ಮೇಲೆ ತಳಕು, ಒಳಗೆ ಹುಳುಕಿನಂತ ಶಾಸಕ :ಆರ್.ಡಿ.ಬಾಬು

ತಿಪಟೂರು :

      ನಮ್ಮ  ತಾಲ್ಲೂಕಿನ ಶಾಸಕ ಬಿ.ಸಿ.ನಾಗೇಶ್ ಜನರಕಣ್ಣಿಗೆ ಒಳ್ಳೆಯವಂತೆ ಕಾಣುತ್ತಾರೆಯೇ ವಿನಹ ಒಳಗೆ ಹುಳುಕಿದೆ ಎಂದು ಮಾಜಿನಗರಸಭಾಅಧ್ಯಕ್ಷಆರ್.ಡಿ. ಬಾಬು ತಿಳಿಸಿದರು.

     ಇಂದು ಬೆಳಗ್ಗೆ ನಗರದ ವಿದ್ಯಾನಗರದಲ್ಲಿರಸ್ತೆಕಾಮಗಾರಿಯ ಪೂಜಾಕಾರ್ಯಕ್ರಮದ ವೇಳೆ ವಾರ್ಡ್ ನಂ 14ರ ನಗರಸಭಾ ಸದಸ್ಯ ಹಾಗೂ ಶಾಸಕರ ನಡುವೆ ಸ್ಥಳೀಯ ಜನಪ್ರತಿನಿಧಿಯಾದ ನನ್ನನ್ನು ಪೂಜಾಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದುಆರಂಭವಾದ ಮಾತಿನ ಚಕಮಕಿ ಬಗ್ಗೆ ನಡೆದಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕೊರೊನಾ ಸಂದರ್ಭದಲ್ಲಿ ಸರ್ಕಾರದಿಂದ ಬಂದ 3000 ಆಹಾರ ಕಿಟ್ಟ್‍ಗಳನ್ನು ಇನ್ನು ವಿತರಿಸಲು ಆಗಿಲ್ಲ ಕೇವಲ ಬಿ.ಜೆ.ಪಿ ಕಾರ್ಯಕರ್ತರಿಗೆ ಹಾಗೂ ಅವರು ಹೇಳುವ ಹಿಂಬಾಲಕರಿಗೆ ಹೋಟೆಲ್ ನೌಕರರುಗಳಿಗೆ ಕೊಡುತ್ತಿದ್ದಾರೆಯೇ ವಿನಃ ನಿಜವಾದ ಫಲಾನುಭವಿಗಳಿಗೆ ಕೊಟ್ಟಿಲ್ಲಇದರ ಬಗ್ಗೆ ತಾಲ್ಲೂಕುಕಛೇರಿಯಲ್ಲಿ ಕೇಳಿದರೆ ಶಾಸಕರುಯಾರಿಗೆ ಹೇಳುತಾರೋ ಅವರಿಗೆ ಮಾತ್ರ ವಿತರಿಸುತ್ತೇವೆಂದು ಅಧಿಕಾರಿಗಳು ತಿಳಿಸುತ್ತಾರೆ. ಇವರು ಕಿಟ್‍ಗಳನ್ನು ವಿತರಿಸುವ ವೇಳೆಗೆ ಕೊರೊನಾಓಡಿಹೋಗಿರುತ್ತದೆಎಂದು ಶಾಸಕರನ್ನು ಲೇವಡಿಮಾಡಿದರು.

     ಶಾಸಕರಾಗಿಆಯ್ಕೆಯಾದ 2.5 ವರ್ಷಗಳಿಂದ ನಗರದಲ್ಲಿಯಾವುದೇಕಾಮಗಾರಿಯನ್ನು ನಡೆಸಿಲ್ಲ ಇನ್ನೂ ಪ್ರತಿನಿತ್ಯ ನಗರದ ಹೃದಯ ಭಾಗದಲ್ಲಿಆಯ್ದು ಹೋಗಿರುವ ಬಿ.ಹೆಚ್.ರಸ್ತೆಯಲ್ಲಿಸಂಚರಿಸುವ ಪ್ರಯಾಣಿಕರಿಗೆಉಪಯೋಗಬೇಕಿದ್ದ ಬೀದಿದೀಪಗಳನ್ನು ಸರಿಪಡಿಸಲು ಸಾಧ್ಯವಾಗದೇದಿನನಿತ್ಯ ನಿತ್ಯ ನಡೆಯುವ ಅಪಘಾತಗಳಿಗೆ ನೇರ ಹೊಣೆಯಾಗಿದ್ದಾರೆಎಂದು ಆರೋಪಿಸಿದ ಅವರುಲಾಕ್‍ಡೌನ್ ಸಮಯದಲ್ಲಿ ಎತ್ತಿನಹೊಳೆ ಮತ್ತುರಾಷ್ಟ್ರೀಯ ಹೆದ್ದಾರಿಯ ಜೆ.ಸಿ.ಬಿಗಳಿಂದ ಪುಕ್ಕಟ್ಟೆಯಾಗಿತಮ್ಮತೋಟವನ್ನು ಕೆಲಸಮಾಡಿಸಿಕೊಂಡರು.

