ಹೊಸದುರ್ಗ:
ತಾಲ್ಲೂಕು ಪಂಚಾಯಿತಿಗೆ ಸಂಬಂದಿಸಿದಂತೆ ಮಳಿಗೆಗಳ ಬಾಡಿಗೆ ಜಮಾಆದ ಲೆಕ್ಕ ಪತ್ರ ಬಗ್ಗೆ ಮಾಹಿತಿ ಕೇಳಿದರೆ ಅಧಿಕಾರಿಗಳಿಂದ ಸರಿಯಾಗಿ ಉತ್ತರ ಬರುತ್ತಿಲ್ಲಾ ಎಂದು ತಾ.ಪಂ ಅಧ್ಯಕ್ಷೆ ಶ್ರೀಮತಿ ಪ್ರೇಮಾ ರವೀಂದ್ರ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ 11 ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಇಲ್ಲಿ ವ್ಯವಸ್ದಾಪಕರಿಲ್ಲ,ಲೆಕ್ಕಪತ್ರ ವಿಭಾಗಕ್ಕೆ ಸಂಬಂದಿಸಿದ ಸಿಬ್ಬಂಧಿ ಕೊರತೆ ಇದೆ ಇದರಿಂದ ಕೆಲಸಗಳಿಗೆ ತುಂಬಾ ಕೊರತೆಯಾಗುತ್ತಿದೆ ನಾವು ಯಾರನ್ನು ಕೇಳಬೇಕು ಎಂದು ಇ.ಒ ಅವರನ್ನ ಪ್ರಶ್ನಿಸಿದರು. ನಂತರ ಇದಕ್ಕೆ ಇಓಯಾವುದೇ ನಿರೀಕ್ಷೆಯ ಉತ್ತರ ನೀಡಲಿಲ್ಲ. ನಂತರಲೆಕ್ಕ ಪತ್ರಕ್ಕೆ ಸಂಬಂದಿಸಿದ ಅಧಿಕಾರಿಯನ್ನ ಮೋಬೈಲ್ ಮೂಲಕ ಸಂಪರ್ಕಿಸುವ ಪ್ರಸಂಗ ಸಹಾ ನಡೆಯಿತು.
ಟಿಎಚ್ಓ ಡಾ.ಚಂದ್ರಶೇಖರ್ ಕಂಬಳಿಮಠ್ ಮಾತನಾಡಿ ತಾಲ್ಲೂಕಿನ ಗುಡ್ಡದ ನೇರಲೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈಧ್ಯರ ಹುದ್ದೆ ಖಾಲಿಯಿದ್ದು ಇಷ್ಟರಲ್ಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರಿನ ಕೊರತೆಯಿದ್ದು ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿದ್ದು ಲಭ್ಯವಿರುವ ಅನುದಾನಗಳನ್ನು ಬಳಸಿಕೊಳ್ಳಲು ಸಭೆಗೆ ತಿಳಿಸಿದರು .
ತಾಲ್ಲೂಕಿನ ಗ್ರಾಮಾಂತರ ಆರೋಗ್ಯ ಕೇಂದ್ರಗಳಲ್ಲಿ ನೀರಿನ ಕೊರತೆಯನ್ನು ಬೋರ್ವೆಲ್ಗಳು ಮತ್ತು ಸ್ಥಳಿಯ ಸಂಸ್ಥೆಗಳ ನೆರವಿನಿಂದ ಕೊರತೆ ನೀಗಿಸುತ್ತಿದ್ದೇವೆ. ಸಾಂಕ್ರಮಿಕ ರೋಗಗಳು ಹರಡದಂತೆ ಶುದ್ದ ನೀರನ್ನು ಸ್ಥಳಿಯ ಘಟಕದಿಂದ ಪಡೆಯುವುದು ಅಥವಾ ಕುದಿಸಿ ಅರಿಸಿದ ನೀರನ್ನು ಉಪಯೋಗಿಸಲು ಸೂಚಿಸಿದ್ದೇವೆ ಎಂದರು.
ಏಫ್ರಿಲ್ ಮತ್ತು ಮೇ ತಿಂಗಳಲ್ಲಿ ಯಾವುದೇ ಮಲೇರಿಯಾ ಪ್ರಕರಣಗಳು ವರದಿಯಾಗಿಲ್ಲ. ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಎಚ್ಒನ್ಎನ್ಒನ್ ಪ್ರಕರಣ ವರದಿಯಾಗಿದ್ದು ಮಣಿಪಾಲದಲ್ಲಿ ಚಿಕೆತ್ಸೆ ಪಡೆಯುತ್ತಿರುವುದು ಬಗ್ಗೆ ಮಾಹಿತಿ ಬಂದಿದ್ದು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಸಂಬಂಧಪಟ್ಟ ಸುತ್ತಲಿನ ಮನೆಗಳಲ್ಲಿ ಈಗಾಗಲೇ ನಮ್ಮ ತಂಡದವರು ಸಂಪೂರ್ಣ ಸಮೀಕ್ಷೆ ಮಾಡಿರುತ್ತಾರೆ.
