ತಿಂಗಳಿಂದ ವ್ಯವಹಾರಕ್ಕಾಗಿ ಬೆಂಗಳೂರಿನಲ್ಲಿದ್ದೆ. ತಾಲೂಕಿನಲ್ಲಿ ನನ್ನ ಕೈಲಾದ ಸಹಾಯ ಮಾಡುತ್ತೇನೆ. ಈ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ನೆಡೆಸಿದರು ನಾನು ಹೆಚ್ಚಿನ ಸಹಕಾರ ಪ್ರೊತ್ಸಾಹ ನೀಡಲಾಗುವುದು ಎಂದು ತಿಳಿಸಿದರು.

       ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎ.ಬಿ.ಜಗದೀಶ್ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಪ್ರತಿಭಾವಂತರಾಗಿದ್ದು, ಸಾದನೆ ಮಾಡಲು ಹಲವು ಅವಕಾಶಗಳಿವೆ ಅವುಗಳನ್ನು ಬಳಸಿಕೊಂಡು ಉತ್ತಮ ಸಾದನೆ ಮಾಡಿ ಗ್ರಾಮಕ್ಕೆ ಒಳ್ಳೆಯ ಕೀರ್ತಿ ತನ್ನಿ ಎಂದು ತಿಳಿಸಿದರು.

      ಕನ್ನಡ ಶಿಕ್ಷಕ ಎಸ್. ಲಕ್ಷ್ಮಣಗೌಡರು ವಿಶೇಷ ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡಿದರು. ನಂತರ ವಿವಿದ ಕ್ಷೇತ್ರದಲ್ಲಿ ಸಾದನೆಗೈದ ಹಲವು ಗಣ್ಯರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಘದವತಿಯಿಂದ ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳು ರಸಮಂಜಿರಿ ಕಾರ್ಯಕ್ರಮ ನೆಡೆಸಿಕೊಟ್ಟ ನೆರೆದಿದ್ದ ಜನರನ್ನು ರಂಜಿಸಿದರು.

       ಸಮಾರಂಭದಲ್ಲಿ ಸಾಹಿತಿ ಅರಕೆರೆಕಿಶೋರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಶಿವರಾಜು, ಗ್ರಾಮ ಪಂಚಾಯ್ತಿ ಸದಸ್ಯ ಕೆಂಪೇಗೌಡರು, ಮುಖಂಡರಾದ ತಮ್ಮಣ್ಣಗೌಡರು, ರಂಗನಾಥ್, ರಮೇಶ್, ಪರಮೇಶ್, ಸಣ್ಣನಂಜಪ್ಪ, ಶಿವಣ್ಣ, ಎ.ಬಿ.ಕೃಷ್ಣೇಗೌಡರು, ಶಿವರಾಜು, ಕೆಎಸ್.ಆರ್.ಟಿಸಿ ಘಟಕ ವ್ಯವಸ್ಥಾಪಕ ತುಳುಸಿರಾಮ್, ರಂಗ ತರಂಗ ಸಂಘದ ಅಧ್ಯಕ್ಷ ಎ.ಆರ್.ರಮೇಶ್, ಉಪಾಧ್ಯಕ್ಷ ಗಗನ್, ಕಾರ್ಯದರ್ಶಿ ಗೋಪಿಕೃಷ್ಣ, ಖಜಾಂಚಿ ಪರಮೇಶ್, ಸದಸ್ಯರಾದ ಮಧು, ಮಹೇಶ್, ಜಯರಾಮ್, ವೇಣುಗೊಪಾಲ್ ಸೇರಿದಂತೆ ಇತರೆ ಪದಾಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ   

Recent Articles

spot_img

Related Stories

Share via
Copy link