ತಿಪಟೂರು:
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಮದ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಮಾಯಾವತಿಯನ್ನು ಪ್ರಧಾನಿಯನ್ನಾಗಿ ಮಾಡುವುದು ನಿಶ್ಚಿತವೆಂದು ತುಮಕೂರು ಲೋಕಸಭಾ ಬಿ.ಎಸ್.ಪಿ ಅಭ್ಯರ್ಥಿ ಕೆ.ಸಿ.ಹನುಮಂತರಾಯ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಬಿ.ಎಸ್.ಪಿ ಪಕ್ಷದಿಂದ ಏಪ್ಡಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಮಾಯವತಿಯನ್ನು ಗೆಲ್ಲಿಸು ಉದ್ದೇಶದಿಂದ ತುಮಕೂರು ಲೋಕಸಭಾ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದು ನನಗೆ ಮತನೀಡಬೇಕು. ಉತ್ತರ ಪ್ರದೇಶದಲ್ಲಿ 4 ಬಾರಿ ಮುಖ್ಯಮಂತ್ರಿಯಾಗಿ ಸ್ಪಷ್ಠ ಮತ್ತು ಸಮಗ್ರ ಆಡಳಿತ ನೀಡಿದ ಮಾಯಾವತಿ ಅಕ್ಕವರು ಅಲ್ಲಿ ದಲಿತರಿಗೆ ಹಿಂದುಳಿದವರ ಪರ ವಾಗಿ ಹಲವಾರು ಯೋಜನೆಗಳನ್ನು ನೀಡಿದ್ದು ಅವರಿಗೆ ದಲಿತರ ಪರವಾಗಿ ಹೆಚ್ಚಿನ ಒಲವಿದ್ದು ಅವರನ್ನು ಗೆಲ್ಲಿಸಲು ನಾನು ತುಮಕೂರು ಜಿಲ್ಲೆಯಾದ್ಯಂತ ಪ್ರವಾಸನೀಡಿ ಮತಯಾಚಿಸುತ್ತಿದ್ದು ಮಾಯಾವತಿಯವರ ಬಗ್ಗೆ ಹೆಚ್ಚಿನ ಒಲವು ಕಂಡು ಬರುತ್ತಿದ್ದು ತುಮಕೂರು ಜಿಲ್ಲೆಯ ಜ್ವಲಂತ ಸಮಸ್ಯೆಯಾದ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕದ ವಿಭಾಗಿಯ ಸಂಯೋಜಕ ಶೋಲಯ್ಯಮಾತನಾಡಿ ಕೇಂದ್ರದ ಬಿ.ಜೆ.ಪಿ ಸರ್ಕಾರವು ದಲಿತ ವಿರೋದಿಯಾಗಿದೆ. ಮೈಸೂರಿನಲ್ಲಿ ನಡೆದ ಬಿ.ಎಸ್.ಪಿ ಸಮಾವೇಶದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಕರೆಕೊಟ್ಟಂತೆ ನಾನು ಈಗ ಬಡವರು, ದಲಿತರು, ಹಿಂದುಳಿದವರ ಮತ್ತು ಅಲ್ಪಂಖ್ಯಾತರನ್ನು ಹೆಚ್ಚು ಹೆಚ್ಚು ಭೇಟಿಮಾಡಿ ಅವರಿಗೆ ನಮ್ಮ ಸಾಧನೆಯನ್ನು ತಿಳಿಸಿ ಆನೆ ಗುರುತಿಗೆ ಹೆಚ್ಚಿನ ಮತವನ್ನು ನೀಡಬೇಕೆಂದು ಕಲ್ಪತರು ನಾಡಿನ ಮತದಾರರಿಗೆ ಕರೆನೀಡಿದರು.ಸುದ್ದಿಗೋಷ್ಠಿಯಲ್ಲಿ ತುಮಕೂರು ಬಿ.ಎಸ್.ಪಿ ಅಧ್ಯಕ್ಷ ದಾಸಪ್ಪ.ಬಿ, ನಗರ ಉಸ್ತುವಾರಿ ರುದ್ರಪ್ಪ, ತಿಪಟೂರು ತಾಲ್ಲೂಕು ಅಧ್ಯಕ್ಷ ಬಿ.ಕೆ.ರಾಮಯ್ಯ ಮುಖಂಡರಾದ ಶೆಟ್ಟಿಹಳ್ಳಿ ಶಿವಣ್ಣ, ಧರಣೀಶ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
