ನ್ಯಾಯವಾದಿಗಳ ಸಂಘದಿಂದ ಪ್ರತಿಭಟನೆ

ಹರಪನಹಳ್ಳಿ

       ವಕೀಲ ಅವಿನಾಶ್ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ತಾಲೂಕು ನ್ಯಾಯವಾದಿಗಳ ಸಂಘದಿಂದ ಸೋಮುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ ಡಾ.ಮಧು ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

         ಹೊಳೆನರಸೀಪುರ ಬಸ್‍ನಿಲ್ದಾಣದಲ್ಲಿ ಬಸ್ ಎಲ್ಲಿ ಹೋಗುತ್ತದೆ ಎಂದು ಕೇಳಿದ ವಕೀಲ ಅವಿನಾಶ್‍ಗೆ ಕಂಡಕ್ಟರ್ ತಮ್ಮಣ್ಣ ಕಪಾಳಮೋಕ್ಷ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆ. ಅಷ್ಟೆ ಅಲ್ಲದೇ ಟಿಸಿ ರೂಂನಲ್ಲಿ ಕೂಡಿಹಾಕಿ ಜಾಕ್‍ರಾಡ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

         ಕಂಡಕ್ಟರ್ ಮೇಲೆ ಪ್ರಕರಣ ದಾಖಲಿಸುವ ಬದಲು, ವಕೀಲರ ಮೇಲೆಯೆ ಸುಳ್ಳು ಕೇಸು ದಾಖಲಿಸಿದ್ದಾರೆ. ಆಗಾಗಿ ಸಂಬಂಧಪಟ್ಟ ಆರೋಪಿಗಳ ವಿರುದ್ದ ದೂರು ದಾಖಲಿಸಬೇಕು, ಈ ಕೂಡಲೇ ಅವರನ್ನು ಬಂಧಿಸಬೇಕು.

          ವಕೀಲರ ಸಂಘದ ಅಧ್ಯಕ್ಷ ಅಜ್ಜಪ್ಪ, ಕಾರ್ಯದರ್ಶಿ ಇದ್ಲಿ ರಾಮಪ್ಪ, ವಿ.ಹೂಲೆಪ್ಪ, ಹಿರಿಯ ವಕೀಲರಾದ ಗಂಗಾಧರ ಗುರುಮಠ್, ಕೆ.ಜಗದಪ್ಪ, ಜಗದೀಶಗೌಡ್ರು, ಜಲಾಲಿ ಸೀಮಾ, ಕೊಟ್ರೇಶ್, ತಿರುಪತಿ, ಬಸವರಾಜ್, ಕೋಡಿಹಳ್ಳಿ ಪ್ರಕಾಶ್, ವಿ.ಜಿ.ಪ್ರಕಾಶ, ಮಲ್ಲಿಕಾರ್ಜುನ, ಮೃತ್ಯುಂಜಯ, ಲಿಂಗನಗೌಡ, ಗಿರೀಶ ಇತರರಿದ್ದರು

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap