ಜಿ ಎಸ್ ಬಿ ಪರ ಮಾಜಿ ಶಾಸಕರಿಂದ ಪ್ರಚಾರ..!!!

ಎಂ ಎನ್ ಕೋಟೆ :

       ದೇಶದ ಅಭಿವೃದ್ದಿ ಪಥದತ್ತ ಮುನ್ನಡೆಸುವಂತಹ ಸಮರ್ಥ ನಾಯಕತ್ವ ಗುಣವಿರುವ ಪ್ರಧಾನಿ ನರೇಂದ್ರ ಮೋಧಿ ಅವರಿಂದ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ಕಿರಣ್ ಕುಮಾರ್ ತಿಳಿಸಿದರು,

        ಗುಬ್ಬಿ ತಾಲ್ಲೂಕಿನ ಹಾಗಲವಾಡಿ , ಹೊಸಕೆರೆ , ಶಿವಪುರ ಗ್ರಾಮದಲ್ಲಿ ಲೋಕಸಭಾ ಅಭ್ಯರ್ಥಿ ಜಿ ಎಸ್ ಬಸವರಾಜು ಪರ ಪ್ರಚಾರ ವೇಳೆ ಮಾತನಾಡಿದ ಅವರು ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿ ದೇಶದ ಲಕ್ಷಾಂತರ ಕುಟುಂಬಗಳಿಗೆ ನೀಡಿದ ಉಜ್ವಲ್ ಕಡು ಬಡವರಿಗೆ ಉಚಿತ ಆತೋಗ್ಯ ಸೇವೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಗಳು ಮೋಧಿ ಸರ್ಕಾರದ ಮಹತ್ವದ ಕೊಡುಗಿಗಳಾಗಿವೆ. ದೇಶ ಭಯೋತ್ಪಾದನೆಯಿಂದ ಮುಕ್ತಿಯಾಗಬೇಕಾದರೆಮತ್ತೊಮ್ಮೆ ನರೇಂದ್ರ ಮೋಧಿ ಪ್ರಧಾನಿಯಾಗುವಂತೆ ಮತದಾರರು ಬಿಜೆಪಿ ಪಕ್ಷಕ್ಕೆ ಬೆಂಬಲಿಸಬೇಕು ಎಂದು ತಿಳಿಸಿದರು.

       ಪ್ರಧಾನಿ ನರೇಂದ್ರ ಮೋಧಿಯವರ ಅಲೆ ವ್ಯಾಪಕವಾಗಿದ್ದು ಅವರ ನಾಯಕತ್ವದ ಸದೃಡ ಆಡಲಿತ ಹಾಗೂ ಜನಪರ ಯೋಜನೆಗಳೇ ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಗೆಲುವಿಗೆ ಶ್ರೀರಕ್ಷೆಯಾಗಲಿದೆ.

     ನರೇಂದ್ರ ಮೋಧಿಯವರು ನಮ್ಮ ದೇಶಕ್ಕೆ ನೀಡಿರುವ ಸಾಧನೆ ರೈತಪರ ಯೋಜನೆಗಳು ಮಹಿಳೆಯರಿಗೆ ಹತ್ತು ಹಲವು ಯೋಜನೆ ಜಾರಿಗೆ ತಂದಿದ್ದಾರೆ. ದೇಶಕ್ಕೆ ಸಮರ್ಥ ನಾಯಕನಾಗಿರುವ ನರೇಂದ್ರ ಮೋಧಿಯವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕಾದರೆ ನಾವೆಲ್ಲರೂ ಯಾವುದೇ ಜಾತಿ ಮತ ಭೇಧವಿಲ್ಲದೆ ಒಗ್ಗಾಟಾಗಿ ಬಿಜೆಪಿ ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡಬೇಕು ಎಂದರು.

    ನಮ್ಮ ಜಿಲ್ಲೆಯ ಮತದಾರರ ಮೇಲೆ ಮೋಧಿಯವರ ಅಲೆ ಇದ್ದು ದೇಶ ಕಟ್ಟುವಂತಹ ವ್ಯಕ್ತಿ ಮೋಧಿಯವರಿಂದ ಮಾತ್ರ ಸಾಧ್ಯ ಎಂದರು. ನಮ್ಮ ದೇಶ ಉಳಿಯಬೇಕಾದರೆ ನರೇಂದ್ರ ಮೋಧಿಯವರನ್ನ ಮತ್ತೆ ನಾವು ಪ್ರಧಾನಿ ಮಂತ್ರಿಯನ್ನಾಗಿ ಮಾಡಬೇಕು. ಎಂದರು. ಮೋಧಿಯವರು ಮಾಡಿರುವ ಜನಪರ ಯೋಜನೆಗಳೇ ನಮ್ಮ ಅಭ್ಯರ್ಥಿ ಬಸವರಾಜು ಗೆಲುವಿಗೆ ಶ್ರೀರಕ್ಷೆಯಾಗಲಿದ್ದು ತಾಲ್ಲೂಕಿನ ಮತದಾರರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ಮೂಲಕ ತಾಲ್ಲೂಕಿನ ಅಭಿವೃದ್ದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

     ಕಾರ್ಯಕ್ರಮದಲ್ಲಿ ಜಿಬಿಜೆಪಿ ಮುಖಂಡರಾದ ಎಸ್ ಡಿ ದೀಲೀಪ್ ಕುಮಾರ್ , ಬಾಬು , ಮಾರುದ್ರಸ್ವಾಮಿ, ಮಲ್ಲೇಶ್ , ರಾಜಶೇಖರಯ್ಯ , ಉದಯ್ , ಸದಾಶಿವಯ್ಯ , ಮಧು , ಪಾಂಡುರಂಗಯ್ಯ , ನಟೇಶ್ ಹಾಗೂ ಕಾರ್ಯಕರ್ತರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link