ನಾಳೆಯಿಂದ ಕೊಬ್ಬರಿ ಹರಾಜು ಪ್ರಕ್ರಿಯೇ ಪ್ರಾರಂಭ

ತಿಪಟೂರು
 
      ಕೋವಿಡ್ – 19  ಹಾವಳಿಯಿಂದ ಸ್ತಬ್ಧವಾಗಿದ್ದ ಏಷ್ಯಾದ ದೊಡ್ಡ ಕೊಬ್ಬರಿ ಮಾರುಕಟ್ಟೆಯಾದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಏ. 25 ರಿಂದ ಕೊಬ್ಬರಿ ವ್ಯಾಪಾರ ವಹಿವಾಟು ಪ್ರಾರಂಭವಾಗುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ನ್ಯಾಮಗೌಡ ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.
       ಜಿಲ್ಲಾಧಿಕಾರಿಗಳು ನೀಡಿರುವ ಮಾರ್ಗಸೂಚಿಗಳ ಅನ್ವಯ ತಿಪಟೂರು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಏ. 29 ರಿಂದ ಪ್ರತಿ ಬುಧವಾರ ಹಾಗೂ ಶನಿವಾರ ಕೊಬ್ಬರಿ ಆನ್‍ಲೈನ್ ಟೆಂಡರನ್ನು ಪುನರಾರಂಭಿಸಲಾಗುವುದು. ತಿಪಟೂರು ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಆ ದಿನಗಳಂದು ಬೆಳಗ್ಗೆ 8.30 ಗಂಟೆಯಿಂದ ಕೊಬ್ಬರಿ ಉತ್ಪನ್ನವನ್ನು ತರುವುದು ಹಾಗು ಕೊಬ್ಬರಿ ಟೆಂಡರನ್ನು ಮಧ್ಯಾಹ್ನ ಒಂದು ಗಂಟೆಗೆ ಪ್ರಕಟಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
      ಬುಧವಾರ ಮತ್ತು ಶನಿವಾರ ಕೊಬ್ಬರಿ ರವಾನೆ ಇರುವುದಿಲ್ಲ. ಬದಲಾಗಿ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರದಂದು ಕೊಬ್ಬರಿ ಚೂರು ಹಾಗೂ ಕೌಟು ಉತ್ಪನ್ನದ ರವಾನೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಾಂಗಣದ ಮುಖ್ಯ ದ್ವಾರವನ್ನು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 8.30 ರಿಂದ ಸಂಜೆ 6 ಗಂಟೆಯವರೆಗೆ ತೆರೆಯಲಾಗುವುದು.
 
     ಮುಖ್ಯ ಪ್ರಾಂಗಣದಲ್ಲಿ ರೈತ ಬಾಂಧವರು, ಪೇಟೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು. ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್-19  ವೈರಸ್ ಹರಡದಂತೆ ಮುಂಜಾಗ್ರತಾ ವಹಿಸುವುದು. ರೈತ ಬಾಂಧವರು, ಸಾರ್ವಜನಿಕರು ಸಮಿತಿಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link