ಡಾ.ವಿಷ್ಣುವರ್ಧನ್‍ ಹುಟ್ಟು ಹಬ್ಬ ಪ್ರಯುಕ್ತ ಹಾಲು ಬ್ರೆಡ್ ವಿತರಣೆ

ಚಳ್ಳಕೆರೆ

        ಕನ್ನಡ ಚಿತ್ರರಂಗದಲ್ಲಿ ಹಲವಾರು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ದಿವಂಗತ ಸಾಹಸ ಸಿಂಹ ವಿಷ್ಣುವರ್ಧನ್‍ರವರ ಜನ್ಮ ದಿನೋತ್ಸವ ಅವರ ಅಭಿಮಾನಿಗಳ ಸಂಘ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್, ಹಣ್ಣು ಹಂಚುವ ಮೂಲಕ ಸರಳವಾಗಿ ಆಚರಿಸಿತು.

        ಸಂಘದ ಅಧ್ಯಕ್ಷ ಬಿ.ರಾಮಾಚಾರ್ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳ ಕಾಲ ವಿಶೇಷ ಅಭಿನಯದ ಮೂಲಕ ಜನರ ಮನಸನ್ನು ಸೆಳೆದ ಹಿರಿಯ ಶ್ರೇಷ್ಠ ನಟ ವಿಷ್ಣುವರ್ಧನ್‍ರವರು. ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳ ಸಂಘದಿಂದ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲೂ ಸಹ ಅವರ ಹುಟ್ಟುಹಬ್ಬವನ್ನು ಸಂಘ ವಿವಿಧ ಸಮಾಜ ಸೇವೆಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಿದೆ ಎಂದರು.

        ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜಿ.ತಿಪ್ಪೇಸ್ವಾಮಿ, ಡಾ.ವೀರೇಶ್, ಆರ್.ಪ್ರಸನ್ನಕುಮಾರ್, ಫರೀದ್‍ಖಾನ್, ರಘುವೀರ್, ಕಾಶಿನಾಥ, ಕಲ್ಲೇಶ್, ಸತ್ಯನಾರಾಯಣ, ಸಂತೋಷಕುಮಾರ್, ಮಂಜುನಾಥ, ದೇವೇಂದ್ರಕುಮಾರ್,ಜಗದೀಶ್, ಶಿವಸ್ವಾಮಿ, ಜಬೀವುಲ್ಲಾ, ಅಭಿಲಾಷ್, ಮೂಡಲಗಿರಿಯಪ್ಪ ಮುಂತಾದವರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap