ಕಾರ್ಮಿಕ ದಿನಾಚರಣೆ ಕಾರ್ಯಕ್ರಮ

ರಾಣಿಬೆನ್ನೂರು

       ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಸರ್ವಾಂಗೀಣ ಹಿತರಕ್ಷಣೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ ಕಾರ್ಮಿಕರಲ್ಲಿ ಸಂಘಟನೆಯ ಕೊರೆತೆಯಿಂದಾಗಿ ಯಾವುದೇ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಕಾನೂನು ಸೇವಾ ಸಮಿತಿಯು ಅಸಂಘಟಿತ ಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರ ಪಿ.ಶಿವರಾಜ ಹೇಳಿದರು.

         ನಗರ ಹೊರವಲಯದ ಸಿಜೆಂಟಾ ಸೀಡ್ಸ್ ಕಂಪನಿ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಕರ್ಮಿಕ ಇಲಾಖೆಯ ಆಶ್ರಯದಲ್ಲಿ ಕಾರ್ಮಿಕರಿಗಾಗಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಸಂಘಟಿತ ಕಾರ್ಮಿಕರು ಇಲಾಖೆಯ ಎಲ್ಲ ಯೋಜನೆಗಳನ್ನು ಪಡೆಯಬೇಕಾದರೆ ಸಂಘಟನೆಯಾಗಬೇಕಾದ ಅಗತ್ಯವಿದೆ ಎಂದರು.

         ಶ್ರಮಿಕ ವರ್ಗ ಎಲ್ಲ ಹಂತದ ಕಂಪನಿಗಳ ಸಂಘ-ಸಂಸ್ಥೆಗಳ, ಉದ್ಯಮಿಗಳ ಆಧಾರ ಸ್ತಂಭಗಳಾಗಿದ್ದಾರೆ. ಅವರಿಲ್ಲದೇ, ಇದ್ದಿದ್ದರೇ ಯಾವುದೇ ಉದ್ದಿಮೆ ಬೆಳೆಯಲು ಅಥವಾ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ಕಾರ್ಮಿಕರು ಕಾನೂನಿನ ಸವಲತ್ತುಗಳನ್ನು ಪಡೆದು ಯೋಜನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದರು.

       ಕಾರ್ಮಿಕ ಇಲಾಖೆ ನಿರೀಕ್ಷಕ ರಮೇಶ ಕೆಸರೂರು ಮಾತನಾಡಿ ಇಲಾಖೆಯು ಕಾರ್ಮಿಕರಿಗಾಗಿಯೇ ಮತ್ತು ಅವರಿಗೆ ಇರುವ ಸವಲತ್ತುಗಳ ಬಗ್ಗೆ ಅನೇಕ ಬಾರಿ ಅರಿವು ಮೂಡಿಸುವ ಕೆಲಸ ಮಾಡುತ್ತಲೇ ಬಂದಿದೆ. ಆದರೆ ತಮ್ಮ ನಿತ್ಯದ ಬದುಕಿನ ಭವಣೆಯಲ್ಲಿ ಸಿಲುಕಿಕೊಳ್ಳುವ ಈ ಕಾರ್ಮಿಕರು ಸರ್ಕಾರದ ಮತ್ತು ಇಲಾಖೆಯ ಯೋಜನೆಗಳ ಕಡೆ ಗಮನ ಹರಿಸದೇ ಇರುವುದು ವಿಷಾಧಕರ ಸಂಗತಿಯಾಗಿದೆ ಎಂದರು.

       ಸಿಜೇಂಟಾ ಕಂಪನಿಯ ವ್ಯವಸ್ಥಾಪಕ ಕೆ.ಎಚ್.ಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಕುಮಾರ ಮಡಿವಾಳ ಅವರು ಕಾರ್ಮಿಕರಿಗೆ ಇರುವ ಸರ್ಕಾರದ ಸೌಲಭ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಚಿನ್ನಪ್ಪನವರ, ಎಂ.ಎಸ್.ರೊಡ್ಡನವರ, ಕುಮಾರ ಏಳೆಹೊಳೆ, ಶಿವಕುಮರ ಬಣಕಾರ ಕಂಪನಿಯ ಮೈಕಲ್ ಜೋಸೆಪ್, ಸಿದ್ದಪ್ಪ ಬಸಪ್ಪಳವರ ಸೇರಿದಂತೆ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link