      ಇನ್ನೂ ಕೃಷಿ ಇಲಾಖೆಯ 50% ಪರಿಕರಗಳನ್ನು ತಮ್ಮತೋಟದಲ್ಲಿ ಬಳಸಿಕೊಂಡು ತಮ್ಮ ನೂರಾರುಎಕರೆಜಮೀನನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆಯೇ ಹೊರತುತಾಲ್ಲೂಕಿನಜನರ ಕಷ್ಟಕ್ಕೆ ಸ್ಪಂದಿಸಲಿಲ್ಲ. ತಮ್ಮ ಸ್ವಂತ ಹಣದಲ್ಲಿ ಕೇವಲ 10 ರೂ ಖರ್ಚು ಮಾಡಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಈ ಆಪಾದನೆಯನ್ನುಒಪ್ಪುವುದಿಲ್ಲವೆನ್ನುವುದಾದರೆ ದಿನಾಂಕ ಗೊತ್ತುಪಡಿಸಿ ಬರಲಿ ಎಂದು ಸವಾಲು ಹಾಕಿದರು.

     ಮಾಜಿತಾ.ಪಂ ಅಧ್ಯಕ್ಷ ಸುರೇಶ್ ಮಾತನಾಡಿಇದೇ ಶಾಸಕ ಸಮ್ಮಿಶ್ರ ಸರಕಾರ ವಿದ್ದಾಗ ತಾಲ್ಲೂಕಿನ ಇ.ಎಸ್.ಐ ಆಸ್ಪತ್ರೆ ಉದ್ಘಾಟನೆಗೆ ಹೆಸರು ಹಾಕಿ ಕರೆದಿದ್ದರು ಆಗಿನ ಮಂತ್ರಿಗಳಾದ ವೆಂಕಟರಮಣಪ್ಪನವರಜೊತೆ ಜಗಳವಾಡಿದ್ದನ್ನು ಈಗಾಗಲೇ ಮರೆತು ನಾನೋಬ್ಬ ಪ್ರಾಮಾಣಿಕಎಂದು ಬಿಂಬಿಸಿಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ಲವೇ. ಇನ್ನೂಇಂದಿನ ವಿಷಯಕ್ಕೆ ಸಂಬಂಧಿಸಿದಂತೆ ಯೋಗೀಶ್‍ಗೆಇನ್ನು ನಗರಸಭೆರಚನೆಯಾಗದಕಾರಣ ನಗರಸಭೆ ಸದಸ್ಯ ಸದಸ್ಯನಲ್ಲಎನ್ನುವುದಾದರೆ ನಾನು ಚುನಾಯಿತನಾಗಿತಾ.ಪಂ ಅಧ್ಯಕ್ಷನಾಗಿಯೂಕಾರ್ಯನಿರ್ವಹಿಸಿದ್ದಾನೆ ಆದರೆನೆನ್ನೆ ನಡೆದಕರಡಿಕೋಡಿಯಲ್ಲಿ ವಿದ್ಯುತ್‍ಸ್ಥಾವರಉದ್ಘಾಟನೆಗೆ ನನ್ನನುಕರೆದಿಲ್ಲ ನಾನೇನು ತಾ.ಪಂ ಸದಸ್ಯನಲ್ಲವೇಎಂದು ಶಾಸಕರ ಮೇಲೆ ಕಿಡಿಕಾರಿದರು.

