ಬಿರುಗಾಳಿ-ಮಳೆಗೆ ನೆಲಕಚ್ಚಿದ ಬೆಳೆ : ಲಕ್ಷಾಂತರ ರೂ ನಷ್ಟ..!!

ಗುಬ್ಬಿ

   ಕಳೆದ ರಾತ್ರಿ ಗುಬ್ಬಿ ತಾಲೂಕಿನ ಹಲವು ಭಾಗದಲ್ಲಿ ಬೀಸಿದ ಬಿರುಗಾಳಿ ಮಳೆಗೆ ವಾಸದ ಮನೆಗಳ ಮೇಲ್ಚಾವಣಿ ಸೇರಿದಂತೆ ರೈತರ ಬಾಳೆ.ತೆಂಗು.ಅಡಿಕೆ ಮತ್ತು ಕೃಷಿ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

    ತಾಲ್ಲೂಕಿನ ಕಡಬ ಹೋಬಳಿಯ ಹಲವಾರು ಗ್ರಾಮಗಳಲ್ಲಿ ಭಾರಿ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಕಸಬ ಹೋಬಳಿಯ ಹಲವು ಕಡೆಗಳಲ್ಲಿ ಬಾಳೆ ಮತ್ತು ಅಡಿಕೆ ತೋಟಗಳು ಭಾರಿ ಪ್ರಮಾಣದಲ್ಲಿ ಬೀಸಿದ ಬಿರುಗಾಳಿ ಮಳೆಗೆ ನೆಲಕಚ್ಚಿವೆ, ಇನ್ನು ತಾಲ್ಲೂಕಿನ ಕಲ್ಲೂರು, ಸಿ.ಎಸ್.ಪುರ ಭಾಗದಲ್ಲಿ ಬೀಸಿದ ಬಿರುಗಾಳಿ ಮಳೆಗೆ ಅಡಿಕೆ, ಬಾಳೆ ಗಿಡಗಳು ಸೇರಿದಂತೆ ರೈತರ ತೋಟದ ಮನೆಗಳ ಮೇಲ್ಚಾವಣಿ ಉರುಳಿ ಬಿದ್ದಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

    ತಾಲೂಕಿನ ಕಡಬಾ ಹೋಬಳಿ ಯಡವನಹಳ್ಳಿ ಗ್ರಾಮದಲ್ಲಿ ತಡ ರಾತ್ರಿ ಸುನಂದಮ್ಮ ಎಂಬುವವರ ಮನೆಯ ಮೇಲೆ ಹಾಕಿದ್ದ ಶೀಟುಗಳು ಹಾರಿಹೊಗಿದ್ದು ಮನೆಯಲಿದ್ದ್ಲ ರಾಗಿ, ಭತ್ತ ಸೇರಿದಂತೆ ಮನೆಯ ಗೃಹ ಉಪಯೋಗಿ ವಸ್ತುಗಳೆಲ್ಲ ಸಂಪೂರ್ಣವಾಗಿ ಜಲಾವೃತವಾಗಿದೆ. ಇಡೀರಾತ್ರಿ ನಿದ್ದೆಯಿಲ್ಲದೆ ಮನೆಯ ಸಾಮಾನುಗಳನ್ನು ಸಂರಕ್ಷಿಸುವಲ್ಲಿ ಕಾಲಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಕಳೆದ ರಾತ್ರಿ ಬೀಸಿದ ಬಿರುಗಾಳಿ ಮಳೆಯಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಸುನಂದಮ್ಮ ತಿಳಿಸಿದರು. ಹೊನ್ನಶೆಟ್ಟಿಹಳ್ಳಿ ಗ್ರಾಮದ ರೈತ ಅಂದಾನಯ್ಯ ಅವರ ವಾಸದ ಮನೆಯ ಮೇಲ್ಚಾವಣಿ ಬಿರುಗಾಳಿಯಿಂದ ಹಾರಿ ಹೋಗಿದ್ದು ಇರುವ ಮನೆಯನ್ನು ಕಳೆದಕೊಂಡು ನಿರಾಶ್ರಿತರಾಗಿದ್ದಾರೆ.

     ಕಡಬಾ ಹೋಬಳಿಯ ರೈತರುಗಳಾದ ಗಂಗಾಧರಯ್ಯ, ಮಹಾಲಿಂಗಯ್ಯ, ಮನೋಜ್ ಮತ್ತು ಮೋಹನ್ ಕುಮಾರ್ ಎಂಬುವವರ ತೋಟಗಳು ಸಹ ಬಿರುಗಾಳಿಗೆ ಮಳೆಯಿಂದ ಸಂಪೂರ್ಣವಾಗಿ ಹಾಳಾಗಿದ್ದು 20 ತೆಂಗಿನ ಮರ 150 ಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಕಚ್ಚಿವೆ. ಕಷ್ಟ ಪಟ್ಟು ಜೀವನಾಧಾರಕ್ಕಾಗಿ ಅಂತರ್ಜಲ ಕುಸಿತದ ನಡುವೆಯೂ ಬೆಳೆದಿದ್ದ ಬೆಳೆಗಳು ಒಂದೇ ರಾತ್ರಿಗೆ ನೆಲಕಚ್ಚಿದ್ದು ರೈತರ ಬದುಕು ಸಂಕಷ್ಟಮಯವಾಗಿದೆ.

