ಪಾರ್ಕ್‍ಗಳ ನಿರ್ವಹಣೆ ಎಲ್ಲರ ಹೊಣೆ : ವಿನೋತ್‍ಪ್ರಿಯಾ

ಚಿತ್ರದುರ್ಗ:

   ಪಾರ್ಕ್‍ಗಳ ನಿರ್ವಹಣೆ ಕೇವಲ ನಗರಸಭೆಯ ಜವಾಬ್ದಾರಿಯಲ್ಲ ಪ್ರತಿಯೊಬ್ಬರು ಕಾಳಜಿ ವಹಿಸುವಂತೆ ಜಿಲ್ಲಾಧಿಕಾರಿ ಆರ್.ವಿನೋತ್‍ಪ್ರಿಯಾ ತಿಳಿಸಿದರು.

   ನಗರಸಭೆ, ಜಿಲ್ಲಾಡಳಿತ ನಗರಾಭಿವೃದ್ದಿ ಕೋಶದ ವತಿಯಿಂದ ತುರುವನೂರು ರಸ್ತೆಯಲ್ಲಿರುವ ಬಿ.ಎಲ್.ಗೌಡ ಲೇಔಟ್‍ನಲ್ಲಿರುವ ಎರಡು ಉದ್ಯಾನವನಗಳಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ನಮ್ಮ ಚಿತ್ತ ಸ್ವಚ್ಚತೆಯತ್ತ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.
ಸಮಯಕ್ಕೆ ಸರಿಯಾಗಿ ಮಳೆಬೆಳೆಯಾಗಬೇಕಾದೆ ಮೊದಲು ಪರಿಸರವನ್ನು ಸಂರಕ್ಷಿಸುವ ಕಾಳಜಿ ಎಲ್ಲರಲ್ಲಿಯೂ ಇರಬೇಕು.

    ಗಿಡ ನೆಟ್ಟ ಮೇಲೆ ದೊಡ್ಡ ಮರವಾಗುವತನಕ ಜೋಪಾನವಾಗಿ ಕಾಪಾಡಬೇಕು. ಪ್ರತಿಯೊಂದು ಮನೆಯಲ್ಲಿಯೂ ಮಳೆನೀರು ಕೊಯ್ಲು ಪದ್ದತಿ ಅಳವಡಿಸಿಕೊಂಡರೆ ನೀರಿನ ಅಭಾವ ನೀಗಿಸಿಕೊಳ್ಳಲು ನೆರವಾಗಲಿದೆ. ಹೊಸದಾಗಿ ಮನೆ ಕಟ್ಟುವವರು ಮಳೆ ನೀರು ಕೊಯ್ಲು ಪದ್ದತಿ ಅನುಸರಿಸಿದರೆ ಬ್ಯಾಂಕ್‍ನಲ್ಲಿ ಸಾಲ ನೀಡಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಬ್ಯಾಂಕ್‍ನವರ ಜೊತೆ ಸದ್ಯದಲ್ಲಿಯೇ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.

    ಮಳೆ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಸಂರಕ್ಷಣೆ ಮಾಡಿಕೊಂಡರೆ ಅಂರ್ತಜಲ ಮಟ್ಟ ವೃದ್ದಿಯಾಗಲಿದೆ. ಬರಪೀಡಿತ ಚಿತ್ರದುರ್ಗಕ್ಕೆ ಜಲಸಂರಕ್ಷಣೆಯೊಂದೆ ಮಾರ್ಗವಾಗಿರುವುದರಿಂದ ಸಾರ್ವಜನಿಕರು ಪ್ರಕೃತಿಯಲ್ಲಿ ಸಿಗುವ ಸಂಪತ್ತನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಬೇಕು. ಮನೆಯಲ್ಲಿಯೇ ಹಸಿ ಕಸ-ಒಣ ಕಸವನ್ನು ವಿಂಗಡಿಸಿ ದಿನನಿತ್ಯವೂ ಬೆಳಗಿನ ಜಾವ ಮನೆಬಾಗಿಲಿಗೆ ಬರುವ ನಗರಸಭೆ ವಾಹನಗಳಿಗೆ ಹಾಕಿ ಪರಿಸರವನ್ನು ಕಾಪಾಡುವಂತೆ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿ ಯೋಜನಾ ನಿರ್ದೇಶಕ ರಾಜಶೇಖರ್, ನಗರಸಭೆ ಪೌರಾಯುಕ್ತರಾದ ಚಂದ್ರಪ್ಪ, ಪರಿಸರ ಇಂಜಿನಿಯರ್ ಜಾಫರ್, ಹೆಲ್ತ್‍ಇನ್ಸ್‍ಪೆಕ್ಟರ್‍ಗಳಾದ ಸರಳ, ಭಾರತಿ ಸಮುದಾಯ ಸಂಘಟಕಿ ಮಂಜುಳ, ಪೌರ ನೌಕರರು ಹಾಗೂ ಚಿತ್ರದುರ್ಗ ಘಟಕ ಫೇವಾರ್ಡ್ ಎನ್.ಜಿ.ಓ.ಒಕ್ಕೂಟ, ವಿವಿಧ ಸಂಘ ಸಂಸ್ಥೆಗಳವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link