ಕೊರಟಗೆರೆ

ದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದ್ದು ಮತ್ತೆ ಮೋದಿ ಪ್ರಧಾನಿಯಾಗುವುದು ನಿಶ್ವಿತ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.ಮಂಗಳವಾರ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿಜಿ.ಎಸ್ ಬಸವರಾಜು ಪರವಾಗಿ ಮನೆ ಮನೆ ಪ್ರಚಾರ ನಡೆಸಿ ಮಾತನಾಡಿದರು.
ಜಿ.ಎಸ್ ಬಸವರಾಜು ಸ್ಥಳೀಯ ಅಭ್ಯರ್ಥಿ,ಅವರಿಗೆ ಮತ ಹಾಕಬೇಕು. ಅದೇ ರೀತಿ ನಿಮ್ಮ ಮತ ದೇಶದ ಅಭಿವೃದ್ಧಿಗಾಗಿ ಇರುತ್ತದೆ. ಯಾವುದೇ ಸುಳ್ಳು ಆಶ್ವಾಸನೆಗೆ, ಯಾವುದೇ ಆಮಿಷಗಳಿಗೆ ಒಳಗಾಗದೇ ಬಿಜೆಪಿಗೆ ಮತ ಹಾಕಬೇಕು ಎಂದು ತಿಳಿಸಿದರು.
ಕಾಲು ನಡಿಗೆಯಲ್ಲಿಯೇ ಪಟ್ಟಣದ ಪ್ರಮುಖ ಬೀದಿಗಳಾದ ದೊಡ್ಡಪೇಟೆ, ಕೋಟೆ ಬೀದಿ, ಸಜ್ಜನರ ಬೀದಿ, ಗಣೇಶನ ಬೀದಿ, ರಾಮಾಂಜನೇಯ ಬೀದಿ, ಸುಣ್ಣಕಲ್ಲರ ಬೀದಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿಯ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಶಿವಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಪವನ್ಕುಮಾರ್, ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ತಿಮ್ಮಜ್ಜ, ವಾಸವಿ ಯುವಜನ ಸಂಘದ ಅಧ್ಯಕ್ಷ ಬದ್ರಿಪ್ರಸಾದ್, ಕಾರ್ಯದರ್ಶಿ ಜಿ. ಲಕ್ಷ್ಮೀ ಪ್ರಸಾದ್, ಪ.ಪಂ ಸದಸ್ಯ ಪ್ರದೀಪ್, ಮುಖಂಡರಾದ ನಟರಾಜು, ಚಂದ್ರಶೇಖರ್, ನಾಗರಾಜು ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
