ಕಾನೂನು ಅರಿವು ಕಾರ್ಯಕ್ರಮ

ಹರಪನಹಳ್ಳಿ

       ವಿಕಲಚೇತನರು ಪ್ರತಿಭಾವಂತರಾಗಿದ್ದು ದೇವರು ಅವರಿಗೆ ವಿಶೇಷ ಕ್ರೀಯಾಶೀಲ ವ್ಯಕ್ತಿತ್ವ ಸಧೃಢ ಮನಸ್ಸು ಉಳ್ಳವರಾಗಿರುತ್ತಾರೆ ಎಂದು ಸಿವಿಲ್‍ಹಿರಿಯ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಹೇಳಿದರು.

       ಪಟ್ಟಣ ಸರಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢಶಾಲಾ ವಿಭಾದಲ್ಲಿ ಸೋಮವಾರ ಆಯೋಜಿಸಲಾಗಿದ್ದ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸರಕಾರಿ ಪದವಿಪೂರ್ವ ಕಾಲೇಜ್ ಪ್ರೌಢಶಾಲಾ ವಿಭಾಗ ಹರಪನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಮತ್ತು ವಿಕಲಚೇತನರ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಹಾಗೂ ಅರಿವಿನ ಸಿಂಚನ ಕಾರ್ಯಕ್ರಮ ಉಧ್ಘಾಟಸಿ ಮಾತನಾಡಿದರು.

          ಭಾರತ ಸಂವಿಧಾನದಲ್ಲಿ ಕಾನೂನು ಎಲ್ಲಾ ವರ್ಗದವರಿಗೆ ಎಲ್ಲಾ ಜಾತಿಯವರಿಗೆ ಒಂದೇ ಆಗಿದ್ದು ಕಾನೂನಿನ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಈ ದೇಶದಲ್ಲಿ ಆಪರಾಧಿ. ನಿರಪರಾಧಿಗೂ ಒಂದೇ ಕಾನೂನು ಯಾರಿಗೂ ತಾರತಮ್ಯಾ ಮಾಡುವಂತಿಲ್ಲ ಸ್ವಾತಂತ್ರ್ಯ ಪೂರ್ವದಲ್ಲಿ ರಾಜರ ಆಡಳಿತವಿತ್ತು ಆದರೆ ಸ್ವಾತಂತ್ರ್ಯ ಬಂದಾಗಿನಿಂದ ರಾಜರ ಆಡಳಿತ ಮಟ್ಟಹಾಕಿ ದೇಶದ ಯಾವುದೇ ನಾಗರಿಕರಿಗೆ ಎಲ್ಲಾದರೂ ಬಧುಕುವ ಸ್ವಾತಂತ್ರ್ಯ ಭಾರತ ಸಂವಿಧಾನ ಜಾರಿಯಾದಗಿಂದಲೂ ನಾಗರಿಕರಿಗೆ ಮೂಲಭೂತ ಸೌಲಭ್ಯ ಸಿಗುವಂತಾಗಿದೆ ಎಂದರು.

          ಕಾರ್ಯನಿರ್ವಾಹಕ ಆಧಿಕಾರಿ ಮಮತಾ ಹೊಸಗೌಡ್ರ ಮಾತನಾಡಿ ಹಕ್ಕು ಮತ್ತು ಕರ್ತವ್ಯಗಳು ಒಂದೆ ನಾಣ್ಯದ ಎರಡು ಮುಖಗಳು ಇದ್ದಂತೆ. ಶಿಕ್ಷಣ ಕಲಿಕೆ ಪ್ರತಿಯೋಬ್ಬರ ಹಕ್ಕು ಆಗಿದ್ದು ಶಿಕ್ಷಣದಿಂದ ವಂಚಿತರಾನ್ನಾಗಿ ತಂದೆ ತಾಯಿ ಸೇರಿದಂತೆ ಯಾರದರೂ ಕೂಡ ಮಾಡಿದರೂ ಅವರ ಮೇಲೆ ಪ್ರಕರಣ ದಾಖಲಿಸಬಹುದು ಎಂದರು.

          ವಕೀಲ ಟಿ.ಎಚ್.ಎಂ. ಮಾಹೇಶ್ ವಿಕಲಚೇತನರ ಕಾಯ್ದೆಕುರಿತು ಉಪನ್ಯಾಸ ನೀಡಿದರು, ಅಪರ ಸರ್ಕಾರಿ ವಕೀಲ ಕಣಿವಿಹಳ್ಳಿ ಮಂಜುನಾಥ್, ವಕೀಲರ ಸಂಘದ ಉಪಾದ್ಯಕ್ಷ ಕೆ. ಬಸವರಾಜ್, ಕಾರ್ಯದರ್ಶಿ ಬಿ.ಎಸ್. ವೇದಮೂರ್ತಿ ಉಪ ಪ್ರಾಚಾರ್ಯಾರು ಕುಬೇಂದ್ರ ಮೆಕ್ಕಪ್ಪನವರ್, ಎಂ.ಆರ್.ಡಬ್ಲ್ಯ ಆರ್. ಧನರಾಜ್, ಶಿಕ್ಷಕಿ ಲತಾ ರಾಠೋಡ್, ವಿಜಯಲಕ್ಷ್ಮಿ, ಅನಿತಾ, ಮೃತುಂಜಯ್ಯ, ಪೊನ್ನನಾಯ್ಕ, ಮತ್ತು ಇತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link