ಕಲ್ಪತರು ನಾಡಿನ ಮಾನ ಹರಾಜು ಹಾಕಿದ ಶಾಸಕ ನಾಗೇಶ್ : ಮುರಳೀದರ್ ಹಾಲಪ್ಪ

ತಿಪಟೂರು
 
     ತಿಪಟೂರು ಶಾಸಕ ಬಿ.ಸಿ ನಾಗೇಶ್ ಅನ್ನದಾನಕ್ಕೆ ಹೆಸರಾದ ನಡೆದಾಡುವ ದೇವರು ಎಂದು ಹೆಸರಾಗಿರುವ ಕಲ್ಪತರು ನಾಡಿನ ಮಾನವನ್ನು ವಿಶ್ವಮಟ್ಟದಲ್ಲಿ ಹರಾಜು ಹಾಕಿದ ಅಪಕೀರ್ತಿಗೆ ಪಾತ್ರರಾಗುವುದಲ್ಲದೇ ಅನ್ನ ಕೊಡಿ ಎಂದು ಬಿ.ಜೆ.ಪಿ ಕಾರ್ಯಕರ್ತ 20% ಕಮಿಷನ್‍ಕೊಡು ಎಂಬುದು ಬಿ.ಜೆ.ಪಿಯ ಮಸ್ತಿತಿ ಎಂತಹದು ಎಂದು ಮತದಾರರೇ ತಿಳಿದುಕೊಳ್ಳಿ ಎಂದು ಕೆ.ಪಿ.ಸಿ.ಸಿ ವಕ್ತಾರ ಮುರುಳೀದರ್ ಹಾಲಪ್ಪ ತಿಳಿಸಿದರು.
     ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಚ್ಚತೆ, ಪ್ರಾಮಾಣಿಕರೆಂದು ಹೇಳಿಕೊಳ್ಳುವ ತಿಪಟೂರಿನ ಶಾಸಕ ಅವರದ್ದೇ ಪಕ್ಷದ ಕಾರ್ಯಕರ್ತ ಒಂದು ಹೊತ್ತಿನ ಅನ್ನವನ್ನು ಕೇಳಿದ್ದಕ್ಕೆ ನಾನು ಮಾಡಿಸಿಕೊಟ್ಟಿರುವ ಕೆಲಸದಲ್ಲಿ 20% ಕಮಿಷನ್ ನೀಡು ನಾನು ಆಹಾರವನ್ನು ಕೊಡುತ್ತೇನೆಂದು ಹೇಳಿಕೆ ನೀಡಿರುವುದು ನಾಚಿಕೆಯಾಗಬೇಕಾದ ಸಂಗತಿ. ಊಟಕೊಡಿಸುವುದಕ್ಕೆ ಈ ರೀತಿ ಕಮಿಷನ್ ಕೇಳುವ ಶಾಸಕರು ಇನ್ನು ಎಲ್ಲೆಲ್ಲಿ ಎಷ್ಟು ಕಮಿಷನ್ ಹೊಡೆದಿರಬಹುದು ಎಂಬುದನ್ನು ನೀವು ತಿಳಿಯಬೇಕು.
     ನಾನು ಪ್ರಾಮಾಣೀಕನೆಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುತ್ತಿರುವ ಶಾಸಕ ನೇರವಾಗಿ ತಾಲ್ಲೂಕಿನ ಮಾದ್ಯಮದಮುಂದೆ ಬರಲು ಧೈರ್ಯವಿಲ್ಲದೇ ಮನೆಯಲ್ಲಿಯೇ ಕುಳಿತಿದ್ದು ಎಲ್ಲೂ ಉತ್ತರಿಸದೇ ಇರುವುದು ಸಹ ಮೌನಂ ಸಮ್ಮತಿ ಲಕ್ಷಣಂ ಎಂಬುದು ಗೊತ್ತಾಗುತ್ತಿದೆ. ಪ್ರಾಮಾಣಿಕರೆಂದು ಹೇಳಿದರೆ ಸಾಲದು ಎಲ್.ಕೆ. ಆಡ್ವಾನಿರವರು ಹವಾಲ ಹಗರಣದ ಜೈನ್ ಡೈರಿಯಲ್ಲಿ ತಮ್ಮ ಹೆಸರು ಬಂದಿದ್ದಕ್ಕೆ ನೇರವಾಗಿ ರಾಜಿನಾಮೆ ನೀಡಿ ಶುದ್ಧಹಸ್ತರಾಗಿ ಮತ್ತೆ ಪಕ್ಷಕ್ಕೆ ಸೇರ್ಪಡೆಯಾದರು. ಬಿ.ಜೆ.ಪಿ ಶಾಸಕನಿಗೆ ಸ್ವಾಭಿಮಾನಿ ಎಂದು ಹೇಳಿಕೊಳ್ಳುವ ಇವರು ರಾಜೀನಾಮೆ ನೀಡಿ ಸೀತಾದೇವಿಯಂತೆ ಅಗ್ನಿಪರೀಕ್ಷೆ ಗೆದ್ದು ಬರಲಿ ಎಂದು ಆಗ್ರಹಿಸಿದ್ದಾರೆ.
