ಸಿರುಗುಪ್ಪ
ಅಂಬೇಡ್ಕರ್ ವೃತ್ತದ ಹತ್ತಿರವಿರುವ ಅಂಬೇಡ್ಕರ್ ವರ ಪ್ರತಿಮೆ ಬಳಿ ಸಮೀರ್ ಎಂಬ ಮುಸ್ಲಿಂ ಯವಕನ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ನೋಡಿದ ಅಂಬೇಡ್ಕರ್ ಅಭಿಮಾನಿ ಬಳಗದ ಕಾರ್ಯಕರ್ತರು ಯುವಕನನ್ನು ಹಿಡಿದು ಥಳಿಸಿ ಹತ್ತರದ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.
ಈ ಸುದ್ದಿ ನಗರದೆಲ್ಲೆಡೆ ಹಬ್ಬಿದ್ದರಿಂದ ಠಾಣೆ ಬಳಿ ಅಂಬೇಡ್ಕರ್ ಅಭಿಮಾನಿ ಬಳಗದ ಕಾರ್ಯಕರ್ತರು ಜಮಾಯಿಸಿ ಕ್ಷಮಾಪಣೆಗೆ ಒತ್ತಾಯಿಸಿದ್ದಾರೆ.ಪೊಲೀಸರು ಸಮೀರನನ್ನು ಕರೆದೊಯ್ದು ಅಂಬೇಡ್ಕರ್ ಪ್ರತಿಮೆಗೆ ನೀರು ಹಾಕಿಸಿ ತೊಳೆಯಿಸಿ ಕೈಮುಗಿದು ಕ್ಷಮಾಪಣೆ ಕೇಳಿಸಿದ್ದಾರೆ ಎಂದು ವರದಿಯಾಗಿದೆ.
ಆದರೂ ಸುಮ್ಮನಾಗದ ಅಂಬೇಡ್ಕರ್ ಅಭಿಮಾನಿಗಳು ವೃತ್ತದ ಬಳಿ ಹೆದ್ದಾರಿಯಲ್ಲಿ ಟೈರಗಳಿಗೆ ಬೆಂಕಿ ಹಚ್ಚಿ ತಮ್ಮ ದೇವರಿಗೆ ಅಪಮಾನವಾಗಿದೆ ಎಂದು ಘೋಷಣೆ ಹಾಕಿ ರಸ್ತೆಯನ್ನು ಕೆಲಕಾಲ ಬಂದ್ ಮಾಡಿದ ಘಟನೆಯು ನಡೆದಿದೆ. ಇದರಿಂದ ನಗರದಲ್ಲಿ ಈಗ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/11/bheemrao-ambedkar-statue-50.gif)