ತುರುವೇಕೆರೆ
ಶತಮಾನಗಳ ಹಿನ್ನೆಲೆ ಹೊಂದಿರುವ ತಾಲ್ಲೂಕಿನ ಮಾಯಸಂದ್ರ ಹೋಬಳಿ ಚಿಕ್ಕಬೀರನಕೆರೆ ಮಾಯಮ್ಮದೇವಿ ಹಬ್ಬ ಹಾಗೂ ಜಾತ್ರಾ ಮಹೋತ್ಸವ 24 ರಿಂದ 26 ರವರೆಗೆ ನಡೆಯಲಿದ್ದು, ಮಡೆ, ಆರತಿ ಹಾಗೂ ವೈಭವದ ಪಲ್ಲಕ್ಕಿ ಉತ್ಸವಗಳು ನಡೆಯಲಿವೆ ಎಂದು ದೇವಾಲಯ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಚೌದ್ರಿ ಟಿ.ರಂಗಪ್ಪ ತಿಳಿಸಿದರು.
ತಮ್ಮ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಶತಮಾನದ ಇತಿಹಾಸಗಳ ಹಿನ್ನೆಲೆ ಹೊಂದಿರುವ ಮಾಯಮ್ಮದೇವಿ ದೇವಾಲಯದಲ್ಲಿ ದೊಡ್ಡಮ್ಮ ಹಾಗೂ ಚಿಕ್ಕಮ್ಮ ಎಂಬ ಗ್ರಾಮದೇವತೆಗಳಿದ್ದು, ಪಶುಪಾಲನೆ, ಜನ – ಜಾನುವಾರುಗಳಿಗೆ ಗ್ರಾಮದಲ್ಲಿ ರೋಗಗಳು ಬಾರದಂತೆ ತಡೆಗಟ್ಟುವಲ್ಲಿ, ಪೌರ್ಣಮಿ ಪೂಜೆಗಳಲ್ಲಿ ಭಕ್ತರು ಬೇಡಿದ ವರವನ್ನು ಈಡೇರಿಸುವಲ್ಲಿ ಪ್ರಸಾದ ನೀಡುವ ಈ ಗ್ರಾಮದೇವತೆಗೆ ರಾಮಸಾಗರ, ವಿಠಲಾಪುರ, ದೊಡ್ಡಬೀರನಕೆರೆ, ಢಣನಾಯಕನಪುರ, ಕರಡಿಗೆರೆ, ಭೈತರಹೊಸಹಳ್ಳಿ, ನಾಗಲಾಪುರ, ಚಿಕ್ಕಬೀರನಕೆರೆ ಸೇರಿದಂತೆ ಸುತ್ತ -ಮುತ್ತಲ 40 ಗ್ರಾಮಗಳ ಗ್ರಾಮಸ್ಥರು ನಡೆದುಕೊಳ್ಳುತ್ತಾರೆ. ಬೆಂಗಳೂರಿನ ಮಾಯಮ್ಮದೇವಿ ಗೆಳೆಯರ ಬಳಗವನ್ನು ಅಸ್ಥಿತ್ವಕ್ಕೆ ತಂದಿದ್ದಾರೆ.
ಯುವಕ ತಂಡದ ಕುರಿಬಾಂಡ್ ಖ್ಯಾತಿಯ ಕಲಾವಿದ ರಂಗಸ್ವಾಮಿ ಸ್ನೇಹಿತರು ಬೆಂಗಳೂರಿನ ಅಣ್ಣಮ್ಮದೇವತೆ ಜಾತ್ರೆವೇಳೆ ಕರೆಸುವ ಮುತ್ತಿನ ಪಲ್ಲಕ್ಕಿ ಉತ್ಸವವನ್ನು ಇಲ್ಲಿಗೂ ಕರೆಯಿಸಿ ಗ್ರಾಮದೇವತೆ ಉತ್ಸವವನ್ನು ವೈಭವದಿಂದ ಆಚರಿಸುತ್ತಾರೆ. ಮೂರು ದಿನ ಉತ್ಸವದಲ್ಲಿ ಜಾನಪದ ಸೊಗಡಿನ ಕಲಾವಿದ ಪ್ರಕಾರಗಳು ಪಾಲ್ಗೊಳ್ಳಲಿವೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭ ನಡೆಸುವುದಿಲ್ಲ. ವೈಭೋವೋಪೇತ ಅದ್ದೂರಿ ಧಾರ್ಮಿಕ ಪೂಜಾವಿಧಾನಗಳು, 26ರ ಮಂಗಳವಾರ ಧರ್ಮರಾಜ್ಯ ಪೌರಾಣಿಕ ನಾಟಕ ಅಭಿನಯಿಸಲಾಗುವುದು, ಎಲ್ಲಾ ಭಕ್ತರು ಪಾಲ್ಗೊಂಡು ದೈವಿಕೃಪೆಗೆ ಪಾತ್ರರಾಗಬೇಕು ಎಂದು ಕೋರಿದರು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶಿವಲಿಂಗಯ್ಯ, ಗುಡಿಗೌಡರಾದ ಶಿವಣ್ಣ, ಕಾರ್ಯದರ್ಶಿ ಮುದೇಗೌಡ, ಸಿ, ನಾಗರಾಜು, ಕುರಿಬಾಂಡ್ ಖ್ಯಾತಿಯ ರಂಗಸ್ವಾಮಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