ಈವರೆಗೂ ಮತ್ತೊಂದು ಪ್ರಕರಣ ವರದಿಯಾಗಿರುವುದಿಲ್ಲ. ಕುಷ್ಠ ರೋಗ ಸಂಬಂದಪಟ್ಟಂತೆ ಜಾನಪದ ಕೇಂದ್ರ ವ್ಯಾಪ್ತಿಯಲ್ಲಿ ಒಂದು ಪ್ರಕರಣ ಇದ್ದು ಚಿಕೆತ್ಸೆ ನೀಡಲಗುತ್ತಿದೆ. ಸುತ್ತಮುತ್ತಲಿನ ಮನೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ ಯಾವುದೇ ಪ್ರಕರಣಗಳು ಕಂಡು ಬಂದಿರುವುದಿಲ್ಲ. ಶುದ್ದ ನೀರು ಕುಡಿಯುವ ಬಗ್ಗೆ, ಮಾವಿನ ಹಣ್ಣು ಮತ್ತು ಇತರೆ ಹಣ್ಣುಗಳು ಹಾಗೂ ತರಕಾರಿಗಳನ್ನು ಶುಚಿಯಾಗಿ ತಿನ್ನುವ ಬಗ್ಗೆ , ಕೊಯ್ದ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವುಳನ್ನು ಖಡ್ಡಾಯವಾಗಿ ತಿನ್ನದಿರಲು ಸಲಹೆ ನೀಡಿದರು. ಬೀದಿ ಬದಿಗಳಲ್ಲಿ ಕರಿದ ತಿಂಡಿಗಳು ಆಹಾರಗಳು ಹಾಗೂ ಇತರೆ ಅವಧಿ ಮೀರಿದ ಜಂಕ ಆಹಾರಗಳನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವಿವರಿಸಿದರು.
ಬಿಇಓ ಎಲ್. ಜಯಪ್ಪ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ 06 ಕಡೆ ಎಲ್.ಕೆ.ಜಿ ಮತ್ತು ಯು.ಕೆ.ಜಿ ಪ್ರಾರಂಭಿಸಲಾಗಿದೆ. ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶಾಲೆಗಳಲ್ಲಿ ಸುಮಾರು 8000 ( ಎಂಟು ಸಾವಿರ ) ಗಿಡಗಳನ್ನು ಹಾಕಲಾಗಿದೆ. ಅದರಲ್ಲಿ ಮಕ್ಕಳಿಗೆ ಗಿಡಗಳ ಜವಾಬ್ದಾರಿ ನೀಡಿ ಯಾರು ಚೆನ್ನಾಗಿ ನೋಡಿಕೊಳ್ಳುತ್ತಾರೊ ಅಂತವರಿಗೆ ಬಹುಮಾನ ವಿತರಿಸಲಾಗುವುದು ಎಂದರು.ಶಾಲಾ ಪ್ರಾರಂಭೊತ್ಸವವನ್ನು ವಿಶೇಷವಾಗಿ ಆಚರಿಸಲಾಗಿದೆ. ಈಗಾಗಲೇ ಎಲ್ಲಾ ಶಾಲೆಗಳಿಗೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ.
ಎಸ್.ಎಸ್.ಎಲ್.ಸಿ ಫಲಿತಾಂಶವನ್ನು , ಪೋಷಕರ ಸಭೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದರಿಂದ ಶೇ 7% ರಷ್ಟು ಫಲಿತಾಂಶ ಹೆಚ್ಚಾಗಿದೆ. ಇದಕ್ಕೆ ಪ್ರತಿಕ್ರಿಯೆಸಿದ ಸದಸ್ಯ ಪುಟ್ಟನಾಯ್ಕವಿತರಿಸಿರುವ ಸಮವಸ್ತ್ರಗಳು ಮಕ್ಕಳಿಗೆ ಅಳತೆಯಲ್ಲಿ ಏರು ಪೇರು ಆಗುತ್ತಿವೆ ಎಂದಾಗ ತಾಲ್ಲೂಕಿನ ಯಾವ ಯಾವ ಶಾಲೆಗಳಲ್ಲಿ ಈ ರೀತಿಯ ಸಮಸ್ಯೆಗಳು ಇವೆಯೊ ಅಲ್ಲಿ ಶಿಕ್ಷಣ ಸಂಯೋಜಕರನ್ನ ಕಳುಹಿಸಿ ಸರಿಪಡಿಸಲಾಗುವುದು ಎಂದು ಸಭೆಗೆತಿಳಿಸಿದರು.
