370ನೆ ವಿಧಿ ರದ್ದತಿ ಕೇಂದ್ರದ ಐತಿಹಾಸಿಕ ಕ್ರಮ :ಪ್ರಹ್ಲಾದ್ ಜೋಶಿ

ಬೆಂಗಳೂರು

     ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ೩೭೦ನೇ ವಿಧಿ ದೇಶದ ಬಹುತೇಕ ಗೌರವ ಲಕ್ಷಾಂತರ ಜನರ ಭಾವನೆಗೆ ಧಕ್ಕೆ ತರುವ ವಿಧಿಯಾಗಿತ್ತು ಅದನ್ನು ರದ್ದುಪಡಿಸುವ ಮೂಲಕ ಕೇಂದ್ರ ಸರ್ಕಾರ ಐತಿಹಾಸಿಕ ಕ್ರಮ ಕೈಗೊಂಡಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ಬಿಟಿಎಂ ಲೇಔಟ್‌ನ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಬಿಜೆಪಿ ರಾಷ್ಟ್ರೀಯ ಏಕತಾ ಅಭಿಯಾನ ಮತ್ತು ೩೭೦ನೇ ವಿಧಿ ರದ್ದು ಕುರಿತ ಜನಜಾಗರಣಾ ಸಭೆ ಉದ್ಘಾಟಿಸಿ ಮಾತನಾಡಿ ೩೭೦ನೇ ವಿಧಿಯಡಿ ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ತಾತ್ಕಾಲಿಕ ಅಧಿಕಾರ ಮಾತ್ರ, ಅದನ್ನು ರದ್ದುಪಡಿಸುವ ಸಂಪೂರ್ಣ ಅಧಿಕಾರವನ್ನು ಸಂಸತ್ ಹೊಂದಿತ್ತು ಎಂದು ತಿಳಿಸಿದರು.

    ಅಂದಿನ ಪ್ರಧಾನಿ ನೆಹರು ಹಾಗೂ ನ್ಯಾಷನಲ್ ಮುಸ್ಲಿಂ ಲೀಗ್ ನಾಯಕ ಶೇಕ್ ಅಬ್ದುಲ್ಲಾ ಪರಸ್ಪರ ಹೊಂದಾಣಿಕೆಯಿಂದ ಕಾಶ್ಮೀರ ವಿಶೇಷಾಧಿಕಾರ ೩೭೦ನೇ ವಿಧಿಯನ್ನು ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ವಿರೋಧದ ನಡುವೆಯೂ ಭಾರತದ ಸಂವಿಧಾನದಲ್ಲಿ ಸೇರ್ಪಡೆ ಮಾಡಿದ್ದರು. ನೆಹರು ಮತ್ತು ಶೇಕ್ ಅಬ್ದುಲ್ಲಾ ನಡುವಿನ ವಿಶೇಷ ಸಂಬಂಧವೇ ೩೭೦ನೇ ವಿಧಿ ಭಾರತದ ಸಂವಿಧಾನದಲ್ಲಿ ಸೇರ್ಪಡೆಯಾಗಲು ಪ್ರಮುಖ ಕಾರಣವಾಯಿತು ಎಂದ ಅವರು, ೩೭೦ನೇ ವಿಧಿ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ, ಇದನ್ನು ಬೆಂಬಲಿಸಿದ ಮೊದಲ ವ್ಯಕ್ತಿ ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರು ಎಂದರು.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ವಿಶೇಷ ಕಾರ್ಯತಂತ್ರದ ಮೂಲಕ ಈ ವಿಧಿಯನ್ನು ರದ್ದುಪಡಿಸಿ, ಭಾರತದ ಐಕ್ಯತೆಗೆ ಕ್ರಮ ಕೈಗೊಳ್ಳಲಾಯಿತು ಹೈದರಾಬಾದ್ ನಿಜಾಮನ ಆಡಳಿತವನ್ನು ಕೊನೆಗಾಣಿಸಿ, ಹೈದಾರಾಬಾದ್ ಕರ್ನಾಟಕ ಪ್ರದೇಶವನ್ನು ಭಾರತದೊಳಗೆ ವಿಲೀನಗೊಳಿಸಲಾಯಿತು. ನಂತರ, ಕಾಶ್ಮೀರವನ್ನೂ ಸಹ ಭಾರತದೊಳಗೆ ವಿಲೀನಗೊಳಿಸುವ ಅವಶ್ಯಕತೆ ಕಂಡುಬಂದ ಹಿನ್ನೆಲೆ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು, ಈ ವಿಧಿ ರದ್ದತಿಗೆ ಕ್ರಮ ಕೈಗೊಂಡರು ಎಂದು ತಿಳಿಸಿದರು..

    ೩೭೦ನೇ ವಿಧಿ ರದ್ದತಿಯನ್ನು ಬಿಜೆಪಿಗೆ ಬಹುಮತವಿಲ್ಲದ ರಾಜ್ಯಸಭೆಯಲ್ಲಿ ಮಂಡಿಸಿದ ವೇಳೆ ವಿಪಕ್ಷಗಳೂ ಸಹ ಪ್ರಸ್ತಾವವನ್ನು ವಿರೋಧಿಸದ ಕಾರಣ, ಇಂದು ಕಾಶ್ಮೀರ, ಭಾರತದೊಳಗೆ ವಿಲೀನಗೊಂಡಿತು ಎಂದರು.ವೇದಿಕೆಯಲ್ಲಿ ಶಾಸಕ ಸುದರ್ಶನ್ ರೆಡ್ಡಿ, ಸಾಹಿತಿ ನಾಗೇಂದ್ರ ಪ್ರಸಾದ್ ಹಾಗೂ ಇನ್ನಿತರರು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link