ದಾವಣಗೆರೆ:
ಇತ್ತೀಚೆಗೆ ನವ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಬೊಸಿ ಕ್ರೀಡಾಕೂಟದಲ್ಲಿ ದಾವಣಗೆರೆಯ ಮಿಲ್ಲತ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಶಾಬಾಜ್ ಖಾನ್ ಪ್ರಥಮ ಬಹುಮಾನ ಪಡೆದಿದ್ದಾರೆ.
ಶಾಬಾಜ್ ಖಾನ್ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಧ್ಯಕ್ಷ ಜೆ.ಅಮಾನುಲ್ಲಾ ಖಾನ್ರವರ ಸುಪುತ್ರರಾಗಿದ್ದಾರೆ. ಪ್ರಥಮ ಬಹುಮಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿರುವ ಶಾಬಾಜ್ ಖಾನ್ಗೆ ಜೆ.ಅಮಾನುಲ್ಲಾ ಖಾನ್ ಅಭಿಮಾನಿ ಬಳಗದ ವತಿಂದ ಸನ್ಮಾನಿಸಿ ಅಭಿನಂದಿಸಾಲಾಯಿತು.
ಈ ವೇಳೆಯಲ್ಲಿ ಖಾದರ್ ಬಾಷಾ ಎ.ಶ್ರೀನಿವಾಸ್, ವೀರೇಶ್, ಧನಂಜಯ್, ಮೋಹಸಿನ್, ಬುತ್ತಿ ಆಜ್ಗರ್, ನಾಗರಾಜ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
