ಚಿಕ್ಕನಾಯಕನಹಳ್ಳಿ
ಗಿರವಿ ಅಂಗಡಿ ಮಾಲೀಕರು ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಕಳ್ಳತನದಿಂದ ಎಚ್ಚರ ವಹಿಸುವ, ಮೋಸ ಹೋಗದಿರುವ ಬಗ್ಗೆ ಎಚ್ಚರಿಕೆ ವಹಿಸಲು ಅಂಗಡಿ ಮುಂಭಾಗ ಸಲಹಾ ಸೂಚನೆಗಳನ್ನು ಹಾಕುವಂತೆ ಸರ್ಕಲ್ ಇನ್ಸ್ಪೆಕ್ಟರ್ ಕೆ.ಸುರೇಶ್ ತಿಳಿಸಿದರು.
ಪಟ್ಟಣದ ಪೋಲಿಸ್ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಹಾಗೂ ಗಿರವಿ ಅಂಗಡಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಜ್ಯೂಯಲರಿ ಅಂಗಡಿಗಳಿಗೆ ಗ್ರಾಹಕರು ಬಂದಾಗ ಚಿನ್ನಾಭರಣ ಸಾಲ ನೀಡುವಾಗ ಬ್ಯಾಂಕ್ ವಹಿವಾಟು ಬಗ್ಗೆ ತಿಳಿಸುವಂತೆ ಯಾರೇ ಅಪರಿಚಿತರು ಬಂದರೂ ಅವರ ಖಾತೆಯ ಯಾವುದೇ ಮಾಹಿತಿ ನೀಡದಂತೆ ತಿಳಿಸುವ ಬಗ್ಗೆ ಆರ್.ಬಿ.ಐ ನಿರ್ದೇಶನವಿರುವಂತೆ ಮಾತ್ರ ಚಿನ್ನಾಭರಣಗಳ ಸಾಲಕ್ಕೆ ಬಡ್ಡಿ ಪಡೆಯಬೇಕು, ಹೆಚ್ಚಿನ ಬಡ್ಡಿ ಪಡೆಯುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ ಈ ಬಗ್ಗೆ ಮತ್ತೊಮ್ಮೆ ದೂರುಗಳು ಬಂದರೆ ಕ್ರಮಕೈಗೊಳ್ಳಲಾಗುವುದು ಎಂದು ಸಲಹೆ ನೀಡಿದರು.
ಪಟ್ಟಣದಲ್ಲಿರುವ ಎ.ಟಿ.ಎಂಗಳಲ್ಲಿ ಸರಿಯಾದ ಸೆಕ್ಯೂರಿಟಿ ವ್ಯವಸ್ಥೆಯಿಲ್ಲ, ಎ.ಟಿ.ಎಂ ಮುಂಭಾಗವೇ ಸೆಕ್ಯುರಿಟಿ ಮಲಗುತ್ತಾರೆ ಇದರಿಂದ ಕಳ್ಳರು ಏನು ಬೇಕಾದರೂ ಮಾಡಬಹುದು ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಎಚ್ಚರ ವಹಿಸಿ ಎಂದ ಅವರು, ಬ್ಯಾಂಕಿಗೆ ವಯಸ್ಸಾದವರು ಬಂದಾಗ ಅವರಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಕೆಲಸ ಮಾಡಿಕೊಡಿ, ಬ್ಯಾಂಕಿನಲ್ಲಿ ಜನಜಂಗುಳಿ ಹೆಚ್ಚಾಗುತ್ತಿದೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಗ್ರಾಹಕರಿಗೆ ತ್ವರಿತವಾಗಿ ಕೆಲಸವಾಗುವಂತೆ ನೋಡಿಕೊಳ್ಳಬೇಕು ಹಾಗೂ ಕನ್ನಡ ಭಾಷೆ ಬರುವಂತಹ ಬ್ಯಾಂಕ್ ಅಧಿಕಾರಿಗಳನ್ನು ಮುಂಭಾಗ ಕೂರಿಸಿ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಬ್ಇನ್ಸ್ಪೆಕ್ಟರ್ ನವೀನ್ಕುಮಾರ್, ಪೋಲಿಸ್ ಸಿಬ್ಬಂದಿ ಪುಟ್ಟೇಗೌಡರು ಹಾಗೂ ಬ್ಯಾಂಕ್ ಮ್ಯಾನೇಜರ್ಸ್, ಜ್ಯೂಯಲರಿ ಅಂಗಡಿ ಮಾಲೀಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
