ಹರಪನಹಳ್ಳಿ ![](http://prajapragathi.com/wp-content/uploads/2019/04/4-12.gif)
![](http://prajapragathi.com/wp-content/uploads/2019/04/4-12.gif)
ತಾಲೂಕಿನ ಬೀಮ್ಲಾತಾಂಡದಲ್ಲಿ ಏ.17ರಂದು ನಡೆಯಲಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆಗಟ್ಟಿದ್ದಾರೆ.
ದಾವಣಗೆರೆ ತಾಲೂಕು ನೆರೆನಹಳ್ಳಿ ಗುಡ್ಡದಟ್ಟಿ ತಾಂಡ ನಿವಾಸಿ ಸುನೀಲ್ನಾಯ್ಕ್ ಅವರೊಂದಿಗೆ ಹರಪನಹಳ್ಳಿ ತಾಲೂಕಿನ ಬೀಮ್ಲಾತಾಂಡದ 16 ವರ್ಷ ವಯಸ್ಸಿನ ವಯಸ್ಸಿನ ಬಾನಮ್ಮ( ಹೆಸರುಬದಲಿಸಿದೆ ) ಅವರೊಂದಿಗೆ ವಿವಾಹ ನಿಗಧಿಯಾಗಿತ್ತು.
ಬುಧುವಾರ ಬೆಳಿಗ್ಗೆ 11 ಗಂಟೆಗೆ ಮಾಡುತ್ತಿದ್ದ ಮದುವೆಯನ್ನು ಅಧಿಕಾರಿಗಳು ತಡೆದಿದ್ದಾರೆ. ಮದುಮಗಳ ಮತ್ತು ವರನ ತಂದೆ-ತಾಯಿಯಂದಿರಿಂದ ತಪ್ಪೊಪ್ಪುಗೆ ಬರೆಸಿಕೊಂಡಿದ್ದಾರೆ.ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ ಸಂಯೋಜಕರು ದಾಳಿ ನಡೆಸಿದ್ದರು. ಹಲುವಾಗಲು ಪೊಲೀಸ್ ಠಾಣೆ ಪಿಎಸ್ಐ ಪ್ರಕಾಶ್, ಮೇಲ್ವಿಚಾರಕಿ ರೇಣುಕಮ್ಮ, ಸಂಯೋಜಕ ಬಿ.ಮಲ್ಲಿಕಾರ್ಜುನ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/4-12.gif)