ಮಧುಗಿರಿ :
ಸರ್ಕಾರದ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಜನರ ಸಹಕಾರ ಅತ್ಯಗತ್ಯವಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಡಿ.ಲೋಹಿತ್ ತಿಳಿಸಿದರು.
ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಾಗರೀಕರು ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ವಸ್ತುಗಳ ಸಮಪರ್ಕವಾದ ವಿಲೇವಾರಿ ಮಾಡಬೇಕು ಅಸಮರ್ಪಕ ನೀರು ಪೂರೈಕೆಗೆ ಕಡಿವಾಣ ಹಾಕಬೇಕು.
ಸೊಳ್ಳೆಗಳಿಂದ ಹರಡುವ ರೋಗಗಳಾದ ಮಲೇರಿಯಾ, ಮೆದುಳು ಜ್ವರ, ಡೆಂಗ್ಯೂ ಜ್ವರ ಚಿಕುಂಗುನ್ಯಾ ಮತ್ತು ಆನೇಕಾಲು ರೋಗಗಳನ್ನು ತಡೆಗಟ್ಟಲು ಜನತೆಯು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಮಾತ್ರ ರೋಗಗಳನ್ನು ಹರಡದಂತೆ ಕ್ರಮ ಕೈಗೊಳ್ಳಬಹುದು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ರಮೇಶ್ ಬಾಬು ಮಾತಾನಾಡಿ ರಾಷ್ಟ್ರೀಯ ರೋಗವಾಹಕ ಆಶಿತ್ರ ರೋಗಗಳ ನಿಯಂತ್ರಣ ಕಾರ್ಯಕ್ರಮವು 2003ರಲ್ಲಿ ಜಾರಿಗೆ ಬಂದಿದ್ದು ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯಾ, ಮೆದುಳು ಜ್ವರ ಆನೇಕಾಲು ರೋಗಗಳಂತಹ ರೋಗವಾಹಕ ರೋಗಗನ್ನು ನಿಯಂತ್ರಣ ಮಾಡುವಲ್ಲಿ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತಿದೆ.
ಈ ಎಲ್ಲಾ ರೋಗಗಳು ಪರೋಪ ಜೀವಿಗಳಿಂದ ರೋಗವಾಹಕ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸುರಕ್ಷಿತವಾದ ನೀರು ಶೇಖರಣೆ, ಅನಾರೋಗ್ಯಕರ ಪರಿಸರದಿಂದ ರೋಗಗಳು ಹರಡುತ್ತವೆ ಆದ್ದರಿಂದ ನಾಗರೀಕರು ತಮ್ಮ ಸುತ್ತಮುತ್ತಲಾ ವಾತವರಣವನ್ನು ಕಲುಷಿತವಾಗದಂತೆ ನೋಡಿಕೊಂಡು ಸ್ವಚ್ಚತೆಯಿಂದ ಇರಬೇಕು ಎಂದರು.ಈ ಸಂಧರ್ಭದಲ್ಲಿ ಡಾ|| ಮಂಜುನಾಥ್ ಮಕ್ಕಳ ತಜ್ಞರು, ಪರಿಸರ ಅಭಿಯಂತರೆ ಸೌಮ್ಯ, ಆರೋಗ್ಯ ನಿರೀಕ್ಷಕ ಬಾಲಾಜಿ, ಪುರಸಭೆ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿವರ್ಗ ಆಶಾ ಕಾರ್ಯಕರ್ತೆಯರು ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
