ಮಧುಗಿರಿ
ಪಟ್ಟಣದ ಧಾನ್ಯ ವರ್ತಕರ ಸಂಘ ಹಾಗೂ ನಾಗರೀಕ ಸಮಿತಿ ವತಿಯಿಂದ ಕರೆದಿದ್ದ 3 ದಿನಗಳ ಸ್ವಯಂ ಪ್ರೇರಿತ ಲಾಕ್ ಡೌನ್ಗೆ ಪಟ್ಟಣದ ಜನರು ಉತ್ತಮವಾದಂತಹ ಸಹಕಾರ ನೀಡಿ ಭಾಗಶಃ ಯಶಸ್ವಿ ಗೊಳಿಸಿದ್ದಾರೆ.
ಪಟ್ಟಣದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಾಗರೀಕರು ಹಾಗೂ ವ್ಯಾಪಾರಸ್ಥರು ಭಯಭೀತ ರಾಗಿದ್ದಾರೆ. ಇದರಿಂದ ಪಟ್ಟಣದ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಅಂಗಡಿಗಳ ಮಾಲಿಕರು ಸಭೆ ನಡೆಸಿ ಸ್ವಯಂ ಪ್ರೇರಿತವಾಗಿ ಬಂದ್ಗೆ ಕರೆ ನೀಡಿ ಈ ಹಿಂದೆ ತಹಶೀಲ್ದಾರ್ ಡಾ.ಜಿ.ವಿಶ್ವನಾಥ್ ಹಾಗೂ ಪಿಎಸ್ಐ ಎಲ್.ಕಾಂತರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಇದಕ್ಕೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಪಟ್ಟಣದ ವ್ಯಾಪಾರಸ್ಥರು ಲಾಕ್ ಡೌನ್ ಅನ್ನು ಭಾಗಶಃ ಯಶಸ್ವಿಗೊಳಿಸಿದ್ದು ಕೆಎಸ್ಆರ್ಟಿಸಿ ಬಸ್ಸುಗಳು ಹಾಗೂ ಸರಕಾರಿ ಕಛೇರಿಗಳು, ಬ್ಯಾಂಕ್ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
