ತಿಪಟೂರು :
ಜಿಲ್ಲೆಯ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರ ಗೆಲುವಿಗೆ ಪಣ ತೊಟ್ಟಂತಿರುವ ಮೈತ್ರಿ ನಾಐಕರಾದ ಷಡಕ್ಷರಿ ಮತ್ತು ಲೋಕೇಶ್ವರ್ ಹಗಲೂ ರಾತ್ರಿ ಎನ್ನದೇ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಶನಿವಾರ ಮಾಜಿ ಶಾಸಕ ಕೆ.ಷಡಕ್ಷರಿ ಹಾಲ್ಕುರಿಕೆ, ಮಣಿಕೆರೆ, ಸಾರ್ಥವಳ್ಳಿ, ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮನೆಮನೆಗೆ ತೆರಳಿ ಮತಯಾಚನೆ ಮಾಡಿದ ಈ ವೇಳೆ ಮಾತನಾಡಿದ ಅವರು ಕೋಮುವಾದಿ ಪಕ್ಷ ಬಿ.ಜೆ.ಪಿ ಪಕ್ಷವನ್ನು ಅಧಿಕಾರದಿಂದ ದೂರವಿಟ್ಟರೆ ಮಾತ್ರವೇ ದೇಶದ ಪ್ರಜಾತಂತ್ರ ವ್ಯವಸ್ಥೆ,
ಸಂವಿಧಾನ ಉಳಿಯುತ್ತದೆ ಎಂದು ಮತದಾದರರಿಗೆ ತಿಳಿಸಿದರು ಈ ವೇಳೆ ದೇವೇಗೌಡರ ಪರವಾಗಿ ಅಲೆಯಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಸ್ತುತ ಮುಖ್ಯಮಂತ್ರಿಯವರ ಅಭಿವೃದ್ಧಿ ಕಾರ್ಯಗಳು, ರೈತರ ಪರವಾಗಿ ನಡೆಯುತ್ತಿರುವ ಸರ್ಕಾರವಾದ್ದರಿಂದ ಮತ್ತು ಕೇಂದ್ರ ಮೋದಿ ಬರಿ ಸುಳ್ಳು ಆಸ್ವಾಸನೆಗಳಿಂದ ಜನರು ಅವರಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದು ನಮ್ಮ ಪಕ್ಷಕ್ಕೆ ಹೆಚ್ಚಿನ ಮತಗಳು ದೊರೆಯುತ್ತವೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು ದೇವೇಗೌಡರು ಹೆಚ್ಚು ಅಂತರದಿಂದ ಗೆಲ್ಲುತ್ತಾರೆಂದು ತಿಳಿಸಿದರು.ಇಂದು ನಗರದ ಗಾಂದಿನಗರ ಬಡಾವಣೆಯಲ್ಲಿ ಜೆ.ಡಿ.ಎಸ್. ಮುಖಂಡ ಲೋಕೇಶ್ವರ್ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