ಬೆಂಗಳೂರು:
ಜೆಡಿಎಸ್ಗೆ ಬಂದರೆ ಸಚಿವ ಸ್ಥಾನ ಕೊಡುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಫರ್ ಕೊಟ್ಟಿದ್ದು ನಿಜ ಎಂದು ಬಿಜೆಪಿ ಶಾಸಕ ಸುಭಾಶ್ ಗುತ್ತೇದಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆಪರೇಷನ್ ಕಮಲ ಕುರಿತು ಹೆಚ್ಡಿಕೆ ಆಡಿಯೊ ಬಿಡುಗಡೆ ಮಾಡಿದ ಬೆನ್ನಿಗೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಸುದ್ದಿಗೋಷ್ಠಿಯಲ್ಲ ಪಾಲ್ಗೊಂ ಗುತ್ತೇದಾರ್, ಹೆಚ್ಡಿಕೆ ಅವರು ನನಗೆ ಆಫರ್ ಮಾಡಿದ್ದು ನಿಜ. ಹಣ ಕೊಡುವುದಾಗಿ ಆಮಿಷವೊಡ್ಡಲಿಲ್ಲ. ಆದರೆ, ಸಚಿವ ಸ್ಥಾನ ಕೊಡುವುದಾಗಿ ಭರವಸೆ ನೀಡಿದ್ದರು ಎಂದು ಹೇಳಿದರು.
ನಾನು ಆಯ್ಕೆಯಾಗಿದ್ದು ಬಿಜೆಪಿಯಿಂದಲೇ, ನರೇಂದ್ರ ಮೋದಿಯವರ ಪ್ರಭಾವದಿಂದಲೇ, ಹಾಗಾಗಿ ಯಾವುದೇ ಕಾರಣಕ್ಕೂ ನಾನು ಜೆಡಿಎಸ್ಗೆ ಹೋಗೋದಿಲ್ಲ ಎಂದು ಹೇಳಿದರು.
ಸಚಿವ ಸ್ಥಾನವಲ್ಲ, ಸಿಎಂ ಮಾಡಿದ್ರೂ ಬರೋದಿಲ್ಲ ಅಂತ ಹೆಚ್ಡಿಕೆ ಅವರಿಗೆ ಹೇಳಿದ್ದೆ. ಕುಡಿಯೋ ನೀರು, ಕೂಲಿ ಕೆಲಸ ಸೇರಿ ಸಾಕಷ್ಟು ಸಮಸ್ಯೆಯಿವೆ. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ ಅಂತ ಹೇಳಿದ್ದೆ. ಹೆಚ್ಚಿನ ಅನುದಾನ ಕೊಡುವಂತೆ ಸಿಎಂಗೆ ಮನವಿ ಮಾಡಿದ್ದೆ. ಆಗ ಬೆಂಗಳೂರಿಗೆ ಬರುವಂತೆ ನನಗೆ ಸಿಎಂ ಹೆಚ್ಡಿಕೆ ಹೇಳಿದ್ದರು. ಆದ್ರೇ, ನಾನು ಆಮೇಲೆ ಬೆಂಗಳೂರಿಗೆ ಹೋಗಲೇ ಇಲ್ಲ ಎಂದೂ ಗುತ್ತೇದಾರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
