ಮಂಡ್ಯ:
ಸಿನಿಮಾ ಮತ್ತು ರಾಜಕೀಯದಲ್ಲಿ ಮಂಡ್ಯದ ಗಂಡು ಎಂದರೆ ನೆನಪಿಗೆ ಬರುವುದು ಅಂಬರೀಷ್ ಆದರೆ ಗಡಿಯಲ್ಲಿ ಮಂಡ್ಯದ ಗಂಡಿನ ತಾಕತ್ತನ್ನು ಪ್ರದರ್ಶಿಸಿ ಹುತಾತ್ಮರಾದ ವೀರ ಯೋಧ ಗುರು . ಪುಲ್ವಾಮಾದಲ್ಲಿ ಮೊನ್ನೆ ನಡೆದ ಉಗ್ರರ ದಾಳಿಯಲ್ಲಿ ವೀರಮರಣ ಹೊಂದಿದ್ದರು .ಗುರು ಒಬ್ಬ ಅಪ್ರತಿಮ ಯೋಧರಾದರು ತನ್ನ ಊರಿಗೆ ಬಂದಾಗ ತನ್ನ ಮೂಲ ಕಸುಬುನ್ನು ಮಾಡುವುದನ್ನು ಮರೆತಿರಲ್ಲಿಲ್ಲ. ಗುರು ತಂದೆ-ತಾಯಿ ಗುಡಿಗೆರೆಯಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡು ಮಕ್ಕಳನ್ನು ಸಾಕಿದ್ದರು.
ತಾನು ರಜೆಯ ಮೇಲೆ ಊರಿಗೆ ಆಗಮಿಸಿದ್ದಾಗ ಗುರು ತಂದೆ-ತಾಯಿ ಜೊತೆ ಅಂಗಡಿಯಲ್ಲಿ ಇಸ್ತ್ರಿ ಮಾಡುತ್ತಿದ್ದರು. ಈ ಮೂಲಕ ದೇಶ ಸೇವೆಯ ಜೊತೆಗೆ ತಮ್ಮನ್ನು ಬೆಳೆಸಲು ತಂದೆ-ತಾಯಿ ಮಾಡಿದ ವೃತ್ತಿಯ ಬಗ್ಗೆಯೂ ಅಪಾರ ಗೌರವವನ್ನು ಇಟ್ಟುಕೊಂಡಿದ್ದು ವಿಶೇಷವಾಗಿತ್ತು.
ವೀರ ಪುತ್ರ ಗುರು ಪಾರ್ಥಿವ ಶರೀರ ಎಚ್ ಎ ಎಲ್ ನಿಂದ ಗ್ರಾಮದತ್ತ ಆಗಮಿಸುತ್ತಿದ್ದು ಕೆ.ಎಂ.ದೊಡ್ಡಿಯಲ್ಲಿ ಸಾರ್ವಜನಿಕರು ತಮ್ಮ ಊರಿನ ವೀರ ಯೋಧನ ಪಾರ್ಥಿವ ಶರೀರದ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ .ಈ ಸಂಕ್ರಾಂತಿಗೆಂದು ಒಂದು ತಿಂಗಳ ಕಾಲ ಊರಿನಲ್ಲೇ ಇದ್ದ ಗುರು ಎಲ್ಲರ ಪ್ರೀತಿಯ ಸ್ನೇಹಿತ, ಊರ ಮಗನಂತಿದ್ದರು. ಊರಿನಲ್ಲಿ ಪ್ರತಿಯೊಬ್ಬರಿಗೂ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದರು. ಅಪ್ಪನ ಬಟ್ಟೆ ಇಸ್ತ್ರಿ ಅಂಗಡಿಯಲ್ಲಿಯೂ ಕೆಲಸ ಮಾಡುತ್ತಿದ್ರು. ಎಲ್ಲರೊಡನೆ ಒಂದಾಗಿ ತಿಂಗಳು ಕಾಲ ಕಳೆದ ಪ್ರೀತಿಯ ಮನೆಮಗ ಇದೇ ಫೆಬ್ರವರಿ 10ರಂದು ಕರ್ತವ್ಯಕ್ಕೆ ಮರಳಿದ್ದರು ಎಂದು ಗುರು ಅವರ ತಾಯಿ ತಮ್ಮ ಮಗನನನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/02/MND-Guru-Iron.gif)