ಜಾರಕಿಹೊಳಿ ವಿರುದ್ಧ ಪಕ್ಷದಲ್ಲಿ ಭಾರೀ ಅಸಮಾಧಾನ

ಬೆಂಗಳೂರು

            ಪಕ್ಷದ ಚಟುವಟಿಕೆ ಮತ್ತು ಸಚಿವ ಸಂಪುಟ ಸಭೆಗಳಿಂದ ದೂರ ಉಳಿಯುತ್ತಿರುವ ಸಚಿವ ರಮೇಶ್ ಜಾರಕಿಹೊಳಿ ಮತ್ತು ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗದ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಪಕ್ಷದಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗಿದೆ.

             ಈ ವರ್ತನೆಗೆ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೂ ವಿರೋಧ ವ್ಯಕ್ತವಾಗಿದ್ದು, ಈ ಬೆಳವಣಿಗೆ ಸಮರ್ಥನೀಯವಲ್ಲ. ಇದಕ್ಕೆ ಈಗಿನಿಂದಲೇ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಇದು ಪಕ್ಷಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ಹೇಳಿದ್ದಾರೆ.

              ಇಂದು ನಡೆದ ಶಾಸಕಾಂಗ ಸಭೆಯಿಂದಲೂ ಇವರು ದೂರ ಇದ್ದರು. ಈ ಕುರಿತು ಸಭೆಯ ನಂತರ ಪ್ರತಿಕ್ರಯಿಸಿದ ಶಾಸಕಾಂಗ ನಾಯಕ ಸಿದ್ದರಾಮಯ್ಯ, ಶಾಸಕಾಂಗ ಸಭೆ, ಅಧಿವೇಶನಕ್ಕೆ ಸಚಿವ ರಮೇಶ ಜಾರಕಿಹೋಳಿ ಸೇರಿದಂತೆ ಕೆಲವರು ಗೈರು ಹಾಜರಾಗಿದ್ದಾರೆ. ವೈಯಕ್ತಿಕ ಕಾರಣದಿಂದ ರಮೇಶ ಜಾರಕಿಹೊಳಿ ಬಂದಿಲ್ಲ. ಗೈರು ಹಾಜರಾದವರು ಅನುಮತಿ ಪಡೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

             ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಪ್ರತ್ಯೇಕವಾಗಿ ಮಾತನಾಡಿ, ಸಚಿವ ಸಂಪುಟ ಸಭೆ, ಶಾಸಕಾಂಗ ಸಭೆಗಳಿಗೆ ಗೈರಾಗುತ್ತಿರುವ ಸಚಿವ ರಮೇಶ ಜಾರಕಿಹೊಳಿ ವರ್ತನೆಯನ್ನು ಪಕ್ಷ ಗಂಭೀರವಾಗಿ ಪರಿ ಗಣಿಸಿದೆ ಎಂದರು.

            ರಮೇಶ ಜಾರಕಿಹೊಳಿ ಸಂಪುಟ ಸಭೆಯಿಂದ ದೂರ ಉಳಿಯುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್ ಶಾಸಕಾಂಗ ಸಭೆಗೂ ಬೇರೆ ಕಾರಣ ನೀಡಿ ಬರುತ್ತಿಲ್ಲ. ಅವರ ಈ ವರ್ತನೆಯನ್ನು ಪಕ್ಷ ಗಂಭಿರವಾಗಿ ಪರಿಗಣಿಸುತ್ತದೆ ಎಂದು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap