ತುರುವೇಕೆರೆ
ಪಟ್ಟಣದ ಗ್ರಾಮದೇವತೆ ಶ್ರೀ ಉಡುಸಲಮ್ಮ ದೇವಾಲಯದ ಮುಂಬಾಗದಲ್ಲಿ ತುಮಕೂರು ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡರ ಪರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ವ್ಯಾಪ್ತಿಯಲ್ಲಿ ಕಾರ್ಯಕರ್ತರೊಂದಿಗೆ ಮತ ಪ್ರಚಾರ ನಡೆಸಿದರು. ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಪ್ರಸನ್ನಕುಮಾರ್ ಮುಖಂಡರುಗಳಾದ ಚೌದ್ರಿ ರಂಗಪ್ಪ, ನಂಜುಂಡಪ್ಪ, ಶ್ರೀನಿವಾಸ್, ಶಿವರಾಜು, ವಿಜೇಂದ್ರಕುಮಾರ್, ಶಶಿಶೇಖರ್, ಯಜಮಾನ್ ಮಹೇಶ್, ಸುರೇಶ್, ನದೀಂ, ವೆಂಕಟೇಶ್ಕೃಷ್ಣಪ್ಪ, ಟಾಕೀಸ್ ಸತೀಶ್, ರಮೇಶ್, ಶಿವು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೋಂಡಿದ್ದರು.