ಮತ್ತೊಮ್ಮೆ ಮೋದಿ ಅಭಿಯಾನಕ್ಕೆ ವೀರಭದ್ರಸ್ವಾಮಿ ಯುವಕ ಸಂಘದಿಂದ ಬೆಂಬಲ

ಚಳ್ಳಕೆರೆ

         ರಾಷ್ಟ್ರದ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಕಳೆದ ಐದು ವರ್ಷಗಳಿಂದ ಆಡಳಿತ ನಡೆಸಿದ ಕೇಂದ್ರ ಎನ್‍ಡಿಎ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರಮೋದಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ಧಾರೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಮೋದಿ ಈ ರಾಷ್ಟ್ರವನ್ನು ಮುನ್ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಯುವಕರು ನರೇಂದ್ರಮೋದಿಯವರ ಗೆಲುವಿಗಾಗಿ ವ್ಯಾಪಕ ಪ್ರಚಾರ ನಡೆಸುವುದಾಗಿ ಶ್ರೀವೀರಭದ್ರಸ್ವಾಮಿ ಯುವಕ ಸಂಘದ ಅಧ್ಯಕ್ಷ ಮುರಳಿ ತಿಳಿಸಿದರು.

          ಅವರು, ಗುರುವಾರ ಸಂಜೆ ನಗರದ ಹಳೇಟೌನ್‍ನಲ್ಲಿರುವ ಶ್ರೀವೀರಭದ್ರಸ್ವಾಮಿ ವೃತ್ತದಲ್ಲಿ ಮೋದಿಯವರನ್ನು ಗೆಲ್ಲಿಸಬೇಕೆಂದು ತಮ್ಮ ಸಂಘದಿಂದ ಮುದ್ರಣಗೊಂಡ ಕರ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಸಂಘದ ನೂರಾರು ಯುವ ಮಿತ್ರರು ಮೋದಿಯವರ ಗೆಲುವಿಗಾಗಿ ಶ್ರಮಿಸುತ್ತೇವೆ. ಪ್ರತಿ ಮನೆ ಮನೆಯ ಮತದಾರರನ್ನು ಭೇಟಿ ಮಾಡಿ ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಮೋದಿಯವರನ್ನು ಬೆಂಬಲಿಸುವಂತೆ ಮನವಿ ಮಾಡುತ್ತೇವೆ. ಬಿಜೆಪಿ ಯುವ ಮುಖಂಡ ಡಿ.ಸೋಮಶೇಖರ್ ಮಾರ್ಗದರ್ಶನದಲ್ಲಿ ನಗರದೆಲ್ಲೆಡೆ ಪ್ರಚಾರ ಕಾರ್ಯವನ್ನು ಕೈಗೊಳ್ಳುವುದಾಗಿ ತಿಳಿಸಿದರು.

        ಬಿಜೆಪಿ ಯುವ ಮುಖಂಡ ಡಿ.ಸೋಮಶೇಖರ್ ಮಂಡಿಮಠ ಮಾತನಾಡಿ, ಇಂದು ದೇಶದ ಯುವಕರು ನರೇಂದ್ರಮೋದಿಯವರ ಕ್ರಿಯಾಶೀಲ ಆಡಳಿತದಲ್ಲಿ ವಿಶ್ವಾಸವನ್ನಿಟ್ಟಿದ್ದಾರೆ. ಮೋದಿಯವರಿಂದ ಮಾತ್ರ ಈ ದೇಶ ಸುಭಿಕ್ಷವಾಗಲು ಸಾಧ್ಯ ಎಂಬ ಅಖಂಡವಾದ ತೀರ್ಮಾನ ಯುವಕರದ್ದು.

          ನರೇಂದ್ರಮೋದಿ ತಮ್ಮ ಐದು ವರ್ಷಗಳ ಉತ್ತಮ ಆಡಳಿತವನ್ನು ಮತ್ತು ಸಾಧನೆಗಳನ್ನು ಜನರ ಮುಂದೆ ಇಟ್ಟಿದ್ಧಾರೆ. ಎಲ್ಲರಿಲ್ಲಿಯೂ ಈ ದೇಶ ಸುಭಿಕ್ಷವಾಗಿರಬೇಕೆಂಬ ಅಭಿಲಾಷೆ ಇದೆ. ಮೋದಿಯವರ ಆಡಳಿತದಲ್ಲಿ ವಿಶ್ವಾಸವಿದೆ. ಹಾಗಾಗಿ ಎಲ್ಲರೂ ಮೋದಿಯವರನ್ನು ಬೆಂಬಲಿಸುವ ತೀರ್ಮಾನ ಕೈಗೊಂಡಿದ್ದು, ಸ್ವಾಗತಾರ್ಹ. ನಗರದ ಎಲ್ಲಾ ಮನೆಗಳಿಗೂ ಭೇಟಿ ನೀಡುವ ಯುವಕರೊಂದಿಗೆ ಪಕ್ಷದ ಕಾರ್ಯಕರ್ತರೆಲ್ಲರೂ ಸಹ ಭೇಟಿ ನೀಡಲಿದ್ಧಾರೆ. ಯುವ ಸಂಘಟನೆ ಶಕ್ತಿಯ ಬಲದಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಕಮಲ ಅರಳಲಿದೆ ಎಂದರು.

          ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಸಿ.ಎಸ್.ಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿ ರಾಮದಾಸ್ ಮಾತೃಶ್ರೀಎನ್.ಮಂಜುನಾಥ, ಯುವಕ ಸಂಘದ ಮುಖಂಡರಾದ ಕಾಂತಣ್ಣರ ಮಂಜಣ್ಣ, ಶಿವಕುಮಾರ,  ಪ್ರಸಾದ್, ಮನೋಜ್ ಬ್ಯಾಟರಿ ಮಂಜಣ್ಣ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap