ಶಿರಾ ತಾ. ಪ,ನಾ.ಹಳ್ಳಿಯಲ್ಲಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಶಿರಾ:

         ಐತಿಹಾಸಿಕ ಪ್ರಸಿದ್ಧ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ 18ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ವಿಜೃಂಭಣೆಯಿಂದ ನೆರವೇರಲಿದ್ದು, ಶ್ರೀಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮಿಜಿ ಭಾನುವಾರ ಶ್ರೀಓಂಕಾರೇಶ್ವರ ಸ್ವಾಮಿ ರಥಕ್ಕೆ ಕಳಶ ಪ್ರತಿಷ್ಟಾಪನೆ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

         ಜ.20.1.2019 ರಿಂದ ಫೆ.1ರವರೆಗೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಜ:21ರ ಬೆಳಿಗ್ಗೆ ಧರ್ಮ ಧ್ವಜ ಸ್ಥಾಪನೆ, ರಾತ್ರಿ 7.ಗಂಟೆಗೆ ವಿಘ್ನೇಶ್ವರನ ಉತ್ಸವ. ಜ. 22 ರಂದು ಹೋವಿನ ತೇರು, 23 ರಂದು ಕೈಲಾಸೋತ್ಸವ, 24 ರಂದು ನಂದೀಶ್ವರ ಉತ್ಸವ, 25 ರಂದು ಮಡಿತೇರು ಉತ್ಸವಗಳ ನಡೆಯಲಿವೆ.

       18ನೇ .ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟನೆ:ಜಿಲ್ಲಾ ಪಂಚಾಯತಿ ಮತ್ತು ಶ್ರೀಮಠದ ಸಹಯೋಗದೊಂದಿಗೆ ನಡೆಯುವ ವಸ್ತು ಪ್ರದರ್ಶನಕ್ಕೆ ಜ.26ರ ಶನಿವಾರ ಸಂಜೆ 6 ಗಂಟೆಗೆ ಚಾಲನೆ ದೊರೆಯಲಿದೆ. ಕೃಷಿ, ತೋಟಗಾರಿಕೆ, ಅರಣ್ಯ, ಆರೋಗ್ಯ, ಸಾರ್ವಜನಿಕ ಶಿಕ್ಷಣ, ಶಿಶು ಆಭಿವೃದ್ಧಿ, ಕಂದಾಯ, ಗ್ರಾಮೀಣಾಭಿವೃದ್ಧಿ, ಪಶುಪಾಲನೆ, ಜಲಾನಯನ ಇಲಾಖೆಗಳು ಸೇರಿದಂತೆ ಖಾಸಗಿ ಕಂಪನಿಗಳು, ಸ್ತ್ರೀಶಕ್ತಿ ಸಂಘದಗಳ ಕರಕುಶಲ ವಸ್ತು ಮಾರಾಟ ಮಳಿಗೆಗಳು ಈ ಪ್ರದರ್ಶನದಲ್ಲಿ ಇರಲಿವೆ. ತಂತ್ರಜ್ಞಾನ ಆಧಾರಿತ ಮತ್ತು ಇಸ್ರೇಲ್ ಮಾದರಿ ಆಧುನಿಕ ಕೃಷಿ ಪದ್ದತಿ ಸೇರಿದಂತೆ ರೈತ ಮತ್ತು ಜನಸಾಮಾನ್ಯರಿಗೆ ಹಾಗೂ ಮಹಿಳೆಯರಲ್ಲಿ ಜಾಗೃತಿ, ಅರಿವು ಮೂಡಿಸುವಂತ ವಸ್ತು ಪ್ರದರ್ಶನ ಇದಾಗಲಿದೆ.

ಕಲ್ಲುಗಾಲಿ ರಥೋತ್ಸವ:

       ಜ.26ರ ಶನಿವಾರ ರಾತ್ರಿ 11.ಗಂಟೆಗೆ ನಡೆಯುವ ಪ್ರಸಿದ್ಧ ಕಲ್ಲುಗಾಲಿ ರಥೋತ್ಸವ ಶ್ರೀನಂಜಾವಧೂತ ಸ್ವಾಮಿಜಿಗಳ ದಿವ್ಯ ನೇತೃತ್ವದಲ್ಲಿ ನೆರವೇರಲಿದ್ದು, ತಮಿಳು ನಾಡು, ಆಂದ್ರಪ್ರದೇಶ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಭಕ್ತರು ಈ ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಲ್ಲದೇ 7 ದಿನಗಳ ಕಾಲ ನಡೆಯುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಕೃಷಿ, ಅರಣ್ಯ, ತೋಟಗಾರಿಕೆ, ಪಶು, ಶಿಶು ಆಭಿವೃದ್ಧಿ, ಆರೋಗ್ಯ ಸೇರಿದಂತೆ ಇಲ್ಲಾ ಇಲಾಖೆಗಳ ಕಾರ್ಯಾಗಾರಗಳು ವಸ್ತು ಪ್ರದರ್ಶನ ವೇಧಿಕೆಯಲ್ಲಿ ಬೆಳಿಗ್ಗೆ 10.ಗಂಟೆಯಿಂದ ಸಂಜೆಯ ವರೆಗೆ ನಿತ್ಯ ನಡೆಯಲಿದ್ದು ಕೃಷಿತಜ್ಞರು, ಪ್ರಗತಿಪರ ರೈತರು, ವಿಜ್ಞಾನಿಗಳು ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ರೈತ ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾದ ಮಾಹಿತಿ ನೀಡಲಿದ್ದು, ರೈತರ ಬೆಳೆಗಳ ಬಗ್ಗೆ ನೇರ ಸಂವಾದದಲ್ಲಿ ಉತ್ತರ ನೀಡಲಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link