ಬೆಂಗಳೂರು
ಬಳ್ಳಾರಿ ಗಣಿಗಾರಿಕೆ ವಿಚಾರದಲ್ಲಿ ಮುಂಬೈನಿಂದ ಸುಪಾರಿ ಕೊಟ್ಟು ಕೊಲೆ ಮಾಡುವುದಾಗಿ ಅನಿಲ್ ಲಾಡ್ಗೆ ಉದ್ಯಮಿ ಆರ್. ಶಿವಕುಮಾರ್ ಎಂಬಾತನಿಂದ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಂಗೌಂಡ್ಸ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಬಳ್ಳಾರಿಯ ಸಂಡೂರಿನಲ್ಲಿ ಗಣಿಗಾರಿಕೆ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಸಿಕ್ಕ ಬಳಿಕ ಮಾರಾಟ ಮಾಡುವ ಅಗ್ರಿಮೆಂಟ್ ಆಗಿತ್ತು. ಆದರೆ ಇಲಾಖೆಯವರು ಹಲವು ಕಾರಣ ನೀಡಿ ಸತಾಯಿಸುತಿದ್ದರು. ಆದರೆ ಗಣಿಗಾರಿಕೆ ಕೆಲಸಕ್ಕೆ ಸುಮಾರು ಮೂವತ್ತು ಕೋಟಿ ಹಣವನ್ನ ಉದ್ಯಮಿಗೆ ನೀಡಿದ್ದ ಅನಿಲ್ ಲಾಡ್, ಅನುಮತಿ ಸಿಗದಿದ್ದಲ್ಲಿ ಹಣ ವಾಪಾಸ್ ಕೊಡಬೇಕೆಂದು ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು
ಹಣ ನೀಡದೆ ಸತಾಯಿಸಿ ಮತ್ತೊಮ್ಮೆ ಭೇಟಿಗೆ ಬಂದರೆ ಕೊಲೆ ಮಾಡುವುದಾಗಿ ಉದ್ಯಮಿ ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯಮಿ ಪತ್ತೆಗಾಗಿ ಮೊಬೈಲ್ ಟವರ್ ಆಧಾರಿಸಿ ಹುಡುಕಾಟ ನಡೆಸಿರುವ ಪೊಲೀಸರು, ಉದ್ಯಮಿ ಬೆಂಗಳೂರಿನಲ್ಲಿರುವುದನ್ನ ಖಚಿತಪಡಿಸಿಕೊಂಡಿದ್ದಾರೆ. ಜೊತೆಗೆ ಆತನ ಪತ್ತೆಗೆ ಬಲೆ ಬೀಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