ಕುರುಬರು ಮತ್ತು ಕುಂಚಿಟಿಗರು ಸಂಬಂಧಿಕರು : ಶ್ರೀ ಶಾಂತವೀರಸ್ವಾಮೀಜಿ

ಹುಳಿಯಾರು:

     ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವಂತೆ ಕುರುಬ ಕೆಟ್ಟು ಕುಂಚಿಟಿಗನಾದ ಎಂಬ ಗಾದೆ ಮಾತು ನೂರಕ್ಕೆ ನೂರು ಸತ್ಯವಾಗಿದ್ದು ಕುರುಬರು ಮತ್ತು ಕುಂಚಿಟಿಗರು ಸಂಬಂಧಿಕರು. ಆದರೆ ಮೇಲ್ಜಾತಿಯೊಂದಿಗೆ ಗುರುತಿಸಿಕೊಂಡ ಕಾರಣದಿಂದ ಈ ಸಂಬಂಧ ಮರೆತಿದ್ದಾರೆ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರಸ್ವಾಮೀಜಿ ಹೇಳಿದರು.

     ಹುಳಿಯಾರಿನಲ್ಲಿ ಕನಕ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಕುರುಬರ ಸಾಂಸ್ಕೃತಿಕ ವೀರ ಜಲಧಿ ಬೊಪ್ಪರಾಯಗೌಡನಿಗೆ ಕುಂಚಿಟಿಗರ ಹೆಣ್ಣು ಚಿಕ್ಕ ಬೈರದೇವಮ್ಮನನ್ನು ಕೊಟ್ಟು ಮದುವೆ ಮಾಡಿದ ನಂತರ ಕುಂಚಿಟಿಗರು ಜಲಧಿ ಬೊಪ್ಪರಾಯನನ್ನು ಸಾಂಸ್ಕೃತಿಕ ನಾಯಕನಾಗಿ ಸ್ವೀಕರಿಸಿದರು. ಹಾಗಾಗಿಯೇ ಕುಂಚಿಟಿಗರಲ್ಲಿ ಇಂದಿಗೂ ಜಲಧಿ ಬೊಪ್ಪರಾಯನ ಕುರುಹಿನಲ್ಲಿ ಜಲ್ದೆನವರು ಎಂದು ಒಳಗೋತ್ರ ಇದೆ. ಅಲ್ಲದೇ, ಇಡೀ ಕುಂಚಿಟಿಗರ 48 ಗೋತ್ರಗಳಲ್ಲೂ ಮದುವೆ ವೇಳೆ ಕಂಕಣ, ಕರಿ ಕಂಬಳಿ ಇಲ್ಲದೇ ಮದುವೆ ಆಗುವುದಿಲ್ಲ ಎಂದು ಅವರು ವಿವರಿಸಿದರು.

     ಭಗೀರಥ ಪೀಠದ ಶ್ರೀ ಪುರುಷೋತ್ತಮನಂದಪುರಿ ಸ್ವಾಮೀಜಿ ಅವರು ಮಾತನಾಡಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಓಟ್ ಬ್ಯಾಂಕ್ ಪಾಲಿಟಿಕ್ಸ್ ಬದಿಗಿತ್ತು ಸಣ್ಣಪುಟ್ಟ ಜಾತಿಯ, ಶೋಷಿತ ಸಮುದಾಯದವನ್ನು ಸಚಿವರನ್ನಾಗಿ ಮಾಡಿದ್ದರು. ಅವರ ಅಂದಿನ ಸಚಿವ ಸಂಪುಟ ಜಗಜ್ಯೋತಿ ಬಸವಣ್ಣ ಅವರ ಅನುಭವ ಮಂಟಪವನ್ನು ನೆನಪಿಸುವಂತಿತ್ತು. ಅಲ್ಲದೆ ಹಿಂದುಳಿದ ಮಠಗಳು ಶಾಲೆ, ಕಾಲೇಜು, ಟೈನಿಂಗ್ ಸೆಂಟರ್, ಹಾಸ್ಟಲ್ ಮಾಡಿಕೊಳ್ಳಲೆಂದು ಬೆಂಗಳೂರಿನಲ್ಲಿ ಇದೂವರೆವಿಗೆ ಯಾವ ಮುಖ್ಯಮಂತ್ರಿಯೂ ಕೊಡದ ಭೂಮಿಯನ್ನು 66 ಜಾತಿ ಮಠಗಳಿಗೆ ನೀಡಿದ್ದಾರೆ ಎಂದರು.

     ಲಂಬಾಣಿ ಪೀಠದ ಶ್ರೀ ಸರದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ ಹಿಂದುಳಿದ ಜಾತಿಗಳು ರಾಜಕೀಯ ಅಧಿಕಾರಕ್ಕೆ ಬಾರದ ವಿನಹ ಜನಾಂಗದ ಏಳಿಗೆ ಹಾಗೂ ಸಂವಿಧಾನಾನ್ಮಕ ಹಕ್ಕುಗಳನ್ನು ಪಡೆಯುವುದು ಕಷ್ಟಸಾಧ್ಯ ಎನ್ನುವ ಸತ್ಯವನ್ನು ಹಿಂದುಳಿದ ಜಾತಿಗಳ ಸ್ವಾಮೀಜಿಗಳ ಒಕ್ಕೂಟ ನಿರ್ಧರಿಸಿ ಈ ಹಿಂದೆ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಯೇ ತೀರುವ ಶಪಥಗೈದ ಫಲವಾಗಿ ಅವರು ಮುಖ್ಯಮಂತ್ರಿಯಾದರು. ಇದೇ ರೀತಿ ಹಿಂದುಳಿದ ಜಾತಿಜನರು ಸ್ಥಳೀಚಿiÀು ಸಂಸ್ಥೆ ಚುನಾವಣೆಯಲ್ಲಿ ಒಗ್ಗಟ್ಟಾಗಿ ಅಧಿಕಾರ ಹಿಡಿಯಬೇಕು. ಅಧಿಕಾರ ಸಿಕ್ಕವರು ಅಧಿಕಾರದ ಫಲವನ್ನು ಸಿದ್ಧರಾಮಯ್ಯ ಅವರು ಹಂಚಿದಂತೆ ಎಲ್ಲರಿಗೂ ಸಮಾನವಾಗಿ ಹಂಚಬೇಕು ಎಂದರು.

      ಕಾರ್ಯಕ್ರಮದಲ್ಲಿ ಮಾದಾರ ಚೆನ್ನಯ್ಯ ಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಬೋವಿಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಛಲವಾದಿ ಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ಹರಳಯ್ಯ ಪೀಠದ ಶ್ರೀ ಬಸವಹರಳಯ್ಯ ಸ್ವಾಮೀಜಿ, ಕುಂಬಾರ ಪೀಠದ ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ ಅವರು ಉಪಸ್ಥಿತರಿದ್ದರು.

      ಶಾಸಕ ಸಿ.ಬಿ.ಸುರೇಶ್‍ಬಾಬು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಟಿ.ಬಿ.ಜಯಚಂದ್ರ, ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಮಾಜಿ ಶಾಸಕ ಬಿ.ಲಕ್ಕಪ್ಪ, ಚಿಂತಕ ಡಾ.ನಟರಾಜ್ ಬೂದಾಳ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link