ನವಿಲು ರಕ್ಷಣೆಗೆ ಕೈ ಜೋಡಿಸಿದರೆ ಜಾನುವಾರುಗಳಿಗೆ ಉಚಿತ ಮೇವು ನೀಡಲಾಗುವುದು : ಸ್ವಾಮಿ ಜಪಾನಂದಜಿ

ಪಾವಗಡ

       ಹನುಮನ ಬೆಟ್ಟದ ನವಿಲುಧಾಮ ಸಂರಕ್ಷಣೆಗೆ ಕೈಜೋಡಿಸುವ ಗ್ರಾಮದ ರೈತರ ಹಸುಗಳಿಗೆ ಮೇವು ನೀಡುವುದಾಗಿ ಶ್ರೀ ರಾಮಕೃಷ್ಣ ಗ್ರಾಮಾಂತರ ಆರೋಗ್ಯ ಕೇಂದ್ರದ ಅಧ್ಯಕ್ಷರಾದ ಜಪಾನಂದ ಸ್ವಾಮಿ ತಿಳಿಸಿದರು.ಗ್ರಾಮಸ್ಥರಿಂದ ಸಂರಕ್ಷಿಸಲ್ಪಟ್ಟ ಹನುಮನ ಬೆಟ್ಟದ ನವಿಲು ಧಾಮದಲ್ಲಿ ವನ್ಯಪ್ರಾಣಿಗಳು ಮೇವು ನೀರಿಲ್ಲದೆ ವಲಸೆ ಹೋಗುವ ಅಪಾಯದ ಅಂಚಿಗೆ ಸಿಲುಕಿದ್ದವು. ಗ್ರಾಮಸ್ಥರ ನೆರವಿನೊಂದಿಗೆ ವನ್ಯಧಾಮದಲ್ಲಿನ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಕೃತಕ ನೀರಿನ ತೊಟ್ಟಿಗಳಿಗೆ ಇನ್ಫೋಸಿಸ್ ಸಹಯೋಗದಲ್ಲಿ, ಅಲ್ಲಿನ ಸ್ಥಳೀಯರ ಸಹಕಾರದಿಂದ ಪ್ರತಿದಿನ ಮೇವು, ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

        ಈ ಗ್ರಾಮದಲ್ಲಿ ಸುಮಾರು 150 ಕ್ಕೂ ಹೆಚ್ಚು ಹಸುಗಳಿದ್ದು, ರೈತರ ಪೂರ್ಣ ಮಾಹಿತಿ ಪಡೆಯಲಾಗಿದೆ. ಮೇವಿಲ್ಲದೆ ರೈತರು ಹಸುಗಳನ್ನು ಪೋಷಿಸಲು ದಿಕ್ಕು ತೋಚದಂತಾಗಿದ್ದು, ರೈತರ ನೆರವಿಗೆ ನಿಂತು, ಗ್ರಾಮದಲ್ಲಿ ಮೇವು ವಿತರಣೆ ಮಾಡಲಾಗುತ್ತದೆ ಎಂದು ಗ್ರಾಮದ ರೈತರಿಗೆ ಜಪಾನಂದ ಸ್ವಾಮೀಜಿ ಭರವಸೆ ನೀಡಿದರು.

          ಗ್ರಾಮದ ಹಿರಿಯರಾದ ಹನುಮಂತರಾಯಪ್ಪ ಮಾತನಾಡಿ ನಾವು ಆದೆಷ್ಟೋ ಪುಣ್ಯ ಮಾಡಿದ್ದೆವೆ ಕಾರಣ ಬರದಿಂದ ತತ್ತರಿಸಿದ ರೈತರು ತಮ್ಮ ಹಸುಗಳನ್ನು ಮಾರಾಟ ಮಾಡಲು ಬೀಡದೇ ರೈತರ ನೆರವಿಗೆ ನಿಂತು ಹಾಗೂ ಇಲ್ಲಿನ ನವಿಲು ದಾಮ ಸಂರಕ್ಷಣಿಗೆ ಕೈಜೋಡಿಸಿ ನವಿಲುಗಳಿಗೆ ಮೇವು ಮತ್ತು ನೀರು , ಹಸುಗಳಿಗೂ ಕೂಡ ಮೇವು ವಿತರಣಿ ಮಾಡಲು ಮುಂದಾಗಿರುವುದು ಗ್ರಾಮದ ಜನತೆಯಲ್ಲಿ ಸಂತಸ ಮನೆಮಾಡಿದೆ ಎಂದರು.

        ಈ ಸಂದರ್ಭದಲ್ಲಿ ಗ್ರಾಮದ ರೈತರಾದ ಆನಂದಕುಮಾರ್ , ಜೆ.ಅಕ್ಕಲಪ್ಪ ,ಓ.ರಾಜು , ರಾಮಕೃಷ್ಣ , ವೆಂಕಟೇಶಪ್ಪ , ಶಿವಲಿಂಗಪ್ಪ ,ವೀರಾಂಜಿ ,ಕೇಶವಾ , ಮುಸಲನ್ನ ,ಆರ್.ಎ.ಅಕ್ಕಲಪ್ಪ ,ಅಜೇಯಪ್ಪ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link