ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿ ಸಮಾರಂಭ ಆಯೋಜನೆ

ತಿಪಟೂರು :

       ಕಾಂಗ್ರೇಸ್ ಪ್ರಚಾರ ಸಭೆಯಾದ ರಾ.ಹೆ.206ರ ಚತುಷ್ಪತ ರಸ್ತೆ ಭೂಮಿಪೂಜೆ ಕಾಮಗಾರಿ, ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿ ಸಮಾರಂಭ ಆಯೋಜನೆ ಮಾಡಿರುವುದು ಖಂಡನೀಯ ಎಂದು ಗಂಗರಾಜು ಆರೋಪಿಸಿದರು.

       ದಿನಾಂಕ:16-12-2018ರಂದು ತಾಲ್ಲೂಕಿನ ಕೆ.ಬಿ.ಕ್ರಾಸ್‍ನಲ್ಲಿ ನಡೆದ ರಾ.ಹೆ.206ರ ಚತುಷ್ಪತ ಕಾಮಗಾರಿಗೆ ಭೂಮಿಪೂಜೆಸಲ್ಲಿಸಿರುವುದು ಕೇವಲ ಕಾಂಗ್ರೇಸ್ ಪ್ರಚಾರಸಭೆಯಾಗಿ ಬಳಸಿಕೊಂಡಿದ್ದಾರೆ. ಈ ಕಾಮಗಾರಿಗೆ ಮಾನ್ಯ ಕೇಂದ್ರ ರಸ್ತೆಸಾರಿಗೆ ಸಚಿವ ನಿತಿನ್‍ಗಡ್ಕರಿ ಹಾಗೂ ರಾಜ್ಯ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಿಗಂದರೂನಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿದ್ದು

          ಈಗ ಮೂರು ತಿಂಗಳಿನಿಂದ ಕಾಮಗಾರಿಯು ಪ್ರಗತಿಯಲ್ಲಿದೆ ಆದರೆ ಇಂದು ರಾಜ್ಯದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಹಾಗು ಸಂಸದರಾದ ಎಸ್.ಪಿ.ಮುದ್ದಹನುಮೇಗೌಡರು ಇಂದು ಭೂಮಿಪೂಜೆಯನ್ನು ನೆರವೇರಿಸಿರುವುದು ಏತಕ್ಕೆ? ಮತ್ತು ಇದರು ಸರ್ಕಾರಿ ಕಾರ್ಯಕ್ರಮವಾಗಿದ್ದರೆ ಪ್ರೋಟೋಕಾಲ್ ಪ್ರಕಾರ ಸ್ಥಳೀಯ ಶಾಸಕರು ಅಧ್ಯಕ್ಷರಾಗಬೇಕಿತ್ತು ಮತ್ತು ಈ ರಸ್ತೆ ಹಾದೂ ಹೋಗಿರು ತಾಲ್ಲೂಕುಗಳಾದ ಚಿಕ್ಕನಾಯಕನಹಳ್ಳಿ, ಗುಬ್ಬಿ, ತುಮಕೂರು, ತುರುವೇಕೆರೆ ತಾಲ್ಲೂಕಿನ ಶಾಸಕರ ಹೆಸರನ್ನು ಹಾಕಿಸಿಲ್ಲ, ಇದೆಲ್ಲದಕ್ಕಿಂತ ಹೆಚ್ಚಾಗಿ ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ, ಜಿ.ಪಂ.ಸಿ.ಈ.ಓ, ಜಿಲ್ಲಾ ಪೊಲೀಸ್ ಎಸ್.ಪಿ, ತಾಲ್ಲೂಕು ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್, ತಾ.ಪಂ ಈ.ಓ ಮತ್ತು ತಾಲ್ಲೂಕಿನ ಎಲ್ಲಾ ಅಧಿಕಾರಿವರ್ಗದವರು ಏಕೆ ಹಾಜರಿದ್ದರು ಇದು ಶಿಷ್ಠಾಚಾರ ಉಲ್ಲಂಘನೆಯಲ್ಲವೇ ಏಕೆ ಎಂದು ನೇರವಾಗಿ ಆರೋಪಿಸಿದ್ದು ಇದರಬಗ್ಗೆ ಸ್ಥಳಿಯ ಶಾಸಕರುಗಳು ವಿಧಾನಸಭಾಧ್ಯಕ್ಷರಿಗೆ ದೂರುಸಲ್ಲಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ದಿವಾಕರ್ ಮಾತನಾಡಿ ಈ ರಸ್ತೆ ಯೋಜನೆಯು ಹಿಂದಿನ ಯು.ಪಿ.ಎ.ಸರ್ಕಾರವೇ ಈ ರಸ್ತೆಯಲ್ಲಿ ಹೆಚ್ಚಿನ ವಾಹನ ಸಂಚಾರವಿಲ್ಲವೆಂದು ಇಲ್ಲಿಗೆ ಅನವಶ್ಯಕ ಎಂದು ತಿರಸ್ಕರಿಸಿದ್ದರು. ಆದರೆ ಇಂದು ಎನ್.ಡಿ.ಎ. ಸರ್ಕಾರ ಈ ರಸ್ತೆಯನ್ನು ಉನ್ನತೀಕರಿಸಿದ್ದು ಮತ್ತು ಇದು ಸಂಪೂರ್ಣ ಕೇಂದ್ರಸರ್ಕಾರದ ಹಣದಲ್ಲಿ ನಿರ್ಮಾವಾಗುತ್ತಿದ್ದು, ಇದಕ್ಕೆ ರಾಜ್ಯದ ಅನುದಾನವನ್ನು ಬಳಸಿಕೊಂಡಿಲ್ಲ ಆದರೂ ಉಪಮುಖ್ಯಮಂತ್ರಿಗಳು, ಸಂಸದರು ಯಾವ ಆಧಾರಮೇಲೆ ಎಂದು ಭೂಮಿಪೂಜೆಯನ್ನು ನೆರವೇರಿಸಿದ್ಧಾರೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link