ಸದಸ್ಯೆ ವಿನೋಮ್ಮ ಮಾತನಾಡಿ ಕಳೆದ 6 ತಿಂಗಳಿನಿಂದಲೂ ದೇವಿಗೆರೆ ಸುತ್ತಾ-ಮುತ್ತಾ ತೀರ್ವ ಜಲಕ್ಷಾಮ ಉಲ್ಬಣಿಸಿದ್ದು ಈ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ನೇರವಾಗಿ ಆರೋಪಿಸಿzರು. ನಂತರ ಅವರ ಆರೋಪಕ್ಕೆ ಉತ್ತರಿಸಿದ ಗ್ರಾಮೀಣ ನೀರು ಸರಬರಾಜು ಅಧಿಕಾರಿ ನಾಗರಾಜ್ ಮಾತನಾಡಿ ಕೆಲಸ ಮಾಡಲು ನಾವು ಸದಾ ಸಿದ್ಧ ಆದರೆ ಅನುದಾನವೇ ಬಂದಿಲ್ಲಾ ಎಂದಾಗ ಇಡೀ ಸಭೆಯೆ ಗೊಂದಲದ ಗೂಡಾಯಿತು.ಮುಂದುವರೆದು ಮಾತನಾಡಿದ ಅವರು ಇದೀಗ ಬೋರ್ವೆಲ್ಗಳನ್ನು ಕೊರೆಸಲು ಇದೀಗ ಅನುಮತಿ ಬಂದಿದ್ದು ಟೆಂಡರ್ ಕರೆಯಲಾಗಿದೆ ಎಂದು ಉತ್ತರಿಸಿದರು.
ತಾಲ್ಲೂಕಿನ ದೇವಪುರ,ಶ್ರೀರಾಂಪುರ ಮತ್ತು ಇತರೆ ಗ್ರಾ.ಪಂಗೆ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು ಸರ್ಕಾರದಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸೂಚಿಸಿದ್ದರೂ ಸಹಾ ಕೇವಲ ಒಂದು ಗ್ರಾಮಕ್ಕೆ 4 ರಿಂದ 5 ಟ್ಯಾಂಕರ್ ಮಾತ್ರ ಬರುತ್ತಿದ್ದು ಈ ನೀರು ಜನ ಜಾನುವಾರುಗಳಿಗೆ ಸಾಕಾಗುತ್ತಿಲ್ಲಾ ಎಂದು ತೀರ್ವ ಬೇಸರ ವ್ಯಕ್ತಪಡಿಸಿದ ಬಹುತೇಕ ಸದಸ್ಯರು ನಮಗೆ ಬೋರ್ ವೆಲ್ ಕೋರೆಯುವ ಮೂಲಕ ಶಾಶ್ವತವಾಗಿ ನೀರನ್ನು ಒದಗಿಸಿಕೊಡಬೇಕು ಎಂದು ಪಕ್ಷ ಬೇದ ಮರೆತು ಸದಸ್ಯರು ಒಕ್ಕೋರಲಿನಿಂದ ಒತ್ತಾಯಿಸಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ರೋಹಿತ್ ಮಾತನಾಡಿ ಬೆಳೆವಿಮೆ ಯೋಜನೆಯಡಿ ಮಾವು, ದಾಳಿಂಬೆ,ಅಡಿಕೆ ಬೆಳೆಗಳಿಗೆ ಇನ್ಸೂರೆನ್ಸ್ ಕಟ್ಟಲು ಅವಕಾಶವಿದ್ದು ಇದೇ ತಿಂಗಳು 30 ಕೊನೆ ದಿನಾಂಕ ನಿಗಧಿಯಾಗಿದೆ. ಕಸಬಾ ಹೋಬಳಿಗಳಿಗೆ ಈರುಳ್ಳಿ ಮತ್ತು ಕೆಂಪು ಮೆಣಸಿನಕಾಯಿಗೆ ಇನ್ಸೂರೆನ್ಸ್ ಕಟ್ಟಲು ಅವಕಾಶವಿದ್ದು ಜುಲೈ ತಿಂಗಳಿನ 30 ಕೊನೆ ದಿನಾಂಕ ನಿಗಧಿಯಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮಾನ ಯೋಜನೆಯಲ್ಲಿ 116 ಪ್ರೈಮರಿ ಕೆಲಸಗಾರರನ್ನು ಹುಡುಕಿದ್ದು, ರೈತರು ತಮ್ಮ ಡಿಕ್ಲೇರಶನ್ಸ್ ಫಾರಂನಲ್ಲಿ ಆದಷ್ಟು ಬೇಗ ಸಹಿ ಮಾಡಿ ಕೊಡಬೇಕು. ಇದಕ್ಕಾಗಿ ನಮ್ಮ ಕಛೇರಿಗೆ ಬರುವ ಬದಲಾಗಿ ಆಯಾ ಗ್ರಾಮಗಳಲ್ಲಿ ಸಂಬಂಧ ಪಟ್ಟವರು ಇರುತ್ತಾರೆಅವರಿಗೆ ಕೊಡಲು ತಿಳಿಸಿದರು.ಇದೇ ವೇಳೆ ಸ್ಧಾಯಿ ಸಮಿತಿ ಅಧ್ಯಕ್ಷೆ ಹೇಮಾ ಮಂಜುನಾಥ್, ಉಪಾದ್ಯಕ್ಷೆ ಪ್ರೇಮಾ ದೇವರಾಜ್,ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಇನ್ನು ಉಪಸ್ಥಿತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
