ಕೊರೋನಾ ಹಿನ್ನಲೆ ಕರ್ನಾಟಕ ತಮಿಳುನಾಡು ಗಡಿ ಬಂದ್

ಬೆಂಗಳೂರು

     ಮಹಾಮಾರಿ ಕೊರೊನಾ ವೇಗವಾಗಿ ಹರಡುವುದನ್ನು ತಪ್ಪಿಸಲು ರಾಮನಗರ ಜಿಲ್ಲೆಯ ಕರ್ನಾಟಕ-ತಮಿಳುನಾಡು ಗಡಿ ಭಾಗವನ್ನು ಬಂದ್ ಮಾಡಲಾಗಿದೆ.

    ಹೊರರಾಜ್ಯಗಳಿಂದ ಜನರು ರಾಜ್ಯಕ್ಕೆ ಬಂದರೆ ಕೊರೋನಾ ಸೋಂಕು ಹರಡುವುದು ಹೆಚ್ಚುವ ಸಾಧ್ಯತೆಯಿರುವ ಕಾರಣ ಕರ್ನಾಟಕದಿಂದ ತಮಿಳುನಾಡಿಗೆ, ಅಥವಾ ತಮಿಳುನಾಡಿನಿಂದ ಕರ್ನಾಟಕಕ್ಕೆ ಯಾವುದೇ ಸಂಚಾರಕ್ಕೆ ಅವಕಾಶವಿರಬಾರದು ಎಂದು ರಾಮನಗರ ಜಿಲ್ಲಾ ಎಸ್‌ಪಿ ಅನೂಪ್ ಎ ಶೆಟ್ಟಿ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

     ಸ್ಥಳದಲ್ಲಿ 4 ಜನ ಪೊಲೀಸ್ ಸಿಬ್ಬಂದಿ, ಇಬ್ಬರು ಆಶಾ ಕಾರ್ಯಕರ್ತೆಯರು ಮೊಕ್ಕಾಂ ಹೂಡಿದ್ದಾರೆ. ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸರು ಗಡಿ ಬಂದ್ ಮಾಡಿದ್ದಾರೆ. ಜಿಲ್ಲೆಯ ಕನಕಪುರ ತಾಲೂಕಿನ ಹುಣಸನಹಳ್ಳಿ ಗ್ರಾಮದ ಗಡಿ ಬಂದ್ ಮಾಡಲಾಗಿದೆ. ಹುಣಸನಹಳ್ಳಿ ಗ್ರಾಮವು ಕರ್ನಾಟಕ, ತಮಿಳುನಾಡು ರಾಜ್ಯಕ್ಕೆ ಗಡಿ ಪ್ರದೇಶವಾಗಿದೆ.

    ರಾಮನಗರ ಜಿಲ್ಲೆಯಲ್ಲಿ ಲಾಕ್ ಡೌನ್ ಉಲ್ಲಂಘನೆ ಸಂಬಂಧ ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 24 ಪ್ರಕರಣ ದಾಖಲಾಗಿವೆ. ಲಾಕ್ ಡೌನ್ ನಡುವೆಯೂ ಅನಾವಶ್ಯಕವಾಗಿ ರಸ್ತೆಗಿಳಿದು ಓಡಾಡುವ ಜನರ ಮೇಲೆ ಕೇಸ್ ಹಾಕಲಾಗಿದ್ದು 24 ಪ್ರಕರಣದಲ್ಲಿ 24 ಜನರ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ಜೊತೆಗೆ ಕಾನೂನು ಉಲ್ಲಂಘಿಸಿ ಅಂಗಡಿ ಓಪನ್ ಮಾಡಿದ ಆರೋಪದಡಿ ಮಾಲೀಕರ ಮೇಲೂ ಕೇಸ್ ದಾಖಲಾಗಿದ್ದು 5 ಹೋಟೆಲ್, 6 ಟೀ ಅಂಗಡಿ, ಹಾರ್ಡ್ ವೇರ್ ಶಾಪ್ ಮಾಲೀಕರ ಮೇಲೆ ಪ್ರಕರಣ ದಾಖಲಾಗಿವೆ.

     ಚನ್ನಪಟ್ಟಣದ ಕೋಡಂಬಳ್ಳಿಯಲ್ಲಿ ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಯುವಕರನ್ನು ನಿಲ್ಲಿಸಿ ಪೊಲೀಸರು 10 ಬೈಟಕ್ ಹೊಡೆಸಿದರು.ಅಕ್ರಮವಾಗಿ ನೀರಾ ಮಾರಾಟ ಹಾಗೂ ಜೂಜಾಡುತ್ತಿದ್ದ ವಿಚಾರವಾಗಿ 10 ಕ್ಕೂ ಹೆಚ್ಚು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ ಜಿಲ್ಲೆಯ ಪೊಲೀಸರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಲಾಕ್ ಡೌನ್ ಉಲ್ಲಂಘನೆ ಕಾನೂನು ಮತ್ತಷ್ಟು ಬಿಗಿಯಾಗಲಿದೆ ಎಂದು ನ್ಯೂಸ್ 18 ಗೆ ಎಸ್ ಪಿ ಅನೂಪ್ ಎ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap