ಭರಮಸಾಗರ:
ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೇಲೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಹೊಣೆಗಾರಿಕೆ ಇದೆ ಎಂದು ಭರಮಸಾಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ|| ಮಹೇಶ್ಅಭಿಪ್ರಾಯ ಪಟ್ಟರು.
ಭರಮಸಾಗರ ಪ್ರಥಮದರ್ಜೆ ಸಕಾರಿ ಕಾಲೇಜಿನಲ್ಲಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಭರಮಸಾಗರ ಪತ್ರಕರ್ತರ ಸಂಘದಘಟಕ ಇವರ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಅಂಗವಾಗಿ ಜರುಗಿದ ಪ್ರಸ್ತುತ ಮಾಧ್ಯಮಗಳು ಮತ್ತು ಯುವ ಜನತೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ ಸವಾಲುಗಳು ಮತ್ತು ಸಮಸ್ಯೆಗಳನ್ನು ನಿಭಾಯಿಸುವಂತಹ ಶಕ್ತಿಯುತ ಮಾಧ್ಯಮವಾಗಿರುವ ಪತ್ರಿಕೆ, ಟಿ.ವಿ., ಸಾಮಾಜಿಕ ಜಾಲತಾಣಗಳು ಸಮಾಜದಲ್ಲಿಅಹಿತಕರ ಘಟನೆಗಳು ಉಂಟಾಗದಂತೆಜವಾಬ್ದಾರಿಯಿಂದಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿ ಯುವಜನರು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಬೆನ್ನು ಬಿದ್ದು, ಬದುಕುವುದನ್ನು ಕಲಿಯಬಾರದು. ಮಧ್ಯಮ ಗಳಿಗೆ ತಮ್ಮದೇಆದ ಜವಾಬ್ದಾರಿಗಳಿದ್ದು, ಸಮಾಜದ ಪರವಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಭರಮಸಾಗರ ಸಬ್ಇನ್ಸ್ಪೆಕ್ಟರ್ರಾಜುಅವರು ಮಾತನಾಡಿ, ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಪರವಾಗಿ ಸಾಕಷ್ಟು ಕಾನೂನು ಗಳು ಜಾರಿಯಲ್ಲಿದ್ದು, ಅವುಗಳನ್ನು ಅರ್ಥಮಾಡಿಕೊಂಡು ಕಾನೂನು ನೆರವು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದರಾಜ್ಯ ನಿರ್ದೇಶಕ ನರೇನಹಳ್ಳಿ ಅರುಣ್ಕುಮಾರ್ ಮಾತನಾಡಿ, ಶಾಂತಿ, ಸೌಹಾರ್ಧತೆಗಾಗಿ ಮಾಧ್ಯಮಗಳು ಕೆಲಸ ಮಾಡಬೇಕಾಗಿದೆ.ಸಮಾಜದ ಶಾಂತಿಗಾಗಿ ಹೊಣೆಗಾರಿಕೆಯಿಂದ ಮಾಧ್ಯಮಗಳು ಮತ್ತು ಪತ್ರಕರ್ತರುಕರ್ತವ್ಯ ನಿರ್ವಹಿಸಿದಾಗ ಉತ್ತಮ ಸಮಾಜ ನಿರ್ಮಾಣ ಮಾಡಬಹುದುಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದಅಧ್ಯಕ್ಷ ಹೆಚ್.ಲಕ್ಷ್ಮಣ್ ಮಾತನಾಡಿ, ಪತ್ರಕರ್ತರ ಮೇಲೆ ಬಹುದೊಡ್ಡ ಸಾಮಾಜಿಕ ಹೊಣೆಗಾರಿಕೆಇದ್ದು, ಜವಾಬ್ದಾರಿಯಿಂದಕರ್ತವ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಕನ್ನಡ ಸಂಪಿಗೆ ದಿನಪತ್ರಿಕೆಯ ಸಂಪಾದಕತಿಪ್ಪೇಸ್ವಾಮಿ ಸಂಪಿಗೆ, ಭರಮಸಾಗರ ಪತ್ರಕರ್ತರ ಸಂಘದ ಎನ್.ರಾಜು, ಮಂಜುನಾಥ್, ನಾಡಿಗೇರ್, ಪ್ರೋ.ಕೆ.ಸ್ಮಿತಾ, ಡಾ.ಪ್ರವೀಣ್ಕುಮಾರ್, ಪ್ರೋ.ಚಿದಾನಂದಪ್ಪ, ಡಾ. ವೀರೇಂದ್ರ, ಪ್ರೋ.ಮೇಘನಾ, ಪ್ರೋ.ಸೌಮ್ಯ, ಪ್ರೋ.ಸಂಗಮೇಶ, ಪ್ರೋ.ಬಸವನಗೌಡ, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