     ಕಳೆದ ಹಲವು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಸಂಕಷ್ಠದಲ್ಲಿದ್ದ ರೈತರಿಗೆ ಬಾರಿ ಪ್ರಮಾಣದಲ್ಲಿ ಬೀಸಿದ ಬಿರುಗಾಳಿ ಮಳೆಯಿಂದ ರೈತರು ಕೊಳವೆ ಬಾವಿಗಳಿಂದ ಬರುವ ಅಷ್ಟಿಷ್ಟು ನೀರಿನಿಂದ ಬೆಳೆದ ಕೃಷಿ ಬೆಳೆಗಳು ಹಾಳಾಗಿದ್ದು ಅಂತರ್ಜಲ ಕುಸಿತದಿಂದಾಗಿ ರೈತರ ಅಡಿಕೆ.ತೆಂಗು.ಬಾಳೆ ಸೇರಿದಂತೆ ಬಹುತೇಕ ಕೃಷಿ ಬೆಳೆಗಳು ಬೀಕರ ಬಿರುಗಾಳಿ ಮಳೆಗೆ ಸಿಲುಕಿ ಸಂಪೂರ್ಣವಾಗಿ ಹಾಳಾಗಿದ್ದು ರೈತರ ಬದುಕು ದಯನೀಯ ಸ್ಥಿತಿ ತಲುಪಿದೆ.

     ತಾಲ್ಲೂಕಿನ ಸಿ.ಎಸ್.ಪುರ, ಕಲ್ಲೂರು, ಕೆ.ಕಲ್ಲಹಳ್ಳಿ ಕಲ್ಲೂರು ಕ್ರಾಸ್ ಸೇರಿದಂತೆ ಕಡಬ ಸುತ್ತ ಮುತ್ತಲ ಪ್ರದೇಶದಲ್ಲಿ ಬಿರುಗಾಳಿ ಮಳೆಯಾಗಿದ್ದು ಎತ್ರರಕ್ಕೆ ಬೆಳೆದಿದ್ದ ಅಡಿಕೆ ಮರಗಳು, ಗೊನೆ ಭರಿತ ಬಾಳೆ ಗಿಡಗಳು ಉರುಳಿ ಬಿದ್ದಿವೆ. ಕಸಬ ಹೋಬಳಿ ವ್ಯಾಪ್ತಿಯ ಹಲವು ಭಾಗದಲ್ಲಿ ಸಾಕಷ್ಟು ಅಡಿಕೆ, ತೆಂಗು ಮತ್ತು ಬಾಳೆ ಗಿಡಗಳು ಧರೆಗುರುಳಿವೆ. ಬಿರುಗಾಳಿಯ ರಭಸಕ್ಕೆ ಮಾವಿನ ತೋಟಗಳಲ್ಲಿ ಮಾವಿನ ಕಾಯಿಗಳು ಉದುರಿ ಬಿದ್ದಿದ್ದು ಕೆಲ ತೆಂಗಿನ ತೋಟಗಳಲ್ಲಿ ತೆಂಗಿನ ಕಾಯಿ ಗೊನೆಗಳು ಉರುಳಿ ಬಿದ್ದಿವೆ. ಉತ್ತಮವಾಗಿ ಫಸಲು ಬಿಡುತ್ತಿದ್ದ ತೆಂಗು, ಅಡಿಕೆ, ಬಾಳೆ ಸೇರಿದಂತೆ ಇತರೆ ಬೆಳೆಗಳು ಬಿರುಗಾಳಿ ಮಳೆಯಿಂದ ನೆಲ್ಲಕ್ಕುರುಳಿದ್ದು ರೈತರು ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ.

       ಕಳೆದ ಕೆಲ ವರ್ಷಗಳಿಂದ ಮಳೆ ಬಾರದೆ ಅಂತರ್ಜಲ ಕುಸಿತಗೊಂಡಿದ್ದು ಲಕ್ಷಾಂತರ ರೂ ಖರ್ಚು ಮಾಡಿ ಕೊರೆಸಿದ ಕೊಳವೆ ಬಾವಿಗಳಲ್ಲಿ ನೀರು ಬಾರದೆ ರೈತರ ಜೀವನಾಡಿಯಾಗಿದ್ದ ಕೃಷಿ ಬೆಳೆಗಳು ಒಣಗುತ್ತಿದ್ದು ಮಳೆ ಬಂದರೆ ಸಾಕು ಎಂದು ಮುಗಿಲತ್ತ ಮುಖ ಮಾಡಿದ್ದರು ಆದರೆ ಕಳೆದ ಕೆಲ ದಿನಗಳಿಂದ ಉತ್ತಮವಾಗಿ ಮಳೆ ಬಿದ್ದಿದ್ದು ರೈತರ ಮುಖದಲ್ಲಿ ಖುಷಿ ತಂದಿದೆ ಆದರೆ ಮಳೆಯ ಜೊತೆಗೆ ಬೀಕರವಾದ ಬಿರುಗಾಳಿ ಬೀಸಿದ್ದರಿಂದಾಗಿ ರೈತರು ಕಷ್ಟ ಪಟ್ಟು ಬೆಳೆದಿದ್ದ ತೆಂಗು, ಅಡಿಕೆ.ಬಾಳೆ ಸೇರಿದಂತೆ ಬಹುತೇಕ ಕೃಷಿ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು ಮುಂದಿನ ದಿನಗಳಲ್ಲಿ ಬದುಕು ಸಾಗಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link