ಖಾನಾಪುರ:
ಜಗತ್ತಿನಲ್ಲಿ ತಾಯಿಯನ್ನು ಮಿಂಚಿದ ದೇವರಿಲ್ಲ ಎಂಬ ಮಾತಿದೆ ಆದರೆ ಖಾನಾಪುರದಲ್ಲಿ ಇರುವ ಕೆಲ ನರರೂಪ ರಾಕ್ಷಸರು ಒಬ್ಬ ತಾಯಿಯನ್ನು ಅತಿ ಬರ್ಬರವಾಗಿ ಕೊಂದು ತಮ್ಮೊಳಗಿನ ರಕ್ಕಸತನ ಇನ್ನು ಕಡಿಮೆ ಯಾಗದಿದ್ದಾಗ ಾತಾಯಿಯ ಮಗನ ಕಣ್ಣು ಕಿತ್ತು ಕಿರಾತಕತನ ಪ್ರರ್ದಶಿಸಿದ್ದಾರೆ .
ಗುಂಡೇನಟ್ಟಿ ಗ್ರಾಮದ ಹೊವಲಯದ ತೋಟದ ಮನಯಲ್ಲಿ ಮಲಗಿದ್ದ ಮಹಿಳೆಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು, ಅವರ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕಣ್ಣು ಕಿತ್ತು ಹಾಕಿ ಭೀಭತ್ಸ ಘಟನೆ ನಡೆದಿದೆ.ಗುಂಡೇನಹಳ್ಳಿ ಕಾಳಮ್ಮನಗರದ ಅಂಗನವಾಡಿ ಸಹಾಯಕಿ ಜಯಶ್ರೀ ಕಲ್ಲಪ್ಪ ಬೆಳಗಾವಿ, ಅನುರಾಗ್ ಮೃತರಾದವರು.
ಮಧ್ಯರಾತ್ರಿಯಲ್ಲಿ ಗಾಡ ನಿದ್ರೆಯಲ್ಲಿದ ತಾಯಿ ಮಗನನ್ನು ತೋಟದ ಮನೆಯ ಹೆಂಚು ತೆಗೆದು ಒಳಗೆ ಇಳಿದ ದುಷ್ಕರ್ಮಿಗಳು ಜಯಶ್ರೀ ಅವರ ತಲೆಗೆ ನೇಗಿಲಿನಿಂದ ಹೊಡೆದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಜಯಶ್ರೀ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ ನಂತರ ವರ ಮಗನ ಕಣ್ಣು ಕಿತ್ತು ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/1512749549_KOS-ADAM-ADAMIN-.gif)