ಹಾವೇರಿ :
ಜಿಲ್ಲೆಯಲ್ಲಿ ಲಾಕ್ ಡೌನ್ ಕೊಂಚ ಸಡಿಲಿಕೆಯಾಗಲಾರಂಭಿಸಿದ್ದು, ಬಡ ಜನರು ತಮ್ಮ ಜೀವನವನ್ನು ನಡೆಸಲು ವಿವಿಧ ಕೆಲಸಗಳಿಗೆ ತೆರಳಲು ಹಾಗೂ ಅಗತ್ಯವಾದ ಸಂದರ್ಭದಲ್ಲಿ ಹೋರಗಡೆ ಹೋಗುವಾಗ ಅನುಕೂಲವಾಗುವಂತೆ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಹುಣಿಸಿಕಟ್ಟಿ ಗ್ರಾಮದ ಕಟ್ಟಡ ಕಾರ್ಮಿಕರಿಗೆ ಹಾಗೂ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರುಗಳಿಗೆ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ (ನೀಡ್ಸ್) ರಾಣೇಬೆನ್ನೂರ ವತಿಯಿಂದ ಮಾಸ್ಕ್ ಗಳನ್ನು ವಿತರಿಸಿ ಕೋರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸಲಾಯಿತು.
ನವೋದಯ ಸಂಸ್ಥೆಯ ಕಾರ್ಯವೃಂದದವರಾದ ಗುಡ್ಡಪ್ಪ ಎಂ ಮಾರಾಠೆ ಮಾತನಾಡಿ ಕೋರೊನಾ ವೈರಸ್ ಬಗ್ಗೆ ಸರ್ಕಾರ ಹಾಗೂ ಆರೋಗ್ಯ ಇಲಾಖೆ ನಿಮಗೆ ನಿರಂತರ ಜಾಗೃತಿ ಮೂಡಿಸುತ್ತಾ ಬಂದಿದೆ. ಎಲ್ಲಾ ಸಲಹೆ ಸೂಚನೆಗಳನ್ನು ಪಾಲಿಸಿಕೊಂಡು ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯವೃಂದದವರಾದ ಕರಬಸಪ್ಪ ದೇವಗಿರಿ. ಉಮೇಶ ದೊಡ್ಡಮನಿ. ಮಾಹಿಳಾ ಪ್ರತಿನಿಧಿಗಳು ಊರಿನ ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
