ನೀರು ಪೂರೈಕೆಯಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ : ಎಲ್.ಕೆ.ಅತೀಕ್

ಪಾವಗಡ :-

      ಬರನಿರ್ವಹಣಿಯಲ್ಲಿ ಶುದ್ದಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ ಸಾಕಷ್ಟು ಅನುದಾನವಿದ್ದು ಬಳಕೆ ಮಾಡಿಕೋಳ್ಳುವಂತೆ ಪಂಚಾಯತ್ ರಾಜ್ ಇಲಾಖೆಯ ಪ್ರಾಧಾನ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್ ತಿಳಿಸಿದರು.

      ಬುದವಾರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಶುದ್ದಕುಡಿಯುವ ನೀರಿನ ಸಮಸ್ಯೆ ಮತ್ತು ನರೇಗ ಕಾಮಗಾರಿಗಳನ್ನು ವಿಕ್ಷಣಿಗಾಗಿ ಆರ್.ಹೋಸಕೋಟೆ ಗ್ರಾಮಕ್ಕೆ ಬೇಟಿ ನೀಡಿ ಶುದ್ದಕುಡಿಯುವ ನೀರು ಪೂರೈಕೆಗಾಗಿ ಖಾಸಗಿಯವರಿಂದ ಬಾಡಿಗೆಗೆ ಪಡೆದಾ ಬೋರೆಗಳ ಬಗ್ಗೆ ರೈತರಿಂದ ಮಾಹಿತಿ ಪಡೆದಿದ್ದು ,ಬೆಳೆ ಇಟ್ಟರೆ ನೀರು ಬಿಡಲು ಸಾದ್ಯವಿಲ್ಲ ಎಂದು ರೈತರು ತಿಳಿಸಿದ್ದು , ಗ್ರಾಮದಲ್ಲಿನ ಶುದ್ದಕುಡಿಯುವ ನೀರಿನ ಘಟಕಗಳ ನಿರ್ವಹಣಿಯ ಬಗ್ಗೆ ಮಾಹಿತಿ ಪಡೆದರು.

      ಕೋಡಮೋಡಗು ಗ್ರಾಮ ಪಂಚಾಯ್ತಿಯ ನೂತನ ಕಟ್ಟಡ ಪರಿಶೀಲಿಸಿ ಗುಣಮಟ್ಟದ ಕಟ್ಟದ ನಿರ್ಮಾಣಕ್ಕೆ ಹಣ ಅಗತ್ಯವಾದಲ್ಲಿ ನರೇಗ ಹಣ ಬಳಕೆ ಮಾಡಿಕೋಳ್ಳಲು ತಿಳಿಸಿದ ಅವರು ಬೈರಾಪುರ ಗ್ರಾಮದ ರೇಷ್ಮೆ ಬೆಳೆಯುವಾ ಘಟಕ್ಕೆ ಬೇಟಿ ನೀಡಿ ರೈತನಿಂದ ಮಾಹಿತಿ ಪಡೆದಾ ಕಾರ್ಯದರ್ಶಿಗಳು ಇಂತಹ ಬರಗಾಲದಲ್ಲಿ ಇಂತಹ ಸಂಮೃದ್ದವಾದ ಬೆಳೆ ಬೆಳೆಯುತ್ತಿರುವುದು ಸಂತಸ ತಂದಿದೆ ಎಂದರು.

     ಇದೇ ತಾಲ್ಲೂಕು ಮಟ್ಟದ ಆದಿಕಾರಿಗಳೊಂದಿಗೆ ಮಾತಬನಾಡಿದ ಅವರು ಯಾವುದೇ ಸಮಯದಲ್ಲಾದರೂ ಜನತೆಗೆ ಶುದ್ದಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕಾರ್ಯನಿರ್ವಹಿಸಬೇಕು ಕುಡಿಯುವ ನೀರಿಗಾಗಿ ಸಾಕಷ್ಠು ಅನುದಾನವಿದ್ದು ಸದ್ಬಳಕೆ ಮಾಡಿಕೋಳ್ಳಬೇಕೆಂದು ಆದಿಕಾರಿಗಳಿಗೆ ತಾಕೀತು ಮಾಡಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾದಿಕಾರಿ ಶುಭಕಲ್ಯಾಣ್ , ಜಿ.ಪಂ.ಉಪಕಾರ್ಯದರ್ಶಿ ಬಿ.ಕೃಷ್ಣಪ್ಪ , ತಾ.ಪಂ.ಕಾರ್ಯನಿರ್ವಹಣಾದಿಕಾರಿ ನರಸಿಂಹ್ಮಮೂರ್ತಿ , ಗ್ರಾಮೀಣ ಕುಡಿಯುವ ನೀರಿನ ವಿಭಾಗದ ನಾಗರಾಜು ಹಾಗೂ ವಿವಿಧ ಇಲಾಖೆಯ ಆದಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link