ಚಿತ್ರದುರ್ಗ:
ಪ್ರವಾದಿ ಮಹಮದ್ ಪೈಗಂಬರ್ರವರ ಜನುಮದಿನವನ್ನು ಈದ್ಮಿಲಾದ್ ಹಬ್ಬವನ್ನಾಗಿ ಆಚರಿಸುತ್ತಿರುವುದರಿಂದ ಗಾಂಧಿವೃತ್ತವನ್ನು ಹಸಿರು ಹಾಗೂ ಬಿಳಿಬಟ್ಟೆಯಿಂದ ಸಿಂಗರಿಸಲಾಗಿದೆ.ಪ್ರವಾಸಿ ಮಂದಿರದ ಮುಂಭಾಗದಿಂದ ಗಾಂಧಿವೃತ್ತದವರೆಗೆ ರಸ್ತೆ ಮಧ್ಯಭಾಗದ ವಿಭಜಕಕ್ಕೆ ಹಸಿರು ಭಾವುಟಗಳನ್ನು ಕಟ್ಟಲಾಗಿದೆ.
ಕೊನೆಯ ಪ್ರವಾದಿಯಾಗಿ ಬಂದ ಮಹಮದ್ ಪೈಗಂಬರ್ ಕೇವಲ ಮುಸ್ಲಿಂ ಜನಾಂಗಕ್ಕಲ್ಲ. ಇಡೀ ಮಾನವ ಕುಲಕ್ಕೆ ಕುರಾನ್ ಮೂಲಕ ಶಾಂತಿಯ ಸಂದೇಶ ಸಾರಿದ ಧೂತ. ಇಸ್ಲಾಂ ಧರ್ಮವನ್ನು ಪರಿಪಾಲನೆ ಮಾಡಿಕೊಂಡು ಬರುತ್ತಿರುವವರೆಲ್ಲಾ ಅವರ ಅನುಯಾಯಿಗಳು ಹಾಗಾಗಿ ನ.10 ರ ಇಂದು ಸಮಸ್ತ ಮುಸ್ಲಿಂ ಬಾಂಧವರು ಈದ್ಮಿಲಾದ್ ಹಬ್ಬವನ್ನು ಅತ್ಯಂತ ವಿಜೃಂಭಣೆ ಸಡಗರ ಸಂಭ್ರಮಗಳಿಂದ ಆಚರಿಸುವುದುಂಟು.
ಬಸವೇಶ್ವರ ಟಾಕೀಸ್ ಸಮೀಪ, ಹೊರಪೇಟೆ, ಅಂಜುಮಾನ್ ಸರ್ಕಲ್ ಬಳಿ ಶಾಂತಿಯ ಸಂಕೇತವಾಗಿರುವ ಹಸಿರು ಮತ್ತು ಬಿಳಿ ಬಟ್ಟೆಗಳನ್ನು ಅಲ್ಲಲ್ಲಿ ಸುತ್ತಿದ್ದು. ಹಸಿರು ಭಾವುಟಗಳನ್ನು ನೆಡಲಾಗಿದೆ. ಅಯೋಧ್ಯೆ ಬಾಬ್ರಿ ಮಸೀದಿ ತೀರ್ಪು ಸುಪ್ರೀಂಕೋರ್ಟ್ನಿಂದ ಹೊರ ಬಂದ ಹಿನ್ನೆಲೆ ಹಾಗೂ ಈದ್-ಮಿಲಾದ್ ಹಬ್ಬದ ಪ್ರಯುಕ್ತ ಅಲ್ಲಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಕಾಯ್ದುಕೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