     ನಾನು ಅಧಿಕಾರವನ್ನು ಬಯಸಿ ಜನಸೇವೆಗೆ ಇಳಿದವನಲ್ಲ, ನನಗೆ ಅಧಿಕಾರವನ್ನೇ ನಂಬಿಕೊಂಡಿಲ್ಲ ನಾನೊಬ್ಬ, ಇದರ ಬಗ್ಗೆ ಬೇಕಾದರೆ ನನ್ನಕ್ಷೇತ್ರದಜನರನ್ನೇ ಕೇಳಿ ಕೊರೊನಾ ಸಂದರ್ಭದಲ್ಲಿ ಎಷ್ಟು ಸಹಾಯ ಮಾಡಿದ್ದೇನೆ ಹೀಗಿರಬೇಕಾದರೆಇಲ್ಲಿ ಪ್ರತಿಯೊಂದಕ್ಕೂ ಸಾರ್ವಜನಿಕರು ನನಗೆ ಕರೆಮಾಡುತ್ತಾರೆಹೀಗಿರಬೇಕಾದರೆ ನನ್ನಕ್ಷೇತ್ರದಲ್ಲಿ ಏನು ಕಾರ್ಯವಾಗುತ್ತಿದೆಎಂದು ಕೇಳುವ ಹಕ್ಕಿಲ್ಲವೆ? ನಾನು ಇದನ್ನ ಪ್ರಶ್ನಿಸಿದ್ದಕ್ಕೆ ಶಾಸಕರು ನನ್ನ ಮೇಲೆ ಹಲ್ಲೆಯ ಪ್ರಯತ್ನವನ್ನು ಮಾಡಿರುವುದು ಎಷ್ಟು ಸರಿಎಂದು ಕೆ.ಪಿ.ಸಿ.ಸಿ ಸದಸ್ಯ ಹಾಗೂ ನಗರಸಭಾ ಸದಸ್ಯ ವಿ.ಯೋಗೀಶ್ ತಿಳಿಸಿದರು.

     ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಬಿಟ್ಟಿರುವ ಶಾಸಕರು ನಾವು ಯಾವುದೇ ಪಕ್ಷ ಭೇದ ಮರೆತು ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸುತ್ತಿದ್ದೇನೆ ಹೊರತು ಸ್ವಪಕ್ಷವಾಗಿ ಏನು ಮಾಡಿಲ್ಲ ಅಭಿವೃದ್ಧಿಕಾರ್ಯಗಳನ್ನು ಸಹಿಸದ ಕೆಲವರು ಇಂತಹ ಕೆಲಸವನ್ನು ಮಾಡುವುದು ಮಾಮೂಲುಎಂದಿದ್ದಾರೆ.

   ಇದರ ಬಗ್ಗೆ ಸಾಮಾಜಿಕಜಾಲತಾಣದಲ್ಲಿ ಹಲವಾರು ವಿಧವಾದ ಸಂಭಾಷಣೆಗಳು ನಡೆಯುತ್ತಿದ್ದುಅದರಲ್ಲಿಕೊರೊನಾ ಸಂದರ್ಭದಲ್ಲಿ ಶಾಸಕರುಆಸ್ಪತ್ರೆಯ ಹತ್ತಿರವಿದ್ದುಜನಸೇವೆಯನ್ನು ಮಾಡುವುದನ್ನು ಬಿಟ್ಟುಸಾಮಾಜಿಕಅಂತರವಿಲ್ಲದೇ ಗುಂಪು ಕಟ್ಟಿಕೊಂಡುರಸ್ತೆಅಭಿವೃದ್ಧಿ ಭೂಮಿ ಪೂಜೆಮಾಡುವದನ್ನು ಬಿಟ್ಟು ಈ ಸಂದರ್ಭದಲ್ಲಾದರು ಜನರ ಜೊತೆ ಬೆರೆಯಿರಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಾ.ಕಾ. ಬ್ಲಾಕ್‍ ಅಧ್ಯಕ್ಷ ಎಂ.ಎನ್.ಕಾಂತರಾಜು, ತಾ.ಪಂ ಅಧ್ಯಕ್ಷ ಶಿವಸ್ವಾಮಿ, ನಗರಾಧ್ಯಕ್ಷ ಪ್ರಕಾಶ್, ನಗರಸಭಾ ಹಾಲಿ ಮಾಜಿ ಸದಸ್ಯರು, ಮತ್ತಿತರರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link