      ಇದೇ ಸಂದರ್ಭದಲ್ಲಿ ತುಮಕೂರು ಕೆ.ಪಿ.ಸಿ.ಸಿ ಅಧ್ಯಕ್ಷ ರಾಮಕೃಷ್ಣಯ್ಯ ಮಾತನಾಡಿ ಶಾಸಕ ನಾಗೇಶ್‍ನ ಕೈನಲ್ಲಿ ಕೊರೊನಾ ಸಮಯದಲ್ಲಿ ಸೂಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೇ ತಮ್ಮ ಮಾನಸಿಕ ಸಿಮಿತವನ್ನು ಕಳೆದುಕೊಂಡು ತಾಲ್ಲೂಕಿನ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಎಡವಿದ್ದು ಸಾಮಾಜಿಕ ಜಾಲತಾಣದಲ್ಲಿ ಶಾಸಕ ಮತ್ತು ಸಸಂದ ಕಾಣಿಯಾಗಿದ್ದಾರೆಂದು ಬರುತ್ತಿರುವಾಗ ಈರೀತಿ ಮಾದ್ಯಮದಲ್ಲಿ ಬಂದಿರುವುದು ವಿಪರ್ಯಾಸವೆಂದರು.
      ಪತ್ರಿಕಾಗೋಷ್ಠಿಯಲ್ಲಿ ತಿಪಟೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕಾಂತರಾಜು ಮಾತನಾಡಿ ಮೊದಲಿನಿಂದಲು ಶಾಸಕ ಬಿ,ಸಿ ನಾಗೇಶ್ ತನ್ನ ಹೇಳಿಗೆಗೆ ದುಡಿದ ಕಾರ್ಯಕರ್ತರಿಗೆ ಬೆಲೆಯಿಲ್ಲ ನಮಗೆ ಏನಾದರು ಸಹಾಯ ಬೇಕು ಮತ್ತು ಯಾರಾರದರು ಬೆಳವಣಿಗೆ ಬರುತಿದ್ದಾರೆಂದು ತಿಳಿದರೆ ಅವನ ಮೇಲೆ ಇಲ್ಲದ ಆರೋಪ ಹೊರಿಸಿ ಅವನನ್ನು ಪಕ್ಷದಿಂದ ಹೊರಕಾಹುತ್ತಾರೆ. ನಾನು ಸಹ ಬಿ.ಜೆ.ಪಿ ಕಾರ್ಯಕತೃನಾಗಿದ್ದು ಪಕ್ಷವನ್ನು ಸಂಘಟಿಸಿ ನೊಂದು ಹೊರಬಂದಿದ್ದೇನೆಂದು ಆಕ್ರೋಷ ವ್ಯಕ್ತಪಡಿಸಿದರು.
     ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೇಸ್ ಓ.ಬಿ.ಸಿ ಅಧ್ಯಕ್ಷ ಪುಟ್ಟರಾಜು, ಜಿಲ್ಲಾಕಾರ್ಯದರ್ಶಿ ರುದ್ರೇಶ್, ಕೆ.ಪಿ.ಸಿ.ಸಿ ಹಾಗೂ ನಗರಸಭಾ ಸದಸ್ಯ ಯೋಗೀಶ್, ತಾ.ಪಂ ಅಧ್ಯಕ್ಷ ಶಿವಸ್ವಾಮಿ, ಸದಸ್ಯರಾದ ರವಿಕುಮಾರ್, ಸುರೇಶ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕಾಂತರಾಜು, ನಗರಾಧ್ಯಕ್ಷ ಪ್ರಕಾಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link