ತಿಪಟೂರು : ಕ್ವಾರಂಟೈನ್‍ಗಳಿಗೆ ಕಳಪೆ ಆಹಾರ ಪೂರೈಕೆ

ತಿಪಟೂರು
 
     ಕೊರೊನಾ ರೋಗದ ಹಾವಳಿಯಿಂದ ಅಂತರ ಜಿಲ್ಲೆ ಅಂತರರಾಜ್ಯದಿಂದ ಬಂದಂತಹ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಇಲ್ಲಿ ಸಮರ್ಪಕ ಆಹಾರ, ನೀರು ಮತ್ತು ಇತರೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ನಾವು ಇನ್ನೂ ಇಲ್ಲಿಯೇ ಇದ್ದರೆ ಇನ್ನಿತರೆ ಕಾಯಿಲೆಗಳೂ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದು ನಗರದ ಬಲಿಜ ಸಮಾಜದ ವಿದ್ಯಾರ್ಥಿನಿಲಯದಲ್ಲಿ ಕ್ಯಾರಂಟೈನ್‍ಗಳು ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾರೆ.
     ಇಂದು ಬಎಳಗ್ಗೆ ಕೊಟ್ಟ ಚಿತ್ರಾನ್ನದಲ್ಲಿ ಅಕ್ಕಿಯೂ ಬೆಂದರೇ ಇರಲಿಲ್ಲ, ಇನ್ನು ಇವರು ಕೊಡುವ ಚಪಾತಿ ಅರ್ಧಬೆಂದಿದ್ದರೆ ಉಳಿದ್ದು ಬೆಂದೇ ಇರುವುದಿಲ್ಲ ನಿಷೇದಿತ ಪ್ಲಾಸ್ಟಿಕ್ ಬಳಸಿದರೆ ರಸ್ತೆಬದಿಯ ಬಡವರ ಹೋಟೆಲ್‍ಗಳಿಗೆ ದಂಡವಿದಿಸುವ ಪ್ರಾಮಾಣಿಕ ಅಧಿಕಾರಿಗಳು ಇಂದೇಕೆ ಕಳಪೆಗುಣಮಟ್ಟದ ಪ್ಲಾಸ್ಟಿಕ್‍ನಿಂದ ಪೊಟ್ಟಣ ಕಟ್ಟಿರುವ ಆಹಾರವನ್ನು ತಂದು ನೀಡುತ್ತಾರೆಂದು ಆರೋಪಿಸಲಾಗಿದ್ದು ಇಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಸೂಕ್ತವಾದ ಕುಡಿಯುವ ನೀರು, ಶೌಚಾಲಯವಿಲ್ಲ ಇನ್ನೂ ಶೌಚಾಲಯಗಳನ್ನು ಸ್ವಚ್ಚಮಾಡಿ ಎಷ್ಟೋದಿನಗಳು ಕಳೆದಿದ್ದರು ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲಾ ಇನ್ನೂ ನಾವು ಇಲ್ಲೇ ಇದ್ದರೆ ಕೊರೊನಾ ರೋಗ ಬರುವುದಿರಲಿ ಅದಕ್ಕೂ ಮೊದಲೇ ಬೇರೆ ರೋಗಗಳು ಬಂದು ಸಾವು ಶಾಶ್ವತವಾಗಿ ಆಸ್ಪತ್ರೆ ಸೇರುವ ಭಯವಿದೆ ಎಂದು ಮಹಾರಾಷ್ಟ್ರಕ್ಕೆ ಹೋಗಿ ಹಿಂದಿರುಗಿದ ವಾಹನ ಚಾಲಕ ತಿಳಿಸಿದರು.
ಪೌಷ್ಠಿಕ ಆಹಾರ ಇಲ್ಲವೇ :
      ಕೊರೊನಾ ರೋಗಕ್ಕೆ ಯಾವುದೇ ಲಸಿಕೆ ಇಲ್ಲ, ಇದನ್ನು ಬರುವ ಮುನ್ನವೇ ಮತ್ತು ನಂತರ ತಡೆಗಟ್ಟಬೇಕೆಂದರೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು ಆದರೆ ಇಲ್ಲಿ ಕ್ವಾರಂಟೈನ್‍ಗೆ ನೀಡುತ್ತಿರುವ ಆಹಾರದಲ್ಲಿ ಪೌಷ್ಠಿಕಾಂಶವಿರಲಿ ಯಾವುದೇ ಸತ್ವವೂ ಇಲ್ಲ ಜೊತೆಗೆ ಇವರು ಕೊಡುವ ಚಪಾತಿಯನ್ನು ತಿಂದರೆ ನಮಗೆ ಇಲ್ಲದ ಕಾಯಿಲೆಗಳು ಬರುತ್ತವೆ. ಇವರು ಕೊಡಲು ಆಗದಿದ್ದರೆ ನಮಗೆ ತಿಳಿಸಲಿ ನಮ್ಮ ಮನೆಯಿಂದಲೇ ಉತ್ತಮವಾದ ಆಹಾರವನ್ನು ನಾವು ತರಿಸಿಕೊಳ್ಳುತ್ತೇವೆ ಅದಕ್ಕೂ ಸೋಂಕಿನ ಭಯವೆಂದು ಅಧಿಕಾರಿಗಳು ಆಸ್ಪದ ನೀಡುತ್ತಿಲ್ಲ ನಾವು ಇಲ್ಲಿನ ಆಹಾರವನ್ನು ತಿನ್ನದೇ ಬದುಕುತ್ತಿದ್ದೇವೆ.
ನಿಷೇದಿತ ಪ್ಲಾಸ್ಟಿಕ್ ಪೊಟ್ಟಣ :
 
      ನಗರಸಭೆಯ ಅಧಿಕಾರಿಗಳು ನಗರದಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿದೆ ಇನ್ನು ಯಾರು ಸಹ ಪ್ಲಾಸ್ಟಿಕ್‍ಬಳಸಿ ಆಹಾರವನ್ನು ಕಟ್ಟಿಕೊಡುವ ಹಾಗಿಲ್ಲ, ಹಾಗೇನಾದರು ಪ್ಲಾಸ್ಟಿಕ್ ಬಳಸಿದರೆ ಅವರಿಗೆ ದಂಡವನ್ನು ವಿಧಿಸಿದಾರೆ. ಇವರು ಪ್ಲಾಸ್ಟಿಕ್ ನಿಷೇದಿಸಿರುವುದು ಪ್ರಜೆಗಳ ದೃಷ್ಠಿಯಿಂದ ಒಳ್ಳಯದೆ ಆದರೆ ಇವರೇ ನಿಷೇದಿಸಿರುವ ಪ್ಲಾಸ್ಟಿಕ್‍ನಿಂದ ಆಹಾರ ಪೊಟ್ಟಣವನ್ನು ಕಟ್ಟಿದರೆ ಯಾರಿಗೂ ತೊಂದರೆ ಯಾಗುವುದಿಲ್ಲವೇ? ಸಾರ್ವಜನಿಕರಿಗೆ ಒಂದು ನ್ಯಾಯವಾದರೆ ಅಧಿಕಾರಿಗಳಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸುವಂತಾಗಿದೆ.
ಶೌಚಾಲಯಗಳಿಗೆ ಬಾಗಿಲಿಲ್ಲ ಸ್ವಚ್ಚಮಾಡಿ ಎಷ್ಟು ದಿನವಾಗಿದೆಯೋ? :
        ಇನ್ನು ಇಲ್ಲಿ ಕ್ವಾರಂಟೈನ್‍ಗಳಾಗಿರುವ ವ್ಯಕ್ತಿಗಳು ಕಳುಹಿಸಿರುವ ಪೋಟೋಗಳಲ್ಲಿ ಶೌಚಾಲಯಗಳ ಬಾಗಿಲಿಗೆ ಸೂಕ್ತವಾದ ಕದಗಳೇ ಇಲ್ಲ, ಇದ್ದರೂ ಮುರಿದು ಬಿದ್ದಿವೆ, ಇನ್ನೂ ಶೌಚಾಲಯದಲ್ಲಿ ನೀರು ಸೂಕ್ತವಾಗಿಲ್ಲ ಇವುಗಳನ್ನು ಸ್ವಚ್ಚಮಾಡಿ ಎಷ್ಟು ದಿನ ಕಳೆದಿದಿಯೇ ಎಂಬುದು ತಿಳಿಯದಾಗಿದ್ದು ಕೊರೊನಾಗಿಂತ ದೊಡ್ಡ ಮಹಾಮಾರಿಯನ್ನು ಮೈಮೇಲೆ ಎಳೆದುಕೊಂಡು ಹೋಗುವ ಪರಿಸ್ಥಿತಿಯಲ್ಲಿ ಕ್ವಾರಂಟೈನ್‍ಗಳಿದ್ದಾರೆ.
       ಕೊರೊನಾ ಉಲ್ಬಣೀಸುತ್ತಿರುವ ಈಗಲಾದರೂ ತಾಲ್ಲೂಕು ಆಡಳಿತ ಇತ್ತ ಗಮನ ಹರಿಸಿ ಮುಂದೆಯಾದರೂ ಪೌಷ್ಠಿಕ ಆಹಾರದೊಂದಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಿ ಎಂಬುದು ಕ್ವಾರಂಟೈನ್‍ಗಳ ಹಿತಕಾಯಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